ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್: ಪಿ.ವಿ. ಸಿಂಧು, ಸಮೀರ್, ಕ್ವಾರ್ಟರ್ ಫೈನಲ್ ಪ್ರವೇಶ
Team Udayavani, Jan 22, 2021, 2:05 AM IST
ಬ್ಯಾಂಕಾಕ್: ಥಾಯ್ಲೆಂಡ್ ಓಪನ್ ಸೂಪರ್-1000 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತೀಯರ ಓಟ ಮುಂದುವರಿದಿದೆ. ಪಿ.ವಿ. ಸಿಂಧು ಮತ್ತು ಸಮೀರ್ ವರ್ಮ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಪುರುಷರ ಡಬಲ್ಸ್ನಲ್ಲಿ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ಕೂಡ ಎಂಟರ ಸುತ್ತಿಗೆ ಪಯಣ ಬೆಳೆಸಿದ್ದಾರೆ.
ಗುರುವಾರದ ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ ಪಿ.ವಿ. ಸಿಂಧು ವಿಶ್ವದ 92ನೇ ರ್ಯಾಂಕಿಂಗ್ ಆಟಗಾರ್ತಿ ಮಲೇಶ್ಯದ ಕಿಸೋನಾ ಸೆಲ್ವದುರೇ ಅವರನ್ನು ಕೇವಲ 35 ನಿಮಿಷಗಳ ಆಟದಲ್ಲಿ 21-10, 21-12 ಅಂತರದಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಅವರು ಥಾಯ್ಲೆಂಡಿನ ರಚನೋಕ್ ಇಂತಾನನ್ ಅಥವಾ ಕೊರಿಯಾದ ಸುಂಗ್ ಜಿ ಹ್ಯುನ್ ಅವರನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್ನಲ್ಲಿ ವಿಶ್ವದ 31ನೇ ರ್ಯಾಂಕಿಂಗ್ ಆಟಗಾರ ಸಮೀರ್ ವರ್ಮ ಅವರ ಕನಸಿನ ಓಟ ಮುಂದುವರಿದಿದೆ. ದ್ವಿತೀಯ ಸುತ್ತಿನಲ್ಲಿ ಅವರು ಡೆನ್ಮಾರ್ಕ್ನ ರಾಸ್ಮಸ್ ಜೆಮೆ ಅವರನ್ನು 21-12, 21-9 ಅಂತರದಿಂದ ಸುಲಭದಲ್ಲಿ ಮಣಿಸಿದರು. ಕ್ವಾರ್ಟರ್ ಫೈನಲ್ನಲ್ಲಿ ಭಾರತೀಯನ ಎದುರಾಳಿ ಡೆನ್ಮಾರ್ಕ್ನ ಆ್ಯಂಡ್ರೆಸ್ ಆ್ಯಂಟನ್ಸೆನ್.
ಆದರೆ ಎಚ್.ಎಸ್. ಪ್ರಣಯ್ ದ್ವಿತೀಯ ಸುತ್ತು ದಾಟುವಲ್ಲಿ ವಿಫಲರಾದರು. ಅವರು ಮಲೇಶ್ಯದ ಡ್ಯಾರನ್ ಲ್ಯೂ ವಿರುದ್ಧ 17-21, 18-21ರಿಂದ ಪರಾಭವಗೊಂಡರು.
ಡಬಲ್ಸ್ ಗೆಲುವು
ಪುರುಷರ ಡಬಲ್ಸ್ನಲ್ಲಿ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ಅಮೋಘ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಇವರು ಕೊರಿಯಾದ 7ನೇ ಶ್ರೇಯಾಂಕದ ಚೊ ಸೊಲ್ಯು-ಸೆವೊ ಸುಂಗ್ ಜೇ ವಿರುದ್ಧ 21-18, 23-21 ಅಂತರದ ರೋಚಕ ಜಯ ಸಾಧಿಸಿದರು. ಮಿಕ್ಸೆಡ್ ಡಬಲ್ಸ… ಸ್ಪರ್ಧೆಯಲ್ಲಿ ಸಾತ್ವಿಕ್ -ಅಶ್ವಿನಿ ಪೊನ್ನಪ್ಪ ಜೋಡಿ ಕೂಡ ಕ್ವಾ. ಫೈನಲ್ ಪ್ರವೇಶಿಸಿದ್ದಾರೆ. ಭಾರತದ ಈ ಜೋಡಿ ಜರ್ಮನ್ನ ಲ್ಯಾಮ್ಸ್ಫಸ್ ಮತ್ತು ಇಸಬೆಲ್ ಹೆರ್ಟ್ರಿಚ್ ಜೋಡಿಯನ್ನು 22-20, 14-21, 21-16 ಅಂತರದಿಂದ ಹಿಮ್ಮೆಟ್ಟಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
Police Raid: 346 ರೌಡಿಶೀಟರ್ಗಳ ಮನೆಗಳ ಮೇಲೆ ದಾಳಿ
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು