ಹಬ್ಬದ ಮೂಡ್‌ನ‌ಲ್ಲಿ ಸ್ಯಾಂಡಲ್‌ವುಡ್‌ ತಾರೆಯರು


Team Udayavani, Aug 31, 2022, 4:27 PM IST

tdy-14

ಇಂದು ನಾಡಿನೆಲ್ಲೆಡೆ ಗಣೇಶ ಚತುರ್ಥಿ ಸಂಭ್ರಮ. ವಿಘ್ನವಿನಾಶಕನನ್ನು ಮನೆಗೆ, ಏರಿಯಾಕ್ಕೆ ಬರ ಮಾಡಿಕೊಳ್ಳಲು ವಾರದಿಂದಲೇ ಜನ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಎರಡು-ಮೂರು ವರ್ಷಗಳಿಂದ ಕೋವಿಡ್‌ ಭಯ, ಲಾಕ್‌ಡೌನ್‌ ಆತಂಕದಿಂದ ಬ್ರೇಕ್‌ ತೆಗೆದುಕೊಂಡಿದ್ದ ಗಣೇಶ ಹಬ್ಬದ ಅದ್ಧೂರಿ ಸೆಲೆಬ್ರೇಶನ್‌ ಈ ವರ್ಷ ಮತ್ತೆ ಜೋರಾಗಿದ್ದು, ಚಂದನವನ ಬಹುತೇಕ ತಾರೆಯರು ಕೂಡ ವಾರದಿಂದಲೇ ಗಣೇಶ ಹಬ್ಬಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ ಈ ಬಗ್ಗೆ ಅವರೇ “ಉದಯವಾಣಿ’ ಜೊತೆ ಹಂಚಿಕೊಂಡಿದ್ದಾರೆ. 

ಗೌರಿ-ಗಣೇಶ ಹಬ್ಬ ನಮಗೆ ಪಾಲಿಗೆ ತುಂಬಾ ಸ್ಪೆಷಲ್‌ ಅನ್ನಬಹುದು. ನಮ್ಮ ಮನೆಯಲ್ಲಿ ಗಣೇಶನನ್ನು ಕೂರಿಸುವುದಿಲ್ಲ. ಆದರೆ, ಗಣೇಶನಿಗೆ ಇಷ್ಟವಾದ ತರತರಹದ ತಿಂಡಿತಿನಿಸುಗಳನ್ನು, ಹಣ್ಣು- ಕಾಯಿ ಎಲ್ಲವನ್ನೂ ಇಟ್ಟು, ನೈವೇದ್ಯ ಮಾಡಿ ಮನೆಮಂದಿ ಒಟ್ಟಾಗಿ ಸೇರಿ ಊಟ ಮಾಡುತ್ತೇವೆ. ಇನ್ನು ಗಣೇಶನಿಗೆ ಪ್ರಿಯವಾದ ಎಕ್ಕದ ಹೂವನ್ನು ತಂದು ಮಾಲೆ ಮಾಡಿ ಹಾಕಿ ಪೂಜಿಸುತ್ತೇವೆ. ನಮ್ಮ ಲೇಔಟ್‌ನಲ್ಲಿ ಗೌರಿ-ಗಣೇಶ ಹಬ್ಬ ಜೋರಾಗಿ ಯೇ ಇರುತ್ತೆ. ಗಣೇಶನನ್ನು ಕೂರಿಸುವುದನ್ನು ನೋಡುವುದೇ ಒಂದು ಸಂಭ್ರಮ.-ರಚನಾ ಇಂದರ್‌

ಎಲ್ಲ ಹಬ್ಬಗಳಿಗಿಂತ ನನಗೆ ಗಣೇಶ ಹಬ್ಬ ಅಂದ್ರೆ ತುಂಬ ಸ್ಪೆಷಲ್‌. ಅದಕ್ಕೆ ಕಾರಣ ಗಣೇಶ ಹುಟ್ಟಿದ ದಿನದಂದೇ ನನ್ನ ಗಂಡ ಕೂಡ ಹುಟ್ಟಿದ್ದು. ಹಾಗಾಗಿ ಮನೆಯಲ್ಲಿ ಒಂಥರಾ ಡಬಲ್‌ ಸೆಲೆಬ್ರೆಶನ್‌. ನನ್ನ ಮಗಳುಹುಟ್ಟಿದ ಎರಡು ವರ್ಷ ಅವಳು ತುಂಬ ಚಿಕ್ಕವಳಿದ್ದ ಕಾರಣ ಗಣೇಶ ಹಬ್ಬ ಅದ್ಧೂರಿಯಾಗಿ ಮಾಡಲಾಗಿರಲಿಲ್ಲ. ಆನಂತರ ಕೋವಿಡ್‌ ಭಯದಿಂದ ಹಬ್ಬ ಮಂಕಾಯ್ತು.ಆದ್ರೆ ಈ ವರ್ಷ ಮನೆಯಲ್ಲಿ ಎಲ್ಲರ ಜೊತೆ ಸೇರಿ, ಸಾಂಪ್ರದಾಯಿಕವಾಗಿ ಹಬ್ಬವನ್ನುಆಚರಿಸಲು ತಯಾರಿ ಮಾಡಿಕೊಂಡಿದ್ದೇನೆ. ಆದಷ್ಟು ಪರಿಸರ ಸ್ನೇಹಿಯಾಗಿ, ಹಬ್ಬದ ಮಹತ್ವನ್ನು ತಿಳಿದುಕೊಂಡು ಆಚರಿಸಿದರೆ, ಹಬ್ಬಕ್ಕೆ ನಿಜವಾದ ಅರ್ಥ ಬರುತ್ತದೆ.-ಶ್ವೇತಾ ಶ್ರೀವಾತ್ಸವ್‌

ವಿಶೇಷವಾಗಿ ಮಾಡುತ್ತೇವೆ. ಗೌರಿ ಹಬ್ಬದಂದು ಮಣ್ಣಿನ ಗೌರಿ ಮೂರ್ತಿಯನ್ನು ತಂದುಮನೆಯಲ್ಲಿ ಪ್ರತಿಷ್ಟಾಪಿಸಿ ಬೆಳಗ್ಗೆಯಿಂದಉಪವಾಸವಿದ್ದು, ಗೌರಿ ವ್ರತ ಮಾಡುತ್ತೇವೆ. ಸಂಜೆ ಮುತ್ತೈದೆಯರಿಗೆ ಬಾಗಿ ಕೊಡುತ್ತೇವೆ. ಇನ್ನು ಗಣೇಶ ಹಬ್ಬದಂದು ಮನೆಯಲ್ಲಿರುವಗಣೇಶನ ಮೂರ್ತಿಯನ್ನುಅಲಂಕರಿಸುತ್ತೇವೆ. ಗಣೇಶನಿಗೆಇಷ್ಟವಾದ ತಿಂಡಿಗಳನ್ನು ಮಾಡಿ ನೈವೇದ್ಯ ಸಮರ್ಪಿಸುತ್ತೇವೆ. -ಸೋನು ಗೌಡ

ಗೌರಿ-ಗಣೇಶ ಹಬ್ಬವನ್ನು ಗ್ರ್ಯಾಂಡ್‌ ಆಗಿ ಮಾಡುತ್ತೇವೆ. ಗೌರಿ ಹಬ್ಬದಂದು ಗೌರಿ ಪೂಜೆ ವ್ರತ ಮಾಡುತ್ತೇವೆ. ಅಕ್ಕಪಕ್ಕದ ಮನೆಯವರನ್ನು ಕರೆದುಬಾಗಿನ ಕೊಡುತ್ತೇವೆ. ಇನ್ನು ಗಣೇಶ ಹಬ್ಬದಂದುಗಣೇಶನನ್ನು ವಿವಿಧ ರೀತಿಯಲ್ಲಿ ಅಲಂಕರಿಸಿ, ಅವನಿಗೆ ಇಷ್ಟವಾದ ಕರಿಗಡುಬು, ಮೋದಕ, ಚಕ್ಕುಲಿ, ಪಾಯಸ ಹೀಗೆ ವಿವಿಧಖಾದ್ಯಗಳನ್ನು ಮಾಡಿ ನೈವೇದ್ಯಮಾಡುತ್ತೇವೆ. ಸಂಜೆ ವೇಳೆ ಕಡಲೆ ಹುಸಲಿ ಪ್ರಸಾದ ಮಾಡಿ ಎಲ್ಲರಿಗೂಹಂಚುತ್ತೇವೆ. ಗಣೇಶ ಹಬ್ಬವನ್ನುಸಾಂಪ್ರದಾಯಿಕವಾಗಿ ಆಚರಿಸುವುದರಲ್ಲಿ ತುಂಬ  ಖುಷಿಯಿದೆ.  -ರೂಪಿಕಾ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

tdy-7

ಗಂಗಾವತಿಯಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ಸಡಗರದ ಗಣೇಶ ಚತುರ್ಥಿ ಆಚರಣೆ

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

ವಕ್ರತುಂಡ ಮಹಾಕಾಯ; ಕರಾವಳಿಯ ಅತೀ ಹಳೆಯ ಆಯ್ದ ಸಾರ್ವಜನಿಕ ಗಣೇಶೋತ್ಸವಗಳ ವಿವರ ಇಲ್ಲಿದೆ

ವಕ್ರತುಂಡ ಮಹಾಕಾಯ; ಕರಾವಳಿಯ ಅತೀ ಹಳೆಯ ಆಯ್ದ ಸಾರ್ವಜನಿಕ ಗಣೇಶೋತ್ಸವಗಳ ವಿವರ ಇಲ್ಲಿದೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.