ಕ್ವಾರಂಟೈನ್ ಮುಗಿಸಿದ ಶಿಖರ್ ಧವನ್ ಪಡೆ
Team Udayavani, Jun 26, 2021, 6:50 AM IST
ಮುಂಬಯಿ: ಶ್ರೀಲಂಕಾ ಪ್ರವಾಸಕ್ಕೆ ತೆರಳಲಿರುವ ಶಿಖರ್ ಧವನ್ ನೇತೃತ್ವದ ಭಾರತೀಯ ಕ್ರಿಕೆಟಿಗರ 14 ದಿನಗಳ ಹೊಟೇಲ್ ಕ್ವಾರಂಟೈನ್ ಮುಗಿದಿದೆ. ಆಟಗಾರರಿಗೆಲ್ಲ ದೊಡ್ಡ ರಿಲೀಫ್ ಸಿಕ್ಕಿದೆ. ಎಲ್ಲರೂ ಜಿಮ್ಗೆ ತೆರಳಿ ಕಠಿನ ವ್ಯಾಯಾಮ ನಡೆಸಿದರು.
ದೇವದತ್ತ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ಕೃಷ್ಣಪ್ಪ ಗೌತಮ್, ಚೇತನ್ ಸಕಾರಿಯಾ, ವರುಣ್ ಚಕ್ರವರ್ತಿ, ನಿತೀಶ್ ರಾಣಾ ಮೊದಲಾದವರ ಚಿತ್ರ ಹಾಗೂ ಜಿಮ್ ಅಭ್ಯಾಸದ ವೀಡಿಯೋವನ್ನು ಬಿಸಿಸಿಐ ತನ್ನ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದೆ. ಇವರೆಲ್ಲರೂ ಭಾರತ ತಂಡದ ಹೊಸ ಮುಖಗಳು.
“ನಾನು ಕೊಠಡಿಯಿಂದ ಹೊರಬರುವ ಮುನ್ನ ನನ್ನ ಮುಖವನ್ನು ಅನೇಕ ಸಲ ಕನ್ನಡಿಯಲ್ಲಿ ನೋಡಿಕೊಂಡೆ. ಭಾರತದ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವುದು ನನ್ನ ಪಾಲಿಗೊಂದು ವಿಶೇಷ ಅನುಭವ’ ಎಂದು ರಾಜಸ್ಥಾನ್ ರಾಯಲ್ಸ್ ತಂಡದ ಸ್ಟಾರ್ ಪೇಸರ್ ಚೇತನ್ ಸಕಾರಿಯಾ ಈ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಕನಸು ನನಸಾಗುವ ಕ್ಷಣ
ಋತುರಾಜ್ ಗಾಯಕ್ವಾಡ್ ಮತ್ತು ನಿತೀಶ್ ರಾಣಾ ಕೂಡ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಇದು ಕನಸು ನನಸಾಗುವ ಕ್ಷಣ ಎಂಬುದು ಗಾಯಕ್ವಾಡ್ ಅನಿಸಿಕೆ. “ಮೊದಲ ಏಳು ದಿನ ಬಹಳ ಕಷ್ಟವಾಯಿತು. ಹೇಗೋ ಹೊಂದಿಕೊಂಡೆ. ತಂಡದ ಸದಸ್ಯರನ್ನು ನೋಡಲು, ಭಾರತದ ಜೆರ್ಸಿಯನ್ನು ಧರಿಸಲು ಕಾತರಗೊಂಡಿದ್ದೆ…’ ಎಂವರು ನಿತೀಶ್ ರಾಣಾ.
ಎಡಗೈ ಆರಂಭಕಾರ ಧವನ್ 6 ಪಂದ್ಯಗಳ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಭುವನೇಶ್ವರ್ ಉಪನಾಯಕರಾಗಿದ್ದು, ದ್ರಾವಿಡ್ ಕೋಚ್ ಆಗಿದ್ದಾರೆ.
ಏಕದಿನ ಪಂದ್ಯಗಳನ್ನು ಜು. 13, 16 ಮತ್ತು 18ರಂದು; ಟಿ20 ಪಂದ್ಯಗಳನ್ನು ಜು. 21, 23 ಮತ್ತು 25ರಂದು ಆಡಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
RCB ; ರವಿವಾರ ಕೆಕೆಆರ್ ವಿರುದ್ಧ ಈಡನ್ನಲ್ಲಿ ಗೋ ಗ್ರೀನ್ ಗೇಮ್
MUST WATCH
ಹೊಸ ಸೇರ್ಪಡೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!
Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್ ಟಿಆರ್ – ಪ್ರಶಾಂತ್ ನೀಲ್ ಸಿನಿಮಾ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ