ಶಿರ್ವ: ಬಚ್ಚಲು ಮನೆಗೆ ಬೆಂಕಿ… ಅಪಾರ ಹಾನಿ
Team Udayavani, Feb 7, 2023, 7:33 PM IST
ಶಿರ್ವ: ಇಲ್ಲಿನ ಗ್ರಾ.ಪಂ.ವ್ಯಾಪ್ತಿಯ ಪಂಜಿಮಾರು ಕೋಡುಗುಡ್ಡೆ ನಿವಾಸಿ ಲೀನಾ ಕುಟಿನ್ಹೊ ಅವರ ಬಚ್ಚಲು ಮನೆ ಸಹಿತ ಅಡುಗೆ ಕೋಣೆಗೆ ಮಂಗಳವಾರ ಸಂಜೆ ಬೆಂಕಿ ತಗಲಿ ಅಪಾರ ಹಾನಿ ಸಂಭವಿಸಿದೆ.
ಬಚ್ಚಲು ಮನೆಯಲ್ಲಿ ಹಾಕಿದ್ದ ಬೆಂಕಿ ಅಡುಗೆ ಕೋಣೆಗೂ ವ್ಯಾಪಿಸಿದ್ದು ಸಂಪೂರ್ಣ ಸುಟ್ಟುಹೋಗಿದೆ.ಬಚ್ಚಲುಮನೆಯಯಲ್ಲಿದ್ದ ತೆಂಗಿನಕಾಯಿ, ಕಟ್ಟಿಗೆ ಮತ್ತಿತರ ಸಾಮಾನು ಸರಂಜಾಮು ಸುಟ್ಟು ಕರಕಲಾಗಿದೆ.
ಅಡುಗೆ ಕೋಣೆಯಿಂದ ಮನೆಗೂ ಹಬ್ಬಿದ ಬೆಂಕಿಯ ಕೆನ್ನಾಲಗೆಯಿಂದ ಭಾಗಶ ಮನೆಗೂ ಹಾನಿ ಸಂಭವಿಸಿದೆ.
ಶಿರ್ವ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಆರ್.ಪಾಟ್ಕರ್ ಮತ್ತು ಸ್ಥಳೀಯರಾದ ಜೆಸಿಂತಾ, ವೈಲೆಟ್ ಕ್ಯಾಸ್ತಲಿನೊ, ಮಂಜುನಾಥ್ ಮತ್ತಿತರರು ಸೇರಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದರು. ಉಡುಪಿಯ ಅಗ್ನಿಶಾಮಕ ದಳದ ಅಧಿಕಾರಿ ಸತೀಶ್ .ಎನ್ ನೇತ್ರತ್ವದಲ್ಲಿ ಸಿಬ್ಬಂದಿ ಬೆಂಕಿಯನ್ನು ತಹಬಂದಿಗೆ ತರಲು ಯಶಸ್ವಿಯಾಗಿದ್ದಾರೆ. ಶಿರ್ವ ಪೊಲೀಸ್ ಠಾಣೆಯ ಎಎಸೈ ವಿವೇಕ್ ಮತ್ತು ಸಿಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ