ಸರ್ಕಾರ ರಚನೆಗೆ ಬಹುಮತ ಇದೆ; ಶಿವಸೇನಾ, ಎನ್ ಸಿಪಿ, ಕಾಂಗ್ರೆಸ್ ನಿಂದ ರಾಜ್ಯಪಾಲರಿಗೆ ಮನವಿ
Team Udayavani, Nov 25, 2019, 12:57 PM IST
ಮುಂಬೈ: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಕಾನೂನು ಸಮರ ಒಂಡೆಡೆ ನಡೆಯುತ್ತಿದ್ದು, ಮತ್ತೊಂದೆಡೆ ಶಿವಸೇನಾ, ಎನ್ ಸಿಪಿ ಮತ್ತು ಕಾಂಗ್ರೆಸ್ ಸರ್ಕಾರ ರಚಿಸುವ ಬಗ್ಗೆ ಸೋಮವಾರ 162 ಶಾಸಕರ ಸಹಿಯುಳ್ಳ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದೆ ಎಂದು ವರದಿ ತಿಳಿಸಿದೆ.
ಎನ್ ಸಿಪಿಯ ಅಜಿತ್ ಪವರ್ ಅವರ ಪ್ರಕಾರ ತಮ್ಮ ಪಕ್ಷ ಬಿಜೆಪಿ ಜತೆಗಿದೆ ಎಂದು ತಿಳಿಸಿದ್ದು, 54 ಶಾಸಕರಲ್ಲಿ 51 ಎನ್ ಸಿಪಿ ಶಾಸಕರ ಸಹಿಯನ್ನು ರಾಜ್ಯಪಾಲರಿಗೆ ನೀಡಿರುವ ಪತ್ರದಲ್ಲಿ ನೀಡಲಾಗಿದೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಮ್ಮ ಮೂರು ಪಕ್ಷಗಳಿಗೂ ಸರಕಾರ ರಚಿಸುವಷ್ಟು ಬಹುಮತ ಇದೆ ಎಂದು ರಾಜ್ಯಪಾಲರಿಗೆ ನೀಡಿರುವ ಪತ್ರದಲ್ಲಿ ತಿಳಿಸಿರುವುದಾಗಿ ವರದಿ ವಿವರಿಸಿದೆ. ಶಿವಸೇನಾದ 63 ಶಾಸಕರ(ಪಕ್ಷೇತರರು ಸೇರಿ) ಸಹಿ, ಕಾಂಗ್ರೆಸ್ ಪಕ್ಷದ 44 ಹಾಗೂ ಎನ್ ಸಿಪಿಯ 51 ಶಾಸಕರ ಸಹಿ, ಸಮಾಜವಾದಿ ಪಕ್ಷ ಕೂಡಾ ಈ ಮೂರು ಪಕ್ಷಗಳ ಜತೆ ಕೈಜೋಡಿಸಿದ್ದು, ಇಬ್ಬರು ಶಾಸಕರು ಸಹಿ ಹಾಕಿರುವ ಪತ್ರವನ್ನು ರಾಜ್ಯಪಾಲರಿಗೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
40ಸಾವಿರ ಕೋಟಿ ಕೇಂದ್ರಕ್ಕೆ ಕಳುಹಿಸಲು CM ಆಗಿದ್ರು! ಹೆಗಡೆ ಹೇಳಿಕೆಗೆ ಫಡ್ನವೀಸ್ ಹೇಳಿದ್ದೇನು
ಶಿವಸೇನೆ ಎಂದಿಗೂ ಹಿಂದುತ್ವ ಬಿಡಲ್ಲ, ಬಿಡಲ್ಲ!: ಸಿಎಂ ಉದ್ಧವ್
ಪ್ರೋ ಟೆಮ್ ಸ್ಪೀಕರ್ ಬದಲು; ಮಹಾ ಸರ್ಕಾರದ ವಿರುದ್ಧ ಸುಪ್ರೀಂ ಮೆಟ್ಟಿಲೇರುತ್ತೇವೆ; ಬಿಜೆಪಿ
ಕಿರಿಯ ಸಹೋದರನಿಗೆ ಮೋದಿ ಸಹಕಾರ ನೀಡಬೇಕು: ಶಿವಸೇನೆ
ಮಹಾರಾಷ್ಟ್ರದಲ್ಲಿ ಅಜಿತ್ ಗೆ ಡಿಸಿಎಂ ‘ಪವರ್’: ಪ್ರಮಾಣವಚನಕ್ಕೆ ಡೇಟ್ ಫಿಕ್ಸ್