ತುಳು ರಂಗಭೂಮಿಯಲ್ಲಿ ಬೆರಗು ಸೃಷ್ಟಿಸಿದ “ಶಿವದೂತೆ ಗುಳಿಗೆ’! ರಂಗ ವೇದಿಕೆಯಲ್ಲಿ ಸಂಚಲನ

ದ್ವಿಶತಕದತ್ತ ಕಾಲಿಟ್ಟ ತುಳುವಿನ ವಿಭಿನ್ನ ನಾಟಕ

Team Udayavani, Mar 10, 2022, 1:05 PM IST

ತುಳು ರಂಗಭೂಮಿಯಲ್ಲಿ ಬೆರಗು ಸೃಷ್ಟಿಸಿದ “ಶಿವದೂತೆ ಗುಳಿಗೆ’!

ಮಹಾನಗರ : ರೂಪೊಡು ಕರ್ಗಂಡ ಕರಿಯೆ… ಧರ್ಮೊನು ದಂಟ್‌ಂಡ ಕೆರ್‌ವೆ.. ಮುಕ್ಕಣ್ಣ ಮೆಯಿಜತ್ತಿ ಬೆಗರ್‌.. ಉಂಡಾಂಡ್‌ ಸತ್ಯೊದ ತುಡರ್‌.. ಬೆಮ್ಮೆರೆ ಸೃಷ್ಟಿ ಗುಳಿಗನ ದಿಟ್ಟಿ ಮಾಮಲ್ಲ ಶಕ್ತಿ… ಶಿವದೂತೆ ಗುಳಿಗೆ..’

ತುಳು ರಂಗಭೂಮಿಯಲ್ಲಿ ಯಾರ ಊಹೆಗೂ ನಿಲುಕದೆ ಕ್ಷಿಪ್ರ ಸಮಯದಲ್ಲಿ ದಾಖಲೆಯ ಪ್ರದರ್ಶನದ ಮೂಲಕ ತುಳುನಾಡಿನಾದ್ಯಂತ ಮನೆಮಾತಾದ ನಾಟಕ “ಶಿವದೂತೆ ಗುಳಿಗೆ’. ತುಳು ರಂಗಭೂಮಿಯ ನಿಗದಿತ ಚೌಕಟ್ಟನ್ನು ಮೀರಿ, ಕಾಮಿಡಿ ಲೆಕ್ಕಾಚಾರವನ್ನೂ ಬದಿಗಿರಿಸಿ ವಿಜಯ್‌ ಕುಮಾರ್‌ ಕೊಡಿಯಾಲಬೈಲು ನಿರ್ದೇಶನದಲ್ಲಿ ಸೃಷ್ಟಿಯಾದ “ಶಿವದೂತೆ ಗುಳಿಗೆ’ ರೋಮಾಂಚನಗೊಳಿಸಿದ ಬಗೆ ಅನನ್ಯ.

2020 ಜ. 2ರಂದು ಮೊದಲ ಪ್ರದರ್ಶನ ಕಂಡ ಶಿವದೂತೆ ಗುಳಿಗೆ ಕಳೆದ ವರ್ಷ ಎ. 3ರಂದು ಎಕ್ಕೂರಿನಲ್ಲಿ 100ನೇ ಪ್ರದರ್ಶನ ಕಂಡಿತ್ತು. ಇದೀಗ ನಾಟಕ 200ನೇ ದಿನದ ಪ್ರದರ್ಶನ, ಸಂಭ್ರಮಾಚರಣೆ ಮಾ. 12ರಂದು ಮಂಗಳೂರಿನ ಕೋಡಿಕಲ್‌ ಆಲಗುಡ್ಡೆಯಲ್ಲಿ ನಡೆಯಲಿದೆ.

ರಂಗ ವೇದಿಕೆಯಲ್ಲಿ ಸಂಚಲನ!
ತುಳುನಾಡಿನ ಕಾರಣಿಕ ಶಕ್ತಿ ಗುಳಿಗನ ಹುಟ್ಟು-ಬದುಕು, ಶಕ್ತಿಯ ನೆಲೆಯನ್ನು ತುಳುರಂಗಭೂಮಿಯ ಪರಿಧಿಯಲ್ಲಿ ನಿರೀಕ್ಷೆಗೂ ಮೀರಿದ ಸ್ವರೂಪದಲ್ಲಿ ಪ್ರದರ್ಶನ ನೀಡಿದ ಬಗೆ ಅದ್ವಿತೀಯ. ಹಿಂದೆ ಯಕ್ಷಗಾನದಲ್ಲಿ “ಸೀನು ಸೀನರಿ’ ಎಂಬ ಪರಿಕಲ್ಪನೆ ಬಹುದೊಡ್ಡ ಸುದ್ದಿಯಾದ ಮಾದರಿಯಲ್ಲಿಯೇ ತುಳು ರಂಗಭೂಮಿಯಲ್ಲಿ ನಾನಾ ಬಗೆಯ ಸೀನು ಸೀನರಿ, ಸೊಗಸಾದ ಸೆಟ್‌ನಲ್ಲಿ ಈ ನಾಟಕ ರೂಪಿಸಿರುವ ಶೈಲಿ ಅದ್ಭುತ, ರೋಮಾಂಚಕ. ಶಿವಪಾರ್ವತಿ ವಿರಾಜಮಾನರಾಗುವ ಕೈಲಾಸ ಪರ್ವತ, ಶೇಷಶಯನ ವಿಷ್ಣುವಿನ ಕ್ಷೀರಸಾಗರವನ್ನು ಬಿಂಬಿಸುವ ದೃಶ್ಯಗಳು, ನೆಲವುಲ್ಲ ಸಂಕೆಯೆ ಅಬ್ಬರ ಇತ್ಯಾದಿ ಪರಿಕಲ್ಪನೆಗಳು ರಂಗ ವೇದಿಕೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

“ಗುಳಿಗ’ನಾಗಿ ಅಭಿನಯಿಸಿದ ಕಿರುತೆರೆ ನಟ ಸ್ವರಾಜ್‌ ಶೆಟ್ಟಿ ನಟನೆ ಎಲ್ಲೆಡೆ ಶಹಬ್ಟಾಸ್‌ಗಿರಿ ಪಡೆದಿದೆ. ರಮೇಶ್‌ ಕಲ್ಲಡ್ಕ, ರಜಿತ್‌ ಕದ್ರಿ, ನಿತೇಶ್‌, ಪ್ರೀತೇಶ್‌, ವಿನೋದ್‌ರಾಜ್‌ ಕೋಕಿಲ, ವಿಶಾಲ್‌ರಾಜ್‌ ಕೋಕಿಲ, ಜಯರಾಮ್‌, ಸಾಗರ್‌ ಮಡಂತ್ಯಾರು, ಸುದರ್ಶನ್‌, ವಸಂತ್‌, ರಕ್ಷಿತಾ ಸಹಿತ ಹಲವರ ಪಾತ್ರ ನಾಟಕಕ್ಕೆ ಹೊಸ ಸ್ವರೂಪ ನೀಡಿದೆ. ಪೂರ್ವಮುದ್ರಿತಗೊಳಿಸಿರುವ ನಾಟಕದ ಸಂಭಾಷಣೆ, ಅದರಲ್ಲಿ ಹಿರಿಯ ಕಲಾವಿದರ ಧ್ವನಿ ಗುಳಿಗನ ನಾಟಕಕ್ಕೆ ಆಕರ್ಷಣೆ ಒದಗಿಸಿದೆ.

ತುಳುವ ಮಣ್ಣಿನ ಕಂಪು ಪಸರಿಸಿದ “ಗುಳಿಗ’!
ಎ.ಕೆ. ವಿಜಯ್‌ ಕೋಕಿಲ ಅವರ ಸಂಗೀತ ರಂಗಾಸಕ್ತರ ಮನ ಸೆಳೆಯುತ್ತಿದೆ. ಪಟ್ಲ ಸತೀಶ್‌ ಶೆಟ್ಟಿ ಅವರ ಧ್ವನಿಯಲ್ಲಿ ಮೂಡಿಬಂದ “ರೂಪೊಡು ಕರ್ಗಂಡ ಕರಿಯೆ.. ಶಿವದೂತೆ ಗುಳಿಗೆ..’ ಹಾಡು,ದೇವದಾಸ್‌ ಕಾಪಿಕಾಡ್‌ ಅವರ “ಆರತಿ.. ಆರತಿ.. ದೂಪೊದಾರತಿ’ ಹಾಡು, ರವೀಂದ್ರ ಪ್ರಭು, ಡಾ| ವೈಷ್ಣವಿ ನರಸಿಂಹ ಕಿಣಿ ಹಿನ್ನೆಲೆ ಗಾಯನ ಮತ್ತೆ ಮತ್ತೆ ಕೇಳಿಸುವಂತೆ ಮಾಡುತ್ತಿದೆ.

ಕನ್ನಡ-ಮಲಯಾಳದಲ್ಲಿಯೂ “ಶಿವದೂತೆ ಗುಳಿಗೆ’!
ತುಳುರಂಗಭೂಮಿಯಲ್ಲಿ ಚರಿತ್ರೆ ಬರೆಯುವ ಸಾಹಸವನ್ನು ಶಿವದೂತೆ ಗುಳಿಗೆ ಮಾಡುತ್ತಿದೆ. ಬೇರೆ ಜಿಲ್ಲೆ, ರಾಜ್ಯದಲ್ಲಿಯೂ ಪ್ರದರ್ಶನಕ್ಕೆ ಆಹ್ವಾನ ಬಂದಿದೆ. ಇದಕ್ಕಾಗಿ ನಾಟಕವನ್ನು ಕನ್ನಡ, ಕೇರಳ ಭಾಗಕ್ಕೆ ಮಲಯಾಳ ಭಾಷೆಗೆ ಬದಲಾಯಿಸಿ ಪ್ರದರ್ಶಿ ಸ ಲು ನಿರ್ಧರಿಸಲಾಗಿದೆ. ದುಬಾೖ ಸಹಿತ ವಿದೇಶದಲ್ಲಿಯೂ ಪ್ರದರ್ಶನಕ್ಕೆ ಆಹ್ವಾನ ಬಂದಿದೆ. ಹೀಗಾಗಿ 500ನೇ ಪ್ರದರ್ಶನವನ್ನು ಅತೀ ಬೇಗನೆ ಮಾಡಲಿದ್ದೇವೆ. ಮುಂದೆ ಶಿವಾಜಿಯ ಜೀವನ ಆಧರಿತ “ಶಿವಾಜಿ’ ನಾಟಕ ಸಿದ್ಧವಾಗಲಿದೆ. “ಮಣಿಕಂಠ ಮಹಿಮೆ’ ಕೂಡ ಶೀಘ್ರದಲ್ಲಿ ಹೊಸ ಸ್ವರೂಪದಲ್ಲಿ ಸಿದ್ಧವಾಗಿದೆ.
– ವಿಜಯ್‌ ಕುಮಾರ್‌ ಕೊಡಿಯಾಲಬೈಲ್‌, ನಿರ್ದೇಶಕರು

ಟಾಪ್ ನ್ಯೂಸ್

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Private Bus ಯಾನ ದರ 4 ಪಟ್ಟು ಹೆಚ್ಚಳ! ಮತದಾನಕ್ಕೆ ಬರುವವರ ಕಿಸೆಗೆ ಕತ್ತರಿ

Private Bus ಯಾನ ದರ 4 ಪಟ್ಟು ಹೆಚ್ಚಳ! ಮತದಾನಕ್ಕೆ ಬರುವವರ ಕಿಸೆಗೆ ಕತ್ತರಿ

Dakshina Kannada ರಾಜಕೀಯ ಮೇಲಾಟದ ಕ್ಷೇತ್ರದಲ್ಲಿ ಮತದಾರರದ್ದೇ ಕುತೂಹಲ!

Dakshina Kannada ರಾಜಕೀಯ ಮೇಲಾಟದ ಕ್ಷೇತ್ರದಲ್ಲಿ ಮತದಾರರದ್ದೇ ಕುತೂಹಲ!

ಅಧಿಕಾರಕ್ಕಾಗಿ ಪಿಎಫ್‌ಐಯ ರಾಜಕೀಯ ಮುಖವಾದ ಎಸ್‌ಡಿಪಿಐ ಜತೆ ಕಾಂಗ್ರೆಸ್‌ ಹೊಂದಾಣಿಕೆ: ನಳಿನ್‌

ಅಧಿಕಾರಕ್ಕಾಗಿ ಪಿಎಫ್‌ಐಯ ರಾಜಕೀಯ ಮುಖವಾದ ಎಸ್‌ಡಿಪಿಐ ಜತೆ ಕಾಂಗ್ರೆಸ್‌ ಹೊಂದಾಣಿಕೆ: ನಳಿನ್‌

Supreme Court ಆದೇಶದಿಂದ ಮೋದಿ ಸರಕಾರದ ಮುಖಭಂಗ: ಸುರ್ಜೇವಾಲ

Supreme Court ಆದೇಶದಿಂದ ಮೋದಿ ಸರಕಾರದ ಮುಖಭಂಗ: ಸುರ್ಜೇವಾಲ

Captain Brijesh Chowta ಚುನಾವಣ ವೆಚ್ಚಕ್ಕೆ ಪಿಂಚಣಿ ದುಡ್ಡು ದೇಣಿಗೆ

Captain Brijesh Chowta ಚುನಾವಣ ವೆಚ್ಚಕ್ಕೆ ಪಿಂಚಣಿ ದುಡ್ಡು ದೇಣಿಗೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Police Raid: 346 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ

Police Raid: 346 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.