ಸಂಭ್ರಮ ಕಟ್ಟಿಕೊಡುವ ಡಿಜಿಟಲ್‌ ದೀಪಾವಳಿ


Team Udayavani, Oct 25, 2019, 9:24 PM IST

Digital-Deepavali-730

ದೀಪಾವಳಿ ಎಂದಾಕ್ಷಣ ಮನೆ ಮುಂದೆ ಉರಿಯುವ ಹಣತೆ, ಆಕಾಶದಲ್ಲಿ ಚಿಮ್ಮುವ ಬಾಣಬಿರುಸು, ಕಿವಿಗೆ ಅಪ್ಪಳಿಸುವ ಪಟಾಕಿ ಸದ್ದು ಕಾಣುತ್ತದೆ. ಆದರೆ ಪರಿಸರಕ್ಕೆ ಹಾನಿಯಾಗದಂತೆ, ಪಟಾಕಿಗೆ ಹಣ ವ್ಯಯ ಮಾಡದಂತೆ ಆಚರಿಸುವ ಡಿಜಿಟಲ್‌ ದೀಪಾವಳಿ ಬಗ್ಗೆ ನಿಮಗೆ ಗೊತ್ತಿದೆಯೇ, ಇಲ್ಲವಾದರೆ ಇಲ್ಲಿದೆ ಓದಿ.

ಗ್ರೀಟಿಂಗ್‌ ಕಾರ್ಡ್‌
ಹಬ್ಬದ ಶುಭಾಶಯ ತಿಳಿಸುವುದಕ್ಕಾಗಿ ನೀವು ದುಡ್ಡು ಖರ್ಚು ಮಾಡಿ ಶುಭಾಶಯ ಪತ್ರ ಖರೀದಿಸಬೇಕೆಂದು ಇಲ್ಲ. ಹೊರತಾಗಿ ನಿಮ್ಮ ಮೊಬೈಲ್‌ ಮೂಲಕ ಅಂದ-ಚಂದದ ಗ್ರೀಟಿಂಗ್‌ ಕಾರ್ಡ್‌ ಅನ್ನು ಮಾಡಬಹುದು. ಸರ್ಚ್‌ಬಾರ್‌ಗೆ ಹೋಗಿ ದೀಪಾವಳಿ ಡಿಜಿಟಲ್‌ ಗ್ರೀಟಿಂಗ್‌ ಕಾರ್ಡ್‌ ಎಂದು ಸರ್ಚ್‌ ಕೊಟ್ಟರೆ ಸಾಕು ಹತ್ತಾರು ಆ್ಯಪ್‌ ಗಳು ನಿಮ್ಮ ಕಣ್ಣ ಮುಂದೆ ಬರುತ್ತವೆ. ಇದು ಗೂಗಲ್‌ ಪ್ಲೇಸ್ಟೋರ್‌ನಲ್ಲೂ ಲಭ್ಯ ಇದೆ. ಈ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಮೂಲಕ ನಿಮ್ಮ ಫೋಟೋ ಸಮೇತ ಶುಭಾಶಯ ಸಂದೇಶವನ್ನು ಮತ್ತಷ್ಟು ಚಂದಾಗಾಣಿಸಿ ನಿಮ್ಮ ಆತ್ಮೀಯರಿಗೆ ಕಳುಹಿಸಿ.

ಲಕ್ಷ್ಮಿ ಪೂಜೆ ಅಪ್ಲಿಕೇಶನ್‌
ಲಕ್ಷ್ಮೀ ಪೂಜಾ ದೀಪಾವಳಿಯ ಪ್ರಮುಖ ಕಾರ್ಯಕ್ರಮ. ಆದರೆ ಹಲವರಿಗೆ ಈ ಪೂಜೆ ಕುರಿತು ಮಾಹಿತಿ ಕಡಿಮೆ ಇರುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಒಂದು ದಾರಿ ಇದ್ದು, ಲಕ್ಷ್ಮಿ ಪೂಜಾ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಮೂಲಕ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯ ಮಂತ್ರ ಮೊಳಗಿಸಿ.

ಘಮ ಘಮಿಸುವ ಅಡುಗೆ
ಹಬ್ಬ ಎಂದಾಕ್ಷಣ ರುಚಿ-ರುಚಿ ತಿನ್ನಿಸುಗಳು ನೆನಪಾಗುತ್ತದೆ. ಆದರೆ ಹಬ್ಬದ ಸಡಗರವನ್ನು ಆಸ್ವಾದಿಸುವುದೋ ಅಥವಾ ಅಡುಗೆ ಮನೆಯಲ್ಲಿ ತರಕಾರಿ ಎಚ್ಚುತ್ತಾ ಕಾಲ ಕಳೆಯುವುದೋ ಎಂಬ ಗೊಂದಲ ಇರುತ್ತದೆ. ಒಂದು ಹಬ್ಬದ ಅಡುಗೆ ಮಾಡುವುದಕ್ಕೆ ಹೋಗಿ ಹತ್ತಾರು ಪದಾರ್ಥಗಳನ್ನು ಮಿಸ್‌ ಮಾಡಿಕೊಳ್ಳಬೇಕಾಗುತ್ತಾದೆ. ಆದರೆ ಈ ಚಿಂತೆಗೆ ಮದ್ದು ನಮ್ಮಲ್ಲಿ ಇದ್ದು, ಅಮ್ಮ ಮಾಡಿದ ಕೈ ರುಚಿ ಅಂತಿರುವ ಆಹಾರ ಪದಾರ್ಥಗಳನ್ನು ಆನ್‌ಲೈನ್‌ ಮೂಲಕ ಖರೀದಿಸಿ ಕುಟುಂಬದೊಂದಿಗೆ ಹಬ್ಬದ ಖುಷಿಯನ್ನು ಆಸ್ವಾದಿಸಬಹುದಾಗಿದೆ.

ಡಿಜಿಟಲ್‌ ಪಟಾಕಿ
ಗೋ ಗ್ರೀನ್‌ ಅಂತ ಭಾಷಣ ಮಾಡಿ ನಾವು ಪಟಾಕಿ ಹೊಡೆದರೆ ಸರಿಯಾಗುತ್ತದೆಯೇ. ಅದಕ್ಕಾಗಿ ಪೈರ್‌ ಕ್ರ್ಯಾಕರ್‌ ಎಂಬ ಆಪ್ಲಿಕೇಶನ್‌ ಡೌನ್‌ಲೋಡ್‌ ಮಾಡುವ ಮೂಲಕ ಪಟಾಕಿ ಹೊಡೆದಾಗ ಖುಷಿಯನ್ನು ಪಡೆದುಕೊಳ್ಳಿ. ಹೀಗೆ ಮಾಡುವುದರಿಂದ ಪರಿಸರ ಮಾಲಿನ್ಯವೂ ತಪ್ಪುತ್ತದೆ, ನಿಮ್ಮ ಗೋ ಗ್ರೀನ್‌ ಭಾಷಣಕ್ಕೆ ಒಂದು ಅರ್ಥವೂ ಸಿಗುತ್ತದೆ.

– ಸುಶ್ಮಿತಾ ಜೈನ್‌

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಂಬಾಣಿಗರ ವೈವಿಧ್ಯಮಯ ದೀಪಾವಳಿ ಹಬ್ಬ

ಲಂಬಾಣಿಗರ ವೈವಿಧ್ಯಮಯ ದೀಪಾವಳಿ ಹಬ್ಬ

ನಾಗರಿಕತೆಯ ನಡುವೆಯೂ ಗ್ರಾಮೀಣ ಸಂಸ್ಕೃತಿ ಉಳಿವಿಗೆ ಪಾಂಡವರು ಸಾಕ್ಷಿ

ನಾಗರಿಕತೆಯ ನಡುವೆಯೂ ಗ್ರಾಮೀಣ ಸಂಸ್ಕೃತಿ ಉಳಿವಿಗೆ ಪಾಂಡವರು ಸಾಕ್ಷಿ

tdy-6

ತುಳುನಾಡಿನ ವಿಶಿಷ್ಟ ಆಚರಣೆ ಬಲೀಂದ್ರ ಪೂಜೆ

ದೀಪಾವಳಿ ಹಣತೆಗಳಿಗೆ ಆಧುನಿಕ ಸ್ಪರ್ಶ

ದೀಪಾವಳಿ ಹಣತೆಗಳಿಗೆ ಆಧುನಿಕ ಸ್ಪರ್ಶ

tdy-20

ದೀಪಾವಳಿಯ ಖುಷಿಯಲ್ಲಿ ಈ ಸಂಗತಿ ಮರೆಯದಿರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.