ಟೆನಿಸ್‌ ಸಿಂಗಲ್ಸ್‌ : ಸುಮಿತ್‌ ನಾಗಲ್‌ ಮೊದಲ ನಗು


Team Udayavani, Jul 24, 2021, 11:12 PM IST

ಟೆನಿಸ್‌ ಸಿಂಗಲ್ಸ್‌ : ಸುಮಿತ್‌ ನಾಗಲ್‌ ಮೊದಲ ನಗು

ಟೋಕಿಯೊ: ಪುರುಷರ ವಿಭಾಗದ ಟೆನಿಸ್‌ ಸಿಂಗಲ್ಸ್‌ನಲ್ಲಿ ಸುಮಿತ್‌ ನಾಗಲ್‌ ನಗು ಹೊಮ್ಮಿಸಿದ್ದಾರೆ. ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಅವರು ಉಜ್ಬೆಕಿಸ್ಥಾನದ ಡೆನ್ನಿಸ್‌ ಇಸ್ತೋಮಿನ್‌ ವಿರುದ್ಧ ದಿಟ್ಟ ಹೋರಾಟ ಪ್ರದರ್ಶಿಸಿ 6-4, 6-7 (6), 6-4 ಅಂತರದ ಮೇಲುಗೈ ಸಾಧಿಸಿದರು. 2 ಗಂಟೆ, 34 ನಿಮಿಷಗಳ ತನಕ ಇವರ ಹೋರಾಟ ಸಾಗಿತು. ಮುಂದಿನ ಸುತ್ತಿನಲ್ಲಿ ಡ್ಯಾನಿಲ್‌ ಮೆಡ್ವೆಡೇವ್‌ ಅವರ ಕಠಿನ ಸವಾಲು ಎದುರಾಗಲಿದೆ. ಮೆಡ್ವೆಡೇವ್‌ ಕಜಾಕ್‌ಸ್ಥಾನದ ಅಲೆಕ್ಸಾಂಡರ್‌ ಬಬ್ಲಿಕ್‌ ಅವರನ್ನು 6-4, 7-6 (8)ರಿಂದ ಮಣಿಸಿದರು.

ಸುಮಿತ್‌ ನಾಗಲ್‌ ಒಲಿಂಪಿಕ್ಸ್‌ ಸಿಂಗಲ್ಸ್‌ನಲ್ಲಿ ಗೆಲುವು ಸಾಧಿಸಿದ ಭಾರತದ ಕೇವಲ 3ನೇ ಟೆನಿಸಿಗ. 1988ರ ಸಿಯೋಲ್‌ ಗೇಮ್ಸ್‌ನಲ್ಲಿ ಜೀಶನ್‌ ಅಲಿ ಪರಗ್ವೆಯ ವಿಕ್ಟೊ ಕ್ಯಾಬಲ್ಲೆರೊ ಅವರನ್ನು ಮಣಿಸಿದ್ದರು. ಮುಂದಿನದು ಲೆಜೆಂಡ್ರಿ ಲಿಯಾಂಡರ್‌ ಪೇಸ್‌ ಸರದಿ. 1996ರ ಅಟ್ಲಾಂಟಾ ಗೇಮ್ಸ್‌ನಲ್ಲಿ ಬ್ರಝಿಲ್‌ನ ಫೆರ್ನಾಂಡೊ ಮೆಲಿಗೆನಿ ಅವರನ್ನು ಮಣಿಸಿದ ಪೇಸ್‌ ಕಂಚು ಜಯಿಸಿದ್ದರು. ಪೇಸ್‌ ಗೆಲುವಿನ ಬಳಿಕ ಸೋಮದೇವ್‌ ದೇವವರ್ಮನ್‌, ವಿಷ್ಣುವರ್ಧನ್‌ 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಆಡಿದರೂ ಮೊದಲ ಸುತ್ತಿನಲ್ಲೇ ಎಡವಿದ್ದರು.

ಇದನ್ನೂ ಓದಿ : ಹಾಕಿ: ಮನ್‌ಪ್ರೀತ್‌ ಪಡೆಗೆ ಜಯ : ವನಿತೆಯರಿಗೆ ಸೋಲು
**
ಆರ್ಚರಿ: ಗುರಿ ತಪ್ಪಿದ ಬದಲಿ ಜೋಡಿ
ಟೋಕಿಯೊ: ಆರ್ಚರಿ ಮಿಕ್ಸೆಡ್‌ ಸ್ಪರ್ಧೆಯಲ್ಲಿ ಭಾರತದ ದೀಪಿಕಾ ಕುಮಾರಿ- ಪ್ರವೀಣ್‌ ಜಾಧವ್‌ ಜೋಡಿ ಕೊರಿಯಾ ವಿರುದ್ಧ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ನಿರಾಸೆ ಮೂಡಿಸಿದೆ. ಇದೇ ಮೊದಲ ಸಲ ಒಲಿಂಪಿಕ್ಸ್‌ ಸ್ಪರ್ಧೆಗಿಳಿದಿದ್ದ 17 ವರ್ಷದ ಕಿಮ್‌ ಜೆ ಡೋಕ್‌ ಹಾಗೂ 20 ವರ್ಷದ ಅನ್‌ ಸಾನ್‌ ಸೇರಿಕೊಂಡು ಭಾರತದ ಭರವಸೆಯನ್ನು 6-2 ಅಂತರದಿಂದ ಚಿವುಟಿ ಹಾಕಿದರು.
ಕೊನೆಯ ಕ್ಷಣದಲ್ಲಿ ಅತನು ದಾಸ್‌ ಅವರನ್ನು ಹೊರಗಿರಿಸಿ ಪ್ರವೀಣ್‌ ಜಾಧವ್‌ ಅವರನ್ನು ದೀಪಿಕಾಗೆ ಜೋಡಿಯಾಗಿ ಕಣಕ್ಕಿಳಿಸಿದ್ದು ಈಗ ಟೀಕೆಗೆ ಗುರಿಯಾಗಿದೆ. ಇದೊಂದು “ಬಿಗ್‌ ಬ್ಲಿಂಡರ್‌’ ಎಂದು ಆರ್ಚರಿ ತರಬೇತುದಾರರನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ತಂಡದೊಂದಿಗಿದ್ದ ಎಎಐ ಅಧಿಕಾರಿ ವೀರೇಂದ್ರ ಸಚೆªàವ್‌ ಈ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ರ್‍ಯಾಂಕಿಂಗ್‌ ಸುತ್ತಿನಲ್ಲಿ ಅತನು ದಾಸ್‌ಗಿಂತ ಪ್ರವೀಣ್‌ ಜಾಧವ್‌ ಉತ್ತಮ ಪ್ರದರ್ಶನ ನೀಡಿದ ಕಾರಣ ಈ ಬದಲಾವಣೆ ಮಾಡಲಾಗಿತ್ತು.
**

ಒಂದೇ ಕೈಯಲ್ಲಿ ಟಿಟಿ ಯಶಸ್ಸು!

ಈಕೆಯ ಹೆಸರು ನಟಾಲಿಯಾ ಪಾರ್ಟಿಕಾ. ದೇಶ ಪೋಲೆಂಡ್‌. ಆಟ ಟೇಬಲ್‌ ಟೆನಿಸ್‌. ವಿಶೇಷ ಹಾಗೂ ಅಚ್ಚರಿಯೆಂದರೆ, ಈಕೆ ಹೊಂದಿರುವುದು ಒಂದೇ ಕೈ!

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾರ್ಟಿಕಾ ಪಾಲ್ಗೊಂಡಿದ್ದು, ಆಸ್ಟ್ರೇಲಿಯದ ಮೈಕಲ್‌ ಬ್ರೋಮ್ಲಿ ಅವರನ್ನು ಮೊದಲ ಪಂದ್ಯದಲ್ಲಿ ಪರಾಭವಗೊಳಿಸಿದ್ದಾರೆ.

ಹುಟ್ಟುವಾಗಲೇ ಬಲಗೈ ಹೊಂದಿರದ ನಟಾಲಿಯಾ ಪಾರ್ಟಿಕಾ 1999ರಲ್ಲಿ ಮೊದಲ ಅಂತಾರಾಷ್ಟ್ರೀಯ ಪದಕ ಗೆದ್ದರು. ಅದು ವಿಶ್ವ ಚಾಂಪಿಯನ್‌ಶಿಪ್‌ ಆಗಿತ್ತು. 2000ದ ಸಿಡ್ನಿ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿಗ ಈಕೆಯ ವಯಸ್ಸು ಕೇವಲ 11 ವರ್ಷ. ಇದೊಂದು ದಾಖಲೆ ಎನಿಸಿತು. 2004ರ ಆಥೇನ್ಸ್‌ ಪ್ಯಾರಾಲಿಂಪಿಕ್ಸ್‌ ಸಿಂಗಲ್ಸ್‌ನಲ್ಲಿ ಚಿನ್ನ, ತಂಡ ಸ್ಪರ್ಧೆಯಲ್ಲಿ ಬೆಳ್ಳಿಗೆ ಕೊರಳೊಡ್ಡಿದರು. ಪದಕ ಬೇಟೆ ಮುಂದುವರಿಯುತ್ತಲೇ ಹೋಯಿತು. ಟೋಕಿಯೊದಲ್ಲಿ ಈಕೆಯ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.