ಆರೋಪಿತ ವ್ಯಕ್ತಿಯನ್ನು ನ್ಯಾಯಾಂಗ ಬಂಧನದಡಿ ಗೃಹ ಬಂಧನಕ್ಕೆ ಅವಕಾಶ : ಸುಪ್ರೀಂಕೋರ್ಟ್
Team Udayavani, May 12, 2021, 11:40 PM IST
ನವದೆಹಲಿ: ಆರೋಪಿತ ವ್ಯಕ್ತಿಯನ್ನು ನ್ಯಾಯಾಂಗ ಬಂಧನದಡಿ ಗೃಹಬಂಧನದಲ್ಲಿಡಬಹುದು ಎಂಬ ಮಹತ್ವದ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದೆ.
ಜೈಲುಗಳಲ್ಲಿ ಈಗಾಗಲೇ ಕೈದಿಗಳು ತುಂಬಿ ತುಳುಕುತ್ತಿದ್ದಾರೆ. ಜೊತೆಗೆ, ವ್ಯಕ್ತಿಯ ಮೇಲಿನ ಆರೋಪ ಸಾಬೀತಾಗುವವರೆಗೂ ಅವರನ್ನು ನೋಡಿಕೊಳ್ಳಲು ಜನರ ತೆರಿಗೆ ಹಣ ವ್ಯಯ ಮಾಡಲಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಆರೋಪಿಗಳನ್ನು ಗೃಹಬಂಧನದಲ್ಲಿಡಬಹುದು ಎಂದು ನ್ಯಾಯಪೀಠ ಹೇಳಿದೆ.
ಆರೋಪಿಯ ವಯಸ್ಸು, ಆರೋಗ್ಯ ಪರಿಸ್ಥಿತಿ, ಆತನ ಮೇಲಿರುವ ಆರೋಪಗಳ ರೀತಿಯನ್ನು ಪರಿಗಣಿಸಿ ಆರೋಪಿಯನ್ನು ಕೇವಲ ಗೃಹ ಬಂಧನದಲ್ಲಿ ಇಟ್ಟರೆ ಸಾಕೇ ಅಥವಾ ಅವರನ್ನು ಜೈಲಿನಲ್ಲೇ ಇಡಬೇಕೇ ಎಂಬ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಲಲಿತ್ ಹಾಗೂ ನ್ಯಾ. ಕೆ.ಎಂ. ಜೋಸೆಫ್ ಅವರುಳ್ಳ ನ್ಯಾಯಪೀಠ, “”ಭಾರತೀಯ ಜೈಲುಗಳಲ್ಲಿ ಸದ್ಯಕ್ಕೆ ಸ್ಥಳದ ಸಮಸ್ಯೆಯಿದೆ. ಇನ್ನು, ಜೈಲುಗಳಲ್ಲಿನ ಕೈದಿಗಳ ನಿರ್ವಹಣೆಗಾಗಿಯೇ ವಾರ್ಷಿಕವಾಗಿ 6,818.1 ಕೋಟಿ ರೂ.ಗಳನ್ನು ವ್ಯಯಿಸಲಾಗುತ್ತಿದೆ. ಭಾರತದಂಥ ರಾಷ್ಟ್ರದಲ್ಲಿ ಇದೊಂದು ದುಬಾರಿ ಖರ್ಚುವೆಚ್ಚ. ಈ ಎರಡನ್ನು ಪರಿಶೀಲಿಸಿದಾಗ ಆರೋಪಿಯನ್ನು ಗೃಹಬಂಧನದಲ್ಲಿ ಇಡುವುದು ಸಮಂಜಸ ಎನಿಸುತ್ತದೆ” ಎಂದು ಅಭಿಪ್ರಾಯಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ