ಟ್ಯಾಂಪರಿಂಗ್ ಅಸಾಧ್ಯ, ಇವಿಎಂ ಬಗ್ಗೆ ಸಂಶಯ ಬೇಡ;ಕೈ ಶಾಸಕ ಸುಧಾಕರ್
Team Udayavani, May 22, 2019, 5:28 PM IST
ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲು ಕ್ಷಣಗಣನೆ ಆರಂಭವಾಗಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಸೇರಿದಂತೆ ವಿಪಕ್ಷ ಮುಖಂಡರು ಇವಿಎಂ ಹ್ಯಾಕ್ ಟ್ಯಾಂಪರಿಂಗ್ ಮಾಡುತ್ತಾರೆ ಆರೋಪದ ನಡುವೆಯೇ ಕಾಂಗ್ರೆಸ್ ಶಾಸಕ ಸುಧಾಕರ್ ಅವರು, ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸಬಾರದು ಎಂದು ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಗೆದ್ದಾಗ ಇವಿಎಂ ಸರಿ ಇದೆ, ಸೋತಾಗ ಇವಿಎಂ ಸರಿ ಇಲ್ಲ ಎಂದು ಹೇಳುವುದು ನಾವು ಮಾಡುವ ಅವಮಾನವಾಗಲಿದೆ ಎಂದರು.
ಇವಿಎಂ ಟ್ಯಾಂಪರಿಂಗ್ ಮಾಡಲು ಸಾಧ್ಯವಿಲ್ಲ. ಎಕ್ಸಿಟ್ ಪೋಲ್ ನಡೆಸೋದು ಮಾಧ್ಯಮ ಮಿತ್ರರು. ಚುನಾವಣೋತ್ತರ ಸಮೀಕ್ಷೆಗೂ, ಇವಿಎಂಗೂ ಸಂಬಂಧವಿಲ್ಲ. ನಾಳೆ ಪೂರ್ಣ ಫಲಿತಾಂಶ ಬಂದ ನಂತರ ಸತ್ಯಾಸತ್ಯತೆ ಹೊರಬೀಳಲಿದೆ ಎಂದು ತಿಳಿಸಿದರು.