ಕ್ವಾರಂಟೈನ್‌ ನಿಯಮ ಸಡಿಲಿಕೆ ಮಾಡಿದ ಸರಕಾರ

ವಿದೇಶದಿಂದ ಬಂದವರ ಮೊದಲ ವರದಿ ನೆಗೆಟಿವ್‌ ಇದ್ದರೆ ಹೋಂ ಕ್ವಾರಂಟೈನ್‌

Team Udayavani, May 14, 2020, 6:10 AM IST

ಕ್ವಾರಂಟೈನ್‌ ನಿಯಮ ಸಡಿಲಿಕೆ ಮಾಡಿದ ಸರಕಾರ

ಮಂಗಳೂರು: ವಿದೇಶದಿಂದ ತಾಯ್ನಾಡಿಗೆ ಆಗಮಿಸುವ ಅನಿವಾಸಿ ಭಾರತೀಯರ ಪೈಕಿ ಗರ್ಭಿಣಿಯರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, 80 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು, ಕ್ಯಾನ್ಸರ್‌ ಸಹಿತ ಕೆಲವು ರೋಗಗಳಿಂದ ಬಳಲುವವರು ಸರಕಾರದ ಕ್ವಾರಂಟೈನ್‌ನಲ್ಲಿ ಕೋವಿಡ್‌ ಟೆಸ್ಟ್‌ ನಡೆಸಿದಾಗ ವರದಿ ನೆಗೆಟಿವ್‌ ಬಂದರೆ ಅಂತಹವರಿಗೆ ಹೋಂ ಕ್ವಾರಂಟೈನ್‌ ಮಾಡಲು ಸರಕಾರ ನಿಯಮ ಸಡಿಲಿಕೆ ಮಾಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಅವರು ತಿಳಿಸಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಮಂಗಳೂರಿಗೆ ಮೇ 12 ರಂದು ರಾತ್ರಿ 179 ಪ್ರಯಾಣಿಕರೊಂದಿಗೆ ದುಬಾೖಯಿಂದ ಮೊದಲ ವಿಮಾನ ಬಂದಿತ್ತು. ಲಾಕ್‌ಡೌನ್‌ ಬಳಿಕ ಬರುವ ವಿಶೇಷ ವಿಮಾನ ಇದಾಗಿದೆ. ವಿದೇಶದ ವಿಮಾನ ಲ್ಯಾಂಡ್‌ ಆದ ಬಳಿಕ ಪ್ರಯಾಣಿಕರು ಹೊರಗಡೆ ಬರಲು ಸಾಮಾನ್ಯವಾಗಿ 2 ಗಂಟೆ ಅಗತ್ಯವಿದೆ. ಆದರೆ ಮೇ 12ರಂದು ಬಂದಿರುವುದು ವಿಶೇಷ ವಿಮಾನವಾದ್ದರಿಂದ ಕೊರೊನಾ ಮುಂಜಾಗ್ರತೆಗಾಗಿ ಸಾಮಾಜಿಕ ಅಂತರದೊಂದಿಗೆ ಎಲ್ಲರ ಆರೋಗ್ಯ ತಪಾ ಸಣೆ, ಇಮಿಗ್ರೇಷನ್‌ ಪರಿಶೀಲನೆ ನಡೆಸಲು ಸಮಯ ಹೆಚ್ಚುಬೇಕಾಗಿತ್ತು ಎಂದರು.

ವಲಸೆ ಕಾರ್ಮಿಕರು ಆತಂಕಪಡಬೇಡಿ
ದ.ಕ. ಜಿಲ್ಲೆಯಿಂದ ಅಂತಾರಾಜ್ಯಕ್ಕೆ ಕಾರ್ಮಿಕರು ಹೋಗಬೇಕಾದರೆ ಆಯಾ ರಾಜ್ಯದವರೂ ಒಪ್ಪಿಗೆ ಕೊಡಬೇಕು. ಮಂಗಳೂರಿನಲ್ಲಿ ಝಾರ್ಖಂಡ್‌ ರಾಜ್ಯ ದವರು ತುಂಬಾ ಜನ ಇದ್ದಾರೆ. ಆದರೆ ಅಲ್ಲಿನ ಸರಕಾರದಿಂದ ಒಪ್ಪಿಗೆ ಬಂದಿರಲಿಲ್ಲ. ಇದೀಗ ನಮ್ಮ ರಾಜ್ಯ ಸರಕಾರ, ಅಲ್ಲಿನ ಸರಕಾರ ಜತೆ ಮಾತುಕತೆ ನಡೆಸುತ್ತಿದೆ. ಒಂದು ರೈಲಿನಲ್ಲಿ 1,460 ಜನ ಮಾತ್ರ ಹೋಗಲು ಸಾಧ್ಯ. ಹೀಗಾಗಿ ಅಂತಾರಾಜ್ಯಕ್ಕೆ ತೆರಳಲು ನೋಂದಣಿ ಮಾಡಿದವರನ್ನು ಆಯಾ ರಾಜ್ಯಗಳಿಗೆ ತಲು ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊ ಳ್ಳುತ್ತಿದೆ. ಈ ಕಾರಣಕ್ಕಾಗಿ ವಲಸೆ ಕಾರ್ಮಿಕರು ಹೆದರುವ ಅಗತ್ಯವಿಲ್ಲ, ಸುಳ್ಳುಸುದ್ದಿಗಳಿಗೆ ಬೆಲೆ ನೀಡಬೇಡಿ ಎಂದರು.

ಜಿಲ್ಲೆಗೆ ಬೇರೆ ರಾಜ್ಯಗಳಿಂದ ಬರಲು ಇಲ್ಲಿಯ
ವರೆಗೆ 6,489 ಅರ್ಜಿಗಳು ಬಂದಿದ್ದು, ಅಂದಾಜು 25,000 ಮಂದಿ ಆಗಮಿಸುವ ಸಾಧ್ಯತೆಯಿದೆ. ಬರುವ ಎಲ್ಲರೂ ಕಡ್ಡಾಯಾ ವಾಗಿ ಜಿಲ್ಲಾಡಳಿತದ ಕ್ವಾರಂಟೈನ್‌ ಕೇಂದ್ರ ದಲ್ಲಿ 14 ದಿನ ಇರಬೇಕು. ಇದಕ್ಕಾಗಿ ಸರಕಾರದ ಸುಮಾರು 10,000 ರೂಂಗಳ ವ್ಯವಸ್ಥೆಯಿದ್ದು, ಖಾಸಗಿ ಹೊಟೇಲ್‌ಗ‌ಳನ್ನೂ ನಿಗದಿಪಡಿಸಲಾಗಿದೆ. ಹಂತ ಹಂತವಾಗಿ ಹೊರ ರಾಜ್ಯದವರನ್ನು ಇಲ್ಲಿಗೆ ಕರೆಸಿಕೊಳ್ಳಲಾಗುತ್ತದೆ. ಈ ನಿಯಮ ಬಂದ ಮೇಲೆ 25 ಮಂದಿ ಈಗ ಕ್ವಾರಂಟೈನ್‌ನಲ್ಲಿದ್ದಾರೆ ಎಂದರು. ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಉಪಸ್ಥಿತರಿದ್ದರು.

ವಲಸೆ ಕಾರ್ಮಿಕರು 40,510 ಮಂದಿ!
ದ.ಕ. ಜಿಲ್ಲೆಯಲ್ಲಿದ್ದ 40,510 ಇತರ ರಾಜ್ಯಗಳ ಕಾರ್ಮಿಕರು “ಸೇವಾ ಸಿಂಧು’ ಆ್ಯಪ್‌ ಮೂಲಕ ಹೊರ ರಾಜ್ಯಕ್ಕೆ ತೆರಳಲು ನೋಂದಣಿ ಮಾಡಿದ್ದಾರೆ. ಬಿಹಾರದ 7,589 ಮಂದಿ, ಝಾರ್ಖಂಡ್‌ನ‌ 7,976, ಉತ್ತರಪ್ರದೇಶದ 9,700, ಪ. ಬಂಗಾಲದ 4,609 ಮಂದಿ ಯಿದ್ದು, ಈ ಪೈಕಿ ಉತ್ತರ ಪ್ರದೇಶದ 6,000, ಬಿಹಾರದ 4,200, ಝಾರ್ಖಂಡ್‌ನ‌ 1,148 ಮಂದಿ 8 ರೈಲುಗಳ ಮೂಲಕ ಈಗಾಗಲೇ ದ.ಕ. ಜಿಲ್ಲೆಯಿಂದ ತೆರಳಿದ್ದಾರೆ. ಜಿಲ್ಲೆ ಯಲ್ಲಿದ್ದ ಬಾಗಲಕೋಟೆ, ಗದಗ, ವಿಜಯಪುರ ಸಹಿತ 25 ರಾಜ್ಯಗಳ 12,970 ಮಂದಿ 500 ಬಸ್‌ಗಳ ಮೂಲಕ ತೆರಳಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ದುಬಾೖ ಪ್ರಯಾಣಿಕರ ವರದಿ ಇಂದು ಸಾಧ್ಯತೆ
ಮಂಗಳವಾರ ದುಬಾೖಯಿಂದ ಆಗಮಿಸಿದ ಮೊದಲ ವಿಮಾನದಲ್ಲಿದ್ದ ಗರ್ಭಿಣಿಯರು ಸಹಿತ ಎಲ್ಲರ ಆರೋಗ್ಯ ತಪಾಸಣೆ ಮಂಗಳವಾರ ರಾತ್ರಿ ನಡೆಸಲಾಗಿದೆ. ಜತೆಗೆ, ಕ್ವಾರಂಟೈನ್‌ನಲ್ಲಿರುವ ಕೇಂದ್ರಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಬುಧವಾರ ತೆರಳಿ ಗಂಟಲದ್ರವವನ್ನು ಸಂಗ್ರಹಿಸಿದ್ದಾರೆ. ಇದರ ವರದಿ ಗುರುವಾರ ದೊರೆಯುವ ಸಾಧ್ಯತೆಯಿದೆ. ಸದ್ಯಕ್ಕೆ ಎಲ್ಲರೂ ಆರೋಗ್ಯವಾಗಿದ್ದಾರೆ.
– ಸಿಂಧೂ ಬಿ.ರೂಪೇಶ್‌, ಜಿಲ್ಲಾಧಿಕಾರಿ, ದ.ಕ.

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.