ನಾಯಕತ್ವದ ಅಗ್ನಿಪರೀಕ್ಷೆ

ಮತದಾನಕ್ಕೆ 24 ಗಂಟೆ ಮೊದಲು ನಾನಾ ಲೆಕ್ಕಾಚಾರ

Team Udayavani, Dec 4, 2019, 6:30 AM IST

rt-47

ಬೆಂಗಳೂರು: ಕಾಂಗ್ರೆಸ್‌- ಜೆಡಿಎಸ್‌ ಸರಕಾರ ಪತನಗೊಳಿಸುವ ಸಲುವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸುಪ್ರೀಂ ಕೋರ್ಟ್‌ನಲ್ಲಿ ನಾಲ್ಕು ತಿಂಗಳ ಕಾಲ ಹೋರಾಟ ನಡೆಸಿ ಸ್ಪರ್ಧೆಗೆ ಅವಕಾಶ ಪಡೆದ ಅನರ್ಹರು ಎದುರಿಸುತ್ತಿರುವ ಉಪ ಚುನಾವಣೆ ಈಗ ಮೂರೂ ಪಕ್ಷಗಳ ನಾಯಕತ್ವದ ಅಗ್ನಿಪರೀಕ್ಷೆಯಾಗಿ ಮಾರ್ಪಟ್ಟಿದೆ.

ಮತದಾನಕ್ಕೆ 24 ಗಂಟೆಗಳು ಬಾಕಿ ಇದ್ದು ಮೂರೂ ಪಕ್ಷಗಳ ಕಾರ್ಯ ತಂತ್ರ, ರಣತಂತ್ರ, ಅಭ್ಯರ್ಥಿ ಗಳ ನಾಮಬಲ, ಪಕ್ಷದ ವರ್ಚಸ್ಸು, ಜಾತಿ-ಸಮುದಾಯಗಳ ಸಮೀ ಕರಣ ಎಲ್ಲದಕ್ಕೂ ಗುರುವಾರ ಮತ ದಾರ ನೀಡುವ ಉತ್ತರವೇ ಅಂತಿಮ ವಾಗಲಿದೆ. ಮಂಗಳವಾರ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ.

“ಅನರ್ಹತೆ’ ಪ್ರಮುಖ ವಿಷಯ ವಾಗಿದ್ದ ಈ ಉಪ ಚುನಾವಣೆಯು ಮಹಾರಾಷ್ಟ್ರದ ನಾಟಕೀಯ ರಾಜಕೀಯ ವಿದ್ಯಮಾನಗಳಿಂದಲೂ ಪ್ರಭಾವಿತವಾಗಿದ್ದು, ಈಗ ಯಾರ ಜತೆ ಮೈತ್ರಿ, ಯಾರ ನಾಯಕತ್ವ ಎಂಬ ರಾಜ ಕೀಯ ಚರ್ಚೆಯವರೆಗೆ ಬಂದು ತಲುಪಿದೆ.

ಉಪ ಚುನಾವಣೆ ಕಣ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ ಅವರ ಪ್ರತಿಷ್ಠೆಯ ಜತೆಗೆ ಅಸ್ತಿತ್ವದ ಪ್ರಶ್ನೆಯೂ ಆಗಿದೆ. ಜತೆಗೆ, ಒಂದು ಸರಕಾರ ಪತನಗೊಳಿಸಿ ಹೊಸ ಸರಕಾರ ಪ್ರತಿಷ್ಠಾಪಿಸಿದ ಅನರ್ಹರು ಈಗ ಬಿಜೆಪಿ ಸರಕಾರದ ಭವಿಷ್ಯ ವನ್ನೂ ನಿರ್ಧರಿಸಲಿದ್ದಾರೆ.

ಉಪ ಚುನಾವಣೆ ಘೋಷಣೆ ಯಾದ ದಿನಕ್ಕೂ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಮಂಗಳ ವಾರಕ್ಕೂ ರಾಜಕೀಯ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಆರೋಪ-ಪ್ರತ್ಯಾರೋಪ, ವಾಕ್ಸಮರ, ವೈಯಕ್ತಿಕ ಟೀಕೆ-ನಿಂದನೆ, ಜಾತಿ, ಅನರ್ಹತೆ, ಸಾಮೂಹಿಕ ರಾಜೀನಾಮೆ, ಸೇರ್ಪಡೆ, ಒಪ್ಪಂದ, ಒಳ ಒಪ್ಪಂದ ಎಲ್ಲದಕ್ಕೂ ಸಾಕ್ಷಿಯಾಗಿ ಮತದಾರನ ತೀರ್ಮಾನದವರೆಗೆ ಬಂದು ನಿಂತಿದೆ.

ಮತದಾನಕ್ಕೆ ನಾಲ್ಕೈದು ದಿನಗಳು ಇರುವಾಗ ಚರ್ಚೆಗೆ ಬಂದ ಮರು ಮೈತ್ರಿ ಜೋರು ಸದ್ದು ಮಾಡುತ್ತಿದೆ. ಅದಾದ ಬಳಿಕ ರಾಜ್ಯ ರಾಜಕೀಯದಲ್ಲಿ ನಾನಾ ರೀತಿಯ ವಿಶ್ಲೇಷಣೆಗಳೂ ನಡೆಯುತ್ತಿವೆ.

15 ವಿಧಾನಸಭೆ ಕ್ಷೇತ್ರಗಳ ಪೈಕಿ ಬಿಜೆಪಿಗೆ 6 ಸ್ಥಾನಕ್ಕಿಂತ ಕಡಿಮೆ ಬಂದರೆ ಸರಕಾರ ಅಲ್ಪಮತಕ್ಕೆ ಕುಸಿಯುತ್ತದೆ. ಆಗ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮರು ಮೈತ್ರಿ ಮಾಡಿಕೊಳ್ಳಬಹುದು. ಇಲ್ಲವೇ ಬಿಜೆಪಿ ಸರಕಾರ ಉಳಿಸಿಕೊಳ್ಳಲು ಜೆಡಿಎಸ್‌ ನೆರವು ಬಯಸಬಹುದು ಎಂಬೆಲ್ಲ ಮಾತುಗಳು ಕೇಳಿಬರುತ್ತಿವೆ. ಜತೆಗೆ ಕಾಂಗ್ರೆಸ್‌-ಜೆಡಿಎಸ್‌ ಸರಕಾರ ವಾದರೆ ಯಾರು ಮುಖ್ಯ ಮಂತ್ರಿ, ಬಿಜೆಪಿ-ಜೆಡಿಎಸ್‌ ಸರಕಾರ ರಚನೆ ಯಾದರೆ ಯಾರು ಮುಖ್ಯ ಮಂತ್ರಿ ಎಂಬ ಹಂತಕ್ಕೂ ಹೋಗಿದೆ.

ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಮೈತ್ರಿ ಪ್ರಸ್ತಾಪ ಇಲ್ಲ ಎಂದು ಹೇಳುತ್ತಾ ಒಳಗೊಳಗೇ ತಮ್ಮದೇ ಆದ ಲೆಕ್ಕಾಚಾರಗಳನ್ನು ಹಾಕಿಕೊಂಡಿದ್ದಾರೆ. ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿಯವರು ಮುಂದಿನ ರಾಜಕೀಯ ಭವಿಷ್ಯವು ಉಪ ಚುನಾವಣೆ ಮೇಲೆಯೇ ನಿಂತಿದೆ. ಚುನಾವಣೆಯ ಫ‌ಲಿತಾಂಶ ಡಿ. 9ರಂದು ಪ್ರಕಟವಾಗಲಿದೆ.

ಬದಲಾಗಿದೆ ಖದರ್‌
ಮಹಾರಾಷ್ಟ್ರದಲ್ಲಿ ಶಿವಸೇನೆ- ಎನ್‌ಸಿಪಿ-ಕಾಂಗ್ರೆಸ್‌ ಜತೆಗೂಡಿ ಸರಕಾರ ರಚಿಸಿದ್ದು, ಬಿಜೆಪಿ ಸರಕಾರ 80 ಗಂಟೆಗಳಲ್ಲಿ ಪತನಗೊಂಡ ಬೆಳವಣಿಗೆ ಅನಂತರ ರಾಜ್ಯ ರಾಜಕಾರಣ, ಉಪ ಚುನಾವಣೆ “ಖದರ್‌’ ಬದಲಾಗಿದೆ. ಕಾಂಗ್ರೆಸ್‌ ಪ್ರಚಾರದಿಂದ ದೂರ ಉಳಿದಿದ್ದ ಹಿರಿಯರೆಲ್ಲ ಪ್ರಚಾರದಲ್ಲಿ ತೊಡಗಿದರು. ಕೆಲವೆಡೆ ಒಳ ಒಪ್ಪಂದದಿಂದ ಕಾಂಗ್ರೆಸ್‌-ಜೆಡಿಎಸ್‌ ಹೆಚ್ಚು ಸೀಟು ಗೆಲ್ಲಲಿದೆ ಎಂಬ ಮಾತುಗಳ ಹಿನ್ನೆಲೆಯಲ್ಲಿ ಬಿಜೆಪಿಯಲ್ಲೂ ತಳಮಳ ಸೃಷ್ಟಿಯಾಗಿ ಕಾರ್ಯತಂತ್ರ ಬದಲಿಸಿಕೊಂಡಿದೆ. ಜೆಡಿಎಸ್‌ನಲ್ಲೂ ಕಿಂಗ್‌ ಮೇಕರ್‌ ಆಗುವ ಆಶಾಭಾವ ಮತ್ತೆ ಮೂಡಿದೆ.

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.