ಚೇತರಿಕೆ ಪ್ರಮಾಣ ಶೇ.27.52ಕ್ಕೆ ಏರಿಕೆ
ಈ ವರೆಗೆ 11 ಸಾವಿರಕ್ಕೂ ಹೆಚ್ಚು ಮಂದಿ ಗುಣಮುಖ
Team Udayavani, May 5, 2020, 6:15 AM IST
ಹೊಸದಿಲ್ಲಿ: ಮೂರನೇ ಹಂತದ ಲಾಕ್ಡೌನ್ಗೆ ದೇಶ ಕಾಲಿಡುತ್ತಿದ್ದಂತೆ ಕೋವಿಡ್-19ದಿಂದ ಗುಣಮುಖರಾಗುತ್ತಿ ರುವವರ ಪ್ರಮಾಣ ಹೆಚ್ಚಿದೆ ಎಂಬ ಸಮಾಧಾನಕರ ಮಾಹಿತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ನೀಡಿದೆ.
ದೇಶಾದ್ಯಂತ ಗುಣ ಹೊಂದುತ್ತಿರುವ ಸೋಂಕುಪೀಡಿತರ ಪ್ರಮಾಣ ಶೇ.27.52 ಕ್ಕೇರಿದ್ದು, 24 ತಾಸುಗಳ ಅವಧಿಯಲ್ಲಿ ಸಾವಿರ ಮಂದಿ ಸಂಪೂರ್ಣ ಚೇತರಿಕೆ ಕಂಡು ಮನೆಗೆ ತೆರಳಿದ್ದಾರೆ. ಒಟ್ಟಾರೆ ದೇಶಾ ದ್ಯಂತ 11,761 ಮಂದಿ ಗುಣಮುಖರಾಗಿದ್ದಾರೆ. ಅಲ್ಲದೆ ಸಾವಿನ ಪ್ರಮಾಣವು ಕೇವಲ ಶೇ.3.2ರಷ್ಟಿದ್ದು, ಇದು ಜಗತ್ತಿನಲ್ಲೇ ಅತ್ಯಂತ ಕನಿಷ್ಠ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.
ಸೋಂಕು ದ್ವಿಗುಣ ಪ್ರಮಾಣದಲ್ಲೂ ಸುಧಾರಣೆಯಾಗಿದೆ. ಈಗ ಸೋಂಕು ಪೀಡಿತರ ಸಂಖ್ಯೆ ದುಪ್ಪಟ್ಟಾಗಲು 12 ದಿನಗಳು ಬೇಕಾಗುತ್ತಿವೆ ಎಂದು ಸಚಿವಾ ಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಆದರೆ ದೇಶದಲ್ಲಿ ಸೋಮವಾರ ಒಂದೇ ದಿನ 2,553 ಪ್ರಕರಣಗಳು ಪತ್ತೆಯಾಗಿವೆ. 72 ಮಂದಿ ಸಾವಿಗೀಡಾಗಿದ್ದಾರೆ.
20 ತಂಡಗಳ ರಚನೆ
ಸುಮಾರು 20 ಕೇಂದ್ರ ತಂಡಗಳನ್ನು ರಚಿಸಲಾಗಿದ್ದು, ಇವು ಹೆಚ್ಚು ಪ್ರಕರಣಗಳು ಇರುವೆಡೆ ತೆರಳಿ, ಸೋಂಕು ಪ್ರಸರಣ ತಡೆಗೆ ಸಂಬಂಧಿಸಿ ಸ್ಥಳೀಯಾಡಳಿತಗಳಿಗೆ ನೆರವಾಗಲಿದೆ ಎಂದೂ ಲವ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಸೋಂಕು ಹೆಚ್ಚಳ ಸಾಧ್ಯತೆ
ಲಾಕ್ಡೌನ್ ಸಡಿಲಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅಗರ್ವಾಲ್, ಕೋವಿಡ್-19ದಂಥ ಸೋಂಕುಗಳ ವಿಚಾರದಲ್ಲಿ ಸಾಮಾಜಿಕ ಅಂತರವನ್ನು ಪಾಲಿಸದೇ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದನ್ನು ಇತಿ ಹಾಸವೇ ಹೇಳುತ್ತಿದೆ. ಹಾಗಾಗಿ ಲಾಕ್ಡೌನ್ ಸಡಿಲಿಕೆಯು ದೇಶಾದ್ಯಂತ ಸೋಂಕಿನ ಹೆಚ್ಚಳಕ್ಕೆ ಕಾರಣವಾಗುವ ಭೀತಿಯಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ