ಹೊಸ ಯೋಚನೆ, ಯೋಜನೆಗಳಿಗೆ ರಹದಾರಿ “ಮರೆವು’


Team Udayavani, Jul 10, 2021, 6:30 AM IST

ಹೊಸ ಯೋಚನೆ, ಯೋಜನೆಗಳಿಗೆ ರಹದಾರಿ “ಮರೆವು’

ಪ್ರತಿಯೊಂದು ಕೆಲಸದಲ್ಲಿಯೂ ಅಡೆ – ತಡೆಗಳು, ಹಿನ್ನಡೆ-ಮುನ್ನಡೆಗಳು ಸಹಜ. ಜೀವನದ ಪಥದಲ್ಲಿ ಸಿಹಿ-ಕಹಿ ಘಟನೆಗಳನ್ನು ದಾಟಿಯೇ ಸಾಗುವ ಅನಿವಾರ್ಯ ಇದ್ದೇ ಇರುತ್ತದೆ. ಇವೆ ಲ್ಲವನ್ನು ಮೆಟ್ಟಿ ನಿಂತು ಸಾಗಿದಾಗ ಮಾತ್ರ ನಾವು ನಮ್ಮ ಜೀವನವನ್ನು ರೂಪಿಸಿ ಕೊಳ್ಳಲು ಸಾಧ್ಯ. ಇಲ್ಲಿ “ಮರೆವು’ ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು.

ನಮ್ಮೊಳಗಿನ ಚಂಚಲತೆಯ ಮನಃಸ್ಥಿತಿಗೆ ಹಲವು ಸಾಧಕರ ಜೀವನದ ಯಶೋಗಾಥೆಗಳು ಮಾರ್ಗ ದರ್ಶಕ ದೀವಿಗೆಗಳಾಗಬಲ್ಲವು.
ಸರ್‌ ಐಸಾಕ್‌ ನ್ಯೂಟನ್‌ ಎಂಬ ಜಗತø ಸಿದ್ಧ ವಿಜ್ಞಾನಿಯು ವೈಜ್ಞಾನಿಕ ರಂಗದಲ್ಲಿ ಸರ್ವಮಾನ್ಯರಾದವರು. ಅಂತೆಯೇ ಅವರ ಸ್ವಭಾವ ಕೂಡ ಅನುಕರಣೀಯ. ಬಹಳ ಸೂಕ್ಷ್ಮ ಸ್ವಭಾವ ಅವರದ್ದು. ನಿಧಾನಿ, ಸಮಾಧಾನಿಯಾದ ಅವರಿಂದ ಕೋಪ ಬಲು ದೂರ. ತಾನಾಯಿತು, ತನ್ನ ಅಧ್ಯಯನದ ಕೋಣೆಯಾಯಿತು. ತನ್ನ ಪ್ರಮೇಯಗಳ ಪುನರಾವರ್ತಿತ ವಿಶ್ಲೇಷಣೆಯಾಯಿತು.

ಇಷ್ಟೇ ಅವರ ಕೆಲಸ. ಆದರೆ ಅವರಿಗೊಂದು ಮಿತ್ರ ನಿದ್ದ. ಅದೇ “ಡೈಮಂಡ್‌’ ಎಂಬ ಪುಟ್ಟ ನಾಯಿ. ಅದು ಅವರ ಕಾಲಿನ ಬಳಿಯೇ ಮಲಗಿ ರುತ್ತಿತ್ತು. ನಿರ್ದಿಷ್ಟ ಸಮಯದಲ್ಲಿ ತನ್ನ ಊಟಕ್ಕೋ ಯಜಮಾನನ ಮಾತಿಗೋ ಸ್ಪಂದಿಸಿ, ಹೊರಹೋಗುತ್ತಿತ್ತು.
ಒಮ್ಮೆ ಒಂದು ಕೆಲಸದಲ್ಲಿ ಮಗ್ನನಾಗಿದ್ದ ನ್ಯೂಟನ್‌, ನಡುವೆ ಹೊರಹೋದರು. ಲೇಖನಿ, ಇಂಕ್‌ ಬಾಟಲ್‌, ಕಾಗದಗಳೆ ಲ್ಲವೂ ಮೇಜಿನ ಮೇಲೆಯೇ ಇದ್ದವು. ಸಮೀಪದಲ್ಲಿ ಒಂದು ಕ್ಯಾಂಡಲ್‌ ಕೂಡ ಉರಿಯುತ್ತಿತ್ತು. ಅತ್ತ ಡೈಮಂಡ್‌ ಕೂಡ ಯಜಮಾನನ ಬರುವಿಕೆಗಾಗಿ ಕಾಯು ತ್ತಿತ್ತು. ಅಷ್ಟರಲ್ಲಿ ಪುಟ್ಟ ಇಲಿಯೊಂದು ಮೇಜಿನತ್ತ ಹೋಯಿತು. ಆಗ ಡೈಮಂಡ್‌, ಇಲಿಯ ಮೇಲೆ ಹಾರಿತು. ಉರಿಯುತ್ತಿದ್ದ ಕ್ಯಾಂಡಲ್‌, ಪೇಪರ್‌ನ ಮೇಲೆ ಬಿದ್ದು, ಅಲ್ಲಿದ್ದ ಕಾಗದಗಳೆಲ್ಲ ಸುಟ್ಟು ಬೂದಿಯಾದವು.

ನ್ಯೂಟನ್‌ ಮರಳಿ ಬಂದರು. ತನ್ನ ಕೋಣೆ, ಮೇಜಿನ ದೃಶ್ಯ ಕಂಡವರಿಗೆ ಎಲ್ಲವೂ ಅರಿವಾಯಿತು. ಅವರ ಅಮೂಲ್ಯ ಸಂಶೋಧನೆ, ಅಧ್ಯಯನದ ಕೆಲವು ತಿಂಗಳುಗಳಿಂದ ಶ್ರಮವಹಿಸಿ ಬರೆದ ಪ್ರಬಂಧ ಸುಟ್ಟು ಬೂದಿಯಾ ಗಿತ್ತು. ತನ್ನ ಶ್ರಮ ವ್ಯರ್ಥವಾದುದನ್ನು ಕಂಡು ದುಃಖೀತರಾದರು. ಆದರೆ ಕೋಪ ಗೊಳ್ಳಲಿಲ್ಲ! ಶಾಂತಚಿತ್ತದಿಂದ ಡೈಮಂಡ್‌ ನನ್ನು ಕರೆದು, “ನೋಡು ಡೈಮಂಡ್‌, ನಿನ್ನ ಚೇಷ್ಟೆಯ ಅರಿವು ನಿನಗಿಲ್ಲ’ ಎಂದರು. ಮೇಜಿನ ಮೇಲಿದ್ದ ಬೂದಿಯನ್ನು ತಾವೇ ಒರೆಸಿ, ಘಟನೆಯನ್ನು ಮರೆತು ಮತ್ತೆ ಬರೆಯಲು ಪುನರಾರಂಭಿಸಿದರು.

ನ್ಯೂಟನ್‌ರ ಈ ಸಮಾಧಾನ ಚಿತ್ತ ಮತ್ತು ನಡೆದ ಕೆಟ್ಟ ಘಟನೆಗಳ ಬಗ್ಗೆ ಮತ್ತೆ ಮತ್ತೆ ಚಿಂತಿಸದೆ, ಅಲ್ಲಿಯೇ ಮರೆತು ಬಿಡುವ ಸ್ವಭಾವವನ್ನು ನಾವೂ ಕೂಡ ಅನುಸರಿಸಿದರೆ ಅದೆಷ್ಟೋ ಸಮಸ್ಯೆಗಳಿಂದ ದೂರವಿರಬಹುದಲ್ಲವೇ? ಶ್ರದ್ಧೆಯಿಂದ ಕರ್ತವ್ಯದಲ್ಲಿ ಯಶಸ್ಸನ್ನು ಕೂಡ ಕಾಣ ಬಹುದಲ್ಲವೇ? ನಮ್ಮ ಜೀವನದಲ್ಲಿ ತಿಳಿದೋ, ತಿಳಿಯದೆಯೋ ಅನೇಕ ಕಹಿ ಘಟನೆಗಳು ನಡೆದು ಹೋಗುತ್ತವೆ. ಆ ಘಟನೆಗಳಿಗೆ ಸಮಾಧಾನದಿಂದ ಪರಿಹಾರ ಕಂಡುಕೊಳ್ಳಬೇಕಿದೆ. “ಮರೆವು’ ದೇವರು ಕೊಟ್ಟ “ಅಮೂಲ್ಯವಾದ ವರ’ ಎಂದು ಭಾವಿಸಿ, ನಡೆದ ಕಹಿ ಘಟನೆಗಳನ್ನು ಮರೆತುಬಿಡಬೇಕು. ಕೆಟ್ಟ ಘಟನೆ, ಅದಕ್ಕೆ ಕಾರಣರಾದವರ ಬಗ್ಗೆ ಪ್ರತೀಕಾರ, ಕೋಪ ಬೆಳೆಸುತ್ತಾ ಹೋದರೆ ನಮ್ಮ ಸಮಯವೂ ವ್ಯರ್ಥ ಮತ್ತು ನಮಗೆ ಹೊಸ ಯೋಚನೆ, ಜೀವನೋತ್ಸಾಹವು ಮೂಡುವುದೇ ಇಲ್ಲ. “ಮರೆವು’ ಎಂಬ ದಿವೌÂಷಧವು ನಮ್ಮ ಮನವನ್ನು ಹೊಸ ಯೋಚನೆಗಳಿಗೆ ತೆರೆದಿಡುತ್ತದೆ. ಜೀವನದ ಹಾದಿಯಲ್ಲಿ ಭರವಸೆಯ ಬೆಳಕನ್ನು ಬೀರುತ್ತದೆ.

ಕೆಡುಕುಗಳ ಮಧ್ಯದಲ್ಲಿ ಒಳಿತನ್ನು ಗುರುತಿಸಬೇಕು. ಕೆಟ್ಟದ್ದನ್ನು ಮರೆತು, ಕನಸುಗಳ ಮೊಳೆತು, ಸಾಧಿಸುವ ಚೈತನ್ಯ ದಲ್ಲಿ ಕಲೆತು, ಸುಖ ದುಃಖಗಳೊಂದಿಗೆ ಬೆರೆತು, ಬಾಳ ಪಯಣದಲ್ಲಿ ಯಶಸ್ಸಿನ ಶಿಖರವನ್ನು ತಲುಪಬೇಕಿದೆ.

- ಭಾರತಿ ಎ., ಕೊಪ್ಪ

ಟಾಪ್ ನ್ಯೂಸ್

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.