ದಾಖಲೆ ಇಲ್ಲದಿದ್ದರೂ ಪರಿಹಾರ
ಕಂದಾಯ ಸಚಿವ ಅಶೋಕ್ ಭರವಸೆ; ಪ್ರವಾಹ ಸಂತ್ರಸ್ತರಿಗೆ ಅಭಯ
Team Udayavani, Oct 11, 2019, 6:00 AM IST
ಬೆಂಗಳೂರು: ರಾಜ್ಯದಲ್ಲಿ ನೆರೆ ಹಾವಳಿಗೆ ತುತ್ತಾದ ಪ್ರತಿ ಮನೆಗೂ ಸರಕಾರ ಸೂಕ್ತ ಪರಿಹಾರ ನೀಡಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಪ್ರಕಟಿಸಿದ್ದಾರೆ.
ಗುರುವಾರ ಆರಂಭಗೊಂಡ ತ್ರಿದಿನಗಳ ಅಧಿ ವೇಶನ ಸಂಬಂಧ ವಿಧಾನ ಪರಿಷತ್ತಿನಲ್ಲಿ ನಿಯಮ 68ರ ಅಡಿ ನೆರೆ ಹಾವಳಿ ಕುರಿತು ಕೈಗೆತ್ತಿ ಕೊಂಡ ಚರ್ಚೆಯಲ್ಲಿ ಈ ವಿಚಾರ ತಿಳಿಸಿದ ಸಚಿವರು, ನೆರೆ ಹಾವಳಿಗೆ ಹಾನಿಗೊಳಗಾದ ಮನೆ ಅಧಿಕೃತವಾಗಿರಲಿ ಅಥವಾ ಅನಧಿಕೃತವಾಗಿರಲಿ ಹಾಗೂ ಸಂಬಂಧಿಸಿದ ದಾಖಲೆಗಳಿರಲಿ, ಇಲ್ಲ ದಿರಲಿ; ಬೀದಿಗೆ ಬಂದ ಕುಟುಂಬಕ್ಕೆ ಪರಿಹಾರ ನೀಡ ಲಾಗುವುದು ಎಂದರು. ಮನೆ ಶೇ. 25ಕ್ಕಿಂತ ಹೆಚ್ಚು ಹಾನಿಗೊಳಗಾಗಿದ್ದರೆ 5 ಲಕ್ಷ ರೂ. ಮತ್ತು ನೀರು ನುಗ್ಗಿದ್ದರೆ 10 ಸಾವಿರ ರೂ. ಪರಿಹಾರ ಒದಗಿಸಲಾಗುವುದು ಎಂದರು. ಅಷ್ಟೇ ಅಲ್ಲ, ಹಿಂದೆ ಇದ್ದ ಎ, ಬಿ ಮತ್ತು ಸಿ ಎಂಬ ವಿಂಗಡಣೆ ರೂಪದ ನೆರೆ ಪರಿಹಾರ ನಿಯಮವನ್ನೂ ಪರಿಷ್ಕರಣೆ ಮಾಡಲಾಗಿದೆ ಎಂದು ತಿಳಿಸಿದರು.
ಪರಿಹಾರ ಸಾಕಾಗದು
ಚರ್ಚೆ ವೇಳೆ ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್ ಸದಸ್ಯ ಬಸವರಾಜ ಇಟಗಿ, ನೆರೆಗೆ ತುತ್ತಾದ ಮನೆಗಳ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ಮನೆ ನೋಂದಣಿ ಕಡ್ಡಾಯವಾಗಿದೆ. ಇದರಿಂದ ಬಹುತೇಕರು ಪರಿಹಾರ ವಂಚಿತರಾಗಲಿದ್ದಾರೆ. ಅಲ್ಲದೆ ಒಂದು ಮನೆಗೆ ಒಂದೇ ಪರಿಹಾರ ನೀಡಲಾಗುತ್ತಿದೆ. ಆದರೆ ಉತ್ತರ ಕರ್ನಾಟಕದ ಬಹುತೇಕ ಕಡೆ ಒಂದು ಮನೆಯಲ್ಲಿ ಹಲವು ಕುಟುಂಬಗಳು ನೆಲೆಸಿವೆ. ಹೀಗಾಗಿ ಸರಕಾರ ನೀಡುವ ಪರಿಹಾರ ಮೊತ್ತ ಯಾವುದಕ್ಕೂ ಸಾಲದು ಎಂದು ಗಮನಸೆಳೆದರು.
ಹಿಂದಿನ ನಿಯಮ
ಶೇ. 25ರಿಂದ 75ರ ವರೆಗೆ ಮನೆ ಜಖಂ: 1 ಲಕ್ಷ ರೂ.
ಶೇ. 75ಕ್ಕಿಂತ ಹೆಚ್ಚು ಹಾನಿ: 5 ಲಕ್ಷ ರೂ.
ಶೇ. 25ಕ್ಕಿಂತ ಕಡಿಮೆ ಹಾನಿ: 25 ಸಾವಿರ ರೂ.
ಪರಿಷ್ಕೃತ ನಿಯಮ
ಶೇ. 25ಕ್ಕಿಂತ ಹೆಚ್ಚು ಮನೆ ಹಾನಿ: 5 ಲಕ್ಷ ರೂ.
ಶೇ. 25ಕ್ಕಿಂತ ಕಡಿಮೆ ಹಾನಿ: 50 ಸಾವಿರ ರೂ.
ಅಧಿವೇಶನ ವಿಸ್ತರಣೆಗೆ ಒಪ್ಪದ ಸರಕಾರ
ರಾಜ್ಯದ ನೆರೆ ಪರಿಸ್ಥಿತಿ ಬಗ್ಗೆ ಚರ್ಚಿಸಲು ಕನಿಷ್ಠ 10 ದಿನ ಅಧಿವೇಶನ ನಡೆಸಬೇಕು ಎಂಬ ವಿಪಕ್ಷದ ಬೇಡಿಕೆಯನ್ನು ಸರಕಾರ ತಿರಸ್ಕರಿಸಿದೆ. ಸಂತಾಪ ಸೂಚಕ ನಿರ್ಣಯದ ಬಳಿಕ ಬರ, ನೆರೆ ಪರಿಹಾರ ಮತ್ತು ಪುನರ್ವಸತಿ ಕುರಿತು ನಿಲುವಳಿ ಸೂಚನೆ ಮಂಡನೆ ನಡೆಸುವ ಬೇಡಿಕೆಯನ್ನೂ ಸ್ಪೀಕರ್ ತಿರಸ್ಕರಿಸಿದ್ದು, ಗದ್ದಲಕ್ಕೆ ಕಾರಣವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
MUST WATCH
ಹೊಸ ಸೇರ್ಪಡೆ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ