ಆನ್‌ಲೈನ್‌ ಖರೀದಿಗೆ ಮುನ್ನ ಯೋಚಿಸಿ: ಆಫ‌ರ್‌ಗಳ ಬಗ್ಗೆ ಎಚ್ಚರ

ಹೆಚ್ಚಿದ ನಕಲಿ ಇ-ಕಾಮರ್ಸ್‌ ವೆಬ್‌ಸೈಟ್‌ಗಳ ಹಾವಳಿ

Team Udayavani, Mar 14, 2022, 7:55 AM IST

ಆನ್‌ಲೈನ್‌ ಖರೀದಿಗೆ ಮುನ್ನ ಯೋಚಿಸಿ: ಆಫ‌ರ್‌ಗಳ ಬಗ್ಗೆ ಎಚ್ಚರ

ಬೆಂಗಳೂರು: ಅಸಲಿ ಇ-ಕಾಮರ್ಸ್‌ ವೆಬ್‌ಸೈಟ್‌ಗಳನ್ನೇ ಬೆರಗುಗೊಳಿಸುವಂತೆ ನಕಲಿ ಆನ್‌ಲೈನ್‌ ಶಾಂಪಿಂಗ್‌ ವೆಬ್‌ಸೈಟ್‌ಗಳು ಜನರಿಂದ ಹಣ ಸುಲಿಗೆ ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಸೈಬರ್‌ ಎಕಾನಾಮಿಕ್ಸ್‌ ಮತ್ತು ನಾರ್ಕೋಟಿಕ್ಸ್‌(ಸಿಇಎನ್‌) ಠಾಣೆಗಳಲ್ಲಿ ಇಂತಹ ಪ್ರಕರಣಗಳು ಪ್ರತಿ ನಿತ್ಯ 2-4 ದಾಖಲಾಗಿದ್ದು, ಅಂದಾಜು ವರ್ಷಕ್ಕೆ ಸಾವಿರ ಗಡಿ ದಾಟುತ್ತಿದೆ.

ಪ್ರಕರಣ-1
ಜೆ.ಪಿ. ನಗರ ನಿವಾಸಿ ವೆಂಕಟೇಶ್‌ ಅಯ್ಯರ್‌ ಸಂಬಂಧಿಯೊಬ್ಬರಿಗೆ ಗುಜರಾತಿ ಗಾಗ್ರಾ ಖರೀದಿಸಲು ಲೋಕ್ಯಾಂಟೋ ವೆಬ್‌ಸೈಟ್‌ ಶೋಧಿಸಿದ್ದರು. ಅದರಲ್ಲಿ ಉಲ್ಲೇಖೀಸಿದ್ದ ಮೊಬೈಲ್‌ ನಂಬರ್‌ಗೆ ಕರೆ ಮಾಡಿದಾಗ ಆರೋಪಿಗಳು, ಉತ್ತಮ ಕಂುಪನಿಯ ಗಾಗ್ರಾ ಇದ್ದು, ಕಳುಹಿಸುತ್ತೇವೆ. ಮುಂಗಡವಾಗಿ ಡೆಲಿವರಿ ಶುಲ್ಕ ಎಂದು ಹಂತ-ಹಂತವಾಗಿ 4,400 ರೂ. ದೋಚಿದ್ದಾರೆ. ಅನಂತರ ಮೊಬೈಲ್‌ ಸ್ವಿಚ್‌x ಆಫ್ ಮಾಡಿಕೊಂಡಿದ್ದಾರೆ. ವೆಂಕಟೇಶ್‌ ಆಗ್ನೇಯ ವಿಭಾಗದ ಸೆನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ-2
ಯಲಹಂಕ ನಿವಾಸಿ ಪುರುಷೋತ್ತಮ್‌ ಉತ್ತಮ ಕಂಪೆನಿಯ ಮೊಬೈಲ್‌ ಖರೀದಿಗೆ ಮುಂದಾಗಿದ್ದರು. ಆಗ ಇನ್‌ಸ್ಟ್ರಾಗ್ರಾಂನಲ್ಲಿ ಬಂದಿದ್ದ ವೆಬ್‌ಸೈಟ್‌ವೊಂದರ ಲಿಂಕ್‌ ತೆರೆದು, 39 ಸಾವಿರ ರೂ. ಮೌಲ್ಯದ ಮೊಬೈಲ್‌ ಬುಕ್‌ ಮಾಡಿದ್ದಾರೆ. ಆದರೆ, ಮೊಬೈಲ್‌ ಬಂದಿಲ್ಲ. ಈಶಾನ್ಯ ವಿಭಾಗದ ಸೆನ್‌ ಠಾಣೆಯಲ್ಲಿ ಪುರುಷೋತ್ತಮ್‌ ದೂರು ದಾಖಲಿಸಿದ್ದಾರೆ.

ಪ್ರಕರಣ-3
ಚಾಮರಾಜಪೇಟೆ ನಿವಾಸಿ ಮಧುಸೂದನ್‌, ಒಎಲ್‌ಎಕ್ಸ್‌ನಲ್ಲಿ ನೀಡಿದ್ದ ವಾಹನ ಮಾರಾಟದ ಜಾಹಿರಾತು ಕಂಡು, ಉಲ್ಲೇಖೀಸಿದ್ದ ಮೊಬೈಲ್‌ ನಂಬರ್‌ಗೆ ಕರೆ ಮಾಡಿದ್ದಾರೆ. ಮುಂಗಡ ಹಣ ಕೊಡಬೇಕೆಂದು 15 ಸಾವಿರ ರೂ. ವರ್ಗಾವಣೆ ಮಾಡಿಸಿಕೊಂಡು, ನಂಬರ್‌ ಮೊಬೈಲ್‌ ಸ್ವಿಚ್‌x ಆಫ್ ಮಾಡಿಕೊಂಡಿದ್ದಾನೆ. ಅಲ್ಲದೆ, ಜಾಹಿರಾತು ಕೂಡ ಡಿಲೀಟ್‌ ಮಾಡಲಾಗಿದೆ. ಈ ಕುರಿತು ಪಶ್ಚಿಮ ವಿಭಾಗದ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಮಾನ್ಯವಾಗಿ ಇ-ಕಾಮರ್ಸ್‌ ವೆಬ್‌ಸೈಟ್‌ ತೆರೆಯಲು ಕೆಲವೊಂದು(ಲೈಸೆನ್ಸ್‌ ಹಾಗೂ ಇತರೆ) ಮಾನದಂಡಗಳು ಇವೆ. ಆದರೆ, ನಕಲಿ ವೆಬ್‌ಸೈಟ್‌ಗಳು ಯಾವುದೇ ನಿಯಮ ಪಾಲಿಸದೆ ಕೇವಲ 10-20 ಸಾವಿರ ರೂ.ನಲ್ಲಿ ವೆಬ್‌ಸೈಟ್‌ ಸೃಷ್ಟಿಸಿ, ಅಸಲಿ ವೆಬ್‌ಸೈಟ್‌ ಮಾದರಿಯಲ್ಲಿ ವಸ್ತುಗಳ ಖರೀದಿಗೆ ಅವಕಾಶ ನೀಡುತ್ತವೆ. ಅಲ್ಲದೆ, ಉತ್ತಮ ಗುಣಮಟ್ಟದ ವಸ್ತುಗಳಿಗೆ ಆಫ‌ರ್‌ಗಳು, ರಿಯಾಯಿತಿ ಇವೆ ಎಂದು ಇನ್‌ಸ್ಟ್ರಾಗ್ರಾಂ, ಫೇಸ್‌ಬುಕ್‌ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಜಾಹಿರಾತು ನೀಡುತ್ತಿವೆ. ಅಂತಹ ವೆಬ್‌ಸೈಟ್‌ಗೆ ಭೇಟಿ ನೀಡಿದ ಕೂಡಲೇ ಕೆಲ ಮಾಹಿತಿ ಪರೋಕ್ಷವಾಗಿ ವಂಚಿಸುತ್ತಿದ್ದಾರೆ. ಜತೆಗೆ ವಸ್ತುಗಳ ಖರೀದಿಗೆ ಮುಂಗಡವಾಗಿಯೇ ಹಣ ಕಟ್ಟಿಸಿಕೊಂಡು ಮೋಸ ಮಾಡುತ್ತಿದ್ದಾರೆ.

ನಕಲಿ ವೆಬ್‌ಸೈಟ್‌ ಪತ್ತೆ ಕಷ್ಟ!
ಸಾಮಾನ್ಯವಾಗಿ ನಕಲಿ ಇ-ಕಾಮರ್ಸ್‌ ವೆಬ್‌ಸೈಟ್‌ಗಳು ಪತ್ತೆ ಹಚ್ಚುವುದು ಸಾಮಾನ್ಯ ವ್ಯಕ್ತಿಗೆ ಕಷ್ಟವಾಗುತ್ತದೆ. ವೆಬ್‌ಸೈಟ್‌ ಯಾರದ್ದು? ಮಾಲಕರ್ಯಾರು? ಎಂದೆಲ್ಲ ಶೋಧಿಸುವುದು ಸವಾಲಿನ ಕೆಲಸ. ಜತೆಗೆ ಅಸಲಿ ವೆಬ್‌ಸೈಟ್‌ಗಳ ಮಾದರಿಯಲ್ಲೇ ಇರುವುದರಿಂದ, ಕೆಲವೊಂದು ರಿಯಾಯಿತಿಗಳ ಆಮಿಷವೊಡ್ಡುವುದರಿಂದ ಸಾರ್ವಜನಿಕರು ಬೇಗನೆ ವಂಚನೆಗೊಳ್ಳಗಾಗುತ್ತಿದ್ದಾರೆ. ಮತ್ತೂಂದೆಡೆ ವೆಬ್‌ಸೈಟ್‌ ತೆರೆಯಲು ಕಠಿನವಾದ ನಿಯಮಗಳು ಭಾರತದಲ್ಲಿ ಇಲ್ಲ. ಕೇಂದ್ರ ಸರಕಾರ ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡುವ ಬದಲು, ಕಠಿನವಾದ ಮಾನದಂಡಗಳನ್ನು ಜಾರಿಗೆ ತರಲಿ. ಅವುಗಳನ್ನು ಪೂರೈಸದಿರುವ ವೆಬ್‌ಸೈಟ್‌ಗಳನ್ನು ನಿಷ್ಟ್ರೀಯಗೊಳಿಸಬೇಕು ಎನ್ನುತ್ತಾರೆ ಸೈಬರ್‌ ತಜ್ಞೆ ಶುಭಮಂಗಳ.

ಸಾರ್ವಜನಿಕರು ಏನು ಮಾಡಬೇಕು?
-ಯಾವುದೇ ಇ-ಕಾಮರ್ಸ್‌ ವೆಬ್‌ಸೈಟ್‌ಗೆ ಭೇಟಿ ನೀಡುವ ಮೊದಲು ಪರಿಶೀಲಿಸಬೇಕು.
-ವಿಮರ್ಶೆಗಳ ಬಗ್ಗೆ ಜಾಗೃತರಾಗಿರಿ.
-ಒಂದು ವೇಳೆ ವೆಬ್‌ಸೈಟ್‌ ಬಗ್ಗೆ ಅನುಮಾನವಿದ್ದರೆ “ಕ್ಯಾಶ್‌ ಆನ್‌ ಡೆಲಿವರಿ’ ಆಯ್ಕೆ ಮಾಡಿಕೊಳ್ಳಿ.
-ಯಾವುದೇ ಕಾರಣಕ್ಕೂ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಮಾಹಿತಿ, ನೆಟ್‌ಬ್ಯಾಂಕ್‌ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ನೊಂದಾಯಿಸಬೇಡಿ.

ಇನ್‌ಸ್ಟ್ರಾಗ್ರಾಂ, ಫೇಸ್‌ಬುಕ್‌ನಲ್ಲಿ ಮಾರಾಟ ವಸ್ತುಗಳ ಜಾಹಿರಾತು ಅಥವಾ ಫೋಟೋಗಳನ್ನು ಸಾರ್ವಜನಿಕರು ನಂಬಬಾರದು. ಸ್ಟಾಂಡರ್ಡ್‌ ಕಂಪನಿಗಳಲ್ಲಿ ವಸ್ತುಗಳ ಖರೀದಿಸಿದರೆ ಉತ್ತಮ. ಜತೆಗೆ ಅಪರಿಚಿತ ಮತ್ತು ಅಧಿಕೃತ ಜಾಹಿರಾತು ನೀಡದ ವೆಬ್‌ಸೈಟ್‌ಗಳಲ್ಲಿ ಯಾವುದೇ ವ್ಯವಹಾರ ನಡೆಸಬಾರದು. ಉತ್ತಮ ಗುಣಮಟ್ಟದ ವಸ್ತುಗಳ ರಿಯಾಯಿತಿ,. ಆಫ‌ರ್‌ಗಳ ಬಗ್ಗೆ ಶೋಧಿಸುವುದು ಅಗತ್ಯ. ಮತ್ತೂಂದೆಡೆ ಇಂತಹ ವೆಬ್‌ಸೈಟ್‌ಗಳ ವಿಮರ್ಶೆ ಕೂಡ ನಕಲಿಯಾಗಿರುತ್ತದೆ. ಅದನ್ನು ನಂಬಬಾರದು.
– ಅನೂಪ್‌ ಶೆಟ್ಟಿ,  ಈಶಾನ್ಯ ವಿಭಾಗದ ಡಿಸಿಪಿ

ಕೇಂದ್ರ ಸರ್ಕಾರ ಸೈಬರ್‌ ಭದ್ರತೆ ಬಗ್ಗೆ ಕಠಿಣ ಕ್ರಮಕೈಗೊಳ್ಳುತ್ತಿಲ್ಲ. ನಕಲಿ ವೆಬ್‌ಸೈಟ್‌ಗಳನ್ನು ನಿಷ್ಕ್ರಿಯಗೊಳಿಸಲು ಸೂಕ್ತ ಕ್ರಮಕೈಗೊಳ್ಳಬೇಕಿದೆ. ಭವಿಷ್ಯದಲ್ಲಿ ಎದುರಾಗುವ ಸೈಬರ್‌ ಸಮಸ್ಯೆ ತಡೆಯಲು ಈಗಲೇ ಪ್ರಮುಖವಾಗಿ ಕೇಂದ್ರದಲ್ಲಿ ಸೈಬರ್‌ ಸೆಕ್ಯೂರಿಟಿ ಸಚಿವಾಲಯ ತೆರೆಯಬೇಕಿದೆ.
– ಶುಭಮಂಗಳ.  ಸೈಬರ್‌ ತಜ್ಞೆ.

-ಮೋಹನ್‌ ಭದ್ರಾವತಿ

ಟಾಪ್ ನ್ಯೂಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.