ಹೂಡಿಕೆಗಾಗಿ ಸಾಲ ಮಾಡುವ ಮುನ್ನ ಯೋಚಿಸಿ


Team Udayavani, Nov 22, 2020, 5:45 AM IST

ಹೂಡಿಕೆಗಾಗಿ ಸಾಲ ಮಾಡುವ ಮುನ್ನ ಯೋಚಿಸಿ

ಸಾಲ ಮಾಡದೆ ಬದುಕುತ್ತೇನೆ ಎಂದು ಸಂಕಲ್ಪ ತೊಡುವ ಧೈರ್ಯ ಇಂದಿನ ಪೀಳಿಗೆಯ ಜನರಿಗೆ ಇಲ್ಲ .ಅಷ್ಟಕ್ಕೂ ದೊಡ್ಡವರೇ ಹೇಳಿದ್ದಾರಲ್ಲ “ಸಾಲ ಮಾಡಿಯಾದರೂ ತುಪ್ಪ ತಿನ್ನು’ ಎಂದು. ಅಷ್ಟಕ್ಕೂ ಸಾಲ ಮಾಡುವುದು ಅಪರಾಧವೇನಲ್ಲ. ಆದರೆ ಮೈ ತುಂಬಾ ಸಾಲ ಮಾಡಿಕೊಂಡು ತೀರಿಸಲಾಗದೆ ನೆಮ್ಮದಿ ಹಾಳಾಗಬಾರದು ಅಷ್ಟೇ.

ಹೂಡಿಕೆ ಮಾಡುವಾಗ ಎಷ್ಟು ಲೆಕ್ಕಾಚಾರ ಹಾಕುತ್ತೀರೋ ಅಷ್ಟೇ ಜಾಗ್ರತೆಯನ್ನು ಸಾಲ ತೆಗೆದುಕೊಳ್ಳುವಾಗಲೂ ವಹಿಸಬೇಕು. ಇಲ್ಲವಾದರೆ ಸಾಲದ ಶೂಲದಲ್ಲಿ ಸಿಲುಕಿ ಒದ್ದಾಡಬೇಕಾಗುತ್ತದೆ. ಹಾಗಾದರೆ ಸಾಲ ಮಾಡುವಾಗ ಯಾವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ನೋಡೋಣ ಬನ್ನಿ.

ಅಗತ್ಯಕ್ಕಿಂತ ಹೆಚ್ಚು ಸಾಲ ಬೇಡ
“ಹಾಸಿಗೆಯಿದ್ದಷ್ಟೇ ಕಾಲು ಚಾಚಬೇಕು’ ಎಂದು ಹಿರಿಯರು ಹೇಳಿದ್ದಾರೆ. ಈ ಮಾತನ್ನು ಖರ್ಚು ಮಾಡುವಾಗ ಮಾತ್ರವಲ್ಲ, ಸಾಲ ಮಾಡುವಾಗಲೂ ನೆನಪಿಟ್ಟುಕೊಳ್ಳಬೇಕು. ಸುಖಾಸುಮ್ಮನೆ ಸಾಲ ಮಾಡಲು ಹೋಗಬೇಡಿ. ಸಾಲ ಕೊಡಲು ಬ್ಯಾಂಕ್‌, ಹಣಕಾಸು ಸಂಸ್ಥೆಗಳು ತುದಿಗಾಲಲ್ಲಿ ನಿಂತಿರುತ್ತವೆ. ಹಾಗೆಂದು ಅವರು ಕೊಡುತ್ತಾರೆ, ನಾನು ತೆಗೆದುಕೊಳ್ಳುತ್ತೇನೆ ಎಂಬ ಮನಃಸ್ಥಿತಿ ಬೇಡ. ಆದರೆ ಜಮೀನು, ಮನೆ, ವಾಹನ ಖರೀದಿಯಂಥ ಸಂದರ್ಭಗಳಲ್ಲಿ ಸಾಲವನ್ನು ಹೊರೆಯಾಗದಂತೆ ನಿರ್ವಹಿಸಲು ಯೋಜನೆ ಹಾಕಿಕೊಳ್ಳುವುದು ಅಗತ್ಯ. ಸಾಲ ಮಾಡುವಾಗ ಮಾಸಿಕ ಇಎಂಐ ನಿಮ್ಮ ಮಾಸಿಕ ಆದಾಯದ ಶೇ.40ಕ್ಕಿಂತ ಹೆಚ್ಚಿರದಂತೆ ಎಚ್ಚರ ವಹಿಸಿ. ಒಂದು ವೇಳೆ ಇಎಂಐ ಮೊತ್ತ ಆದಾಯದ ಶೇ.50-70ರಷ್ಟಿದ್ದರೆ, ಭವಿಷ್ಯಕ್ಕೆ ಒಂದಿಷ್ಟು ಹಣ ಕೂಡಿಡುವುದು ನಿಮಗೆ ಕಷ್ಟವಾಗುತ್ತದೆ.

ಹೂಡಿಕೆಗಾಗಿ ಸಾಲ ಮಾಡುವ ಮುನ್ನ ಯೋಚಿಸಿ: ಕೆಲವರು ಮೈ ತುಂಬಾ ಸಾಲ ಮಾಡಿಕೊಂಡು ಹೊಸ ಉದ್ಯಮ ಪ್ರಾರಂಭಿಸುತ್ತಾರೆ. ಈ ರೀತಿ ಸಾಲ ಮಾಡಿ ಬಂಡವಾಳ ಹೂಡಿದರೆ ಆಮೇಲೆ ಲಾಭ ಬರುತ್ತದೆ. ಕೈ ತುಂಬಾ ಹಣ ಸಿಗುತ್ತದೆ ಎಂಬ ಲೆಕ್ಕಾಚಾರ ಅವರದಾಗಿರುತ್ತದೆ. ಆದರೆ ಹೊಸ ಉದ್ಯಮದಲ್ಲಿ ಸಾಕಷ್ಟು ಆಪಾಯಗಳು ಇದ್ದೇ ಇರುತ್ತವೆ. ಹೀಗಾಗಿ ಹೂಡಿಕೆ ಮಾಡುವ ಉದ್ದೇಶದಿಂದ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಾಲ ಮಾಡುವುದು ಅಪಾಯವನ್ನು ಮೈ ಮೇಲೆ ಎಳೆದುಕೊಂಡಂತೆ. ಇನ್ನು ಕೆಲವರು ಮದುವೆ, ಪ್ರವಾಸ, ಐಷಾರಾಮಿ ಬದುಕು..ಮತ್ತಿತರ ಕಾರಣಗಳಿಗಾಗಿ ಸಾಲ ಮಾಡುತ್ತಾರೆ. ಇಂಥ ಸಾಲಗಳು ಹೊರೆಯಾಗುವ ಸಾಧ್ಯತೆ ಹೆಚ್ಚು.

ಸಾಲದ ಅವಧಿ ಕೂಡ ನಿರ್ಣಾಯಕ: ಕೆಲವರು ಇಎಂಐ ಮೊತ್ತ ಕಡಿಮೆ ಮಾಡಲು ದೀರ್ಘಾವಧಿ ಸಾಲ ಪಡೆಯುತ್ತಾರೆ.ಬ್ಯಾಂಕ್‌ಗಳು ಕೂಡ ದೀರ್ಘಾವಧಿ ಸಾಲ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತವೆ. ಆದರೆ ಸಾಲದ ಮರುಪಾವತಿ ಅವಧಿ ಆದಷ್ಟು ಚಿಕ್ಕದಾಗಿದ್ದರೆ ಒಳ್ಳೆಯದು. ಗೃಹ ಸಾಲಗಳು ದೀರ್ಘಾ ವಧಿಯದಾಗಿರುತ್ತವೆ. ಆದರೆ ಈ ರೀತಿ ದೀರ್ಘಾವಧಿ ಸಾಲ ಪಡೆಯುವುದರಿಂದ ಅಧಿಕ ಬಡ್ಡಿ ಪಾವತಿಸಬೇಕಾಗುತ್ತದೆ. ಇದೊಂಥರ ಹೊರೆಯೇ. ನಿಮ್ಮ ಆದಾಯಕ್ಕೆ ಹೊಂದುವ, ಆದಷ್ಟು ಕಡಿಮೆ ಅವಧಿಯ ಸಾಲ ಪಡೆಯಿರಿ.

ಅವಧಿಗೂ ಮುನ್ನ ತೀರಿಸಲು ಪ್ರಯತ್ನಿಸಿ: ಕೆಲವರು ಸಾಲದ ಅವಧಿ ಇನ್ನೂ ಅನೇಕ ವರ್ಷಗಳಿವೆ. ಅವಧಿಗೂ ಮುನ್ನವೇ ಸಾಲ ತೀರಿಸುವುದು ಯಾಕೆ ಎಂದು ಸುಮ್ಮನಿದ್ದು ಬಿಡುತ್ತಾರೆ. ಅಲ್ಲದೆ ಗೃಹ ಸಾಲ ಸೇರಿದಂತೆ ಕೆಲವು ವಿಧದ ಸಾಲಗಳಿಗೆ ತೆರಿಗೆ ವಿನಾಯಿತಿ ಇರುವ ಕಾರಣ ಸಾಲವನ್ನು ಮರುಪಾವತಿಸುವಷ್ಟು ಹಣವಿದ್ದರೂ ಕಟ್ಟುವುದಿಲ್ಲ. ಆದರೆ ಇದು ತಪ್ಪು. ತೆರಿಗೆ ವಿನಾಯಿತಿ ಪಡೆಯಲು ಇನ್ನೂ ಅನೇಕ ಅವಕಾಶಗಳಿವೆ.ಆ ಕಾರಣಕ್ಕೆ ಸುಮ್ಮನೆ ಬಡ್ಡಿ ಕಟ್ಟುವುದು ನಿಮ್ಮ ಜೇಬಿಗೇ ಹೊರೆ.

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.