ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ಬರುತ್ತಿರುವ ವೇಳೆ ಸಿಡಿಲು ಬಡಿದು ತಾಯಿ, ಮಗಳು ಸಾವು
Team Udayavani, Jul 11, 2021, 6:43 PM IST
ಬೀದರ್ : ಸಿಡಿಲು ಬಡಿದು ತಾಯಿ ಮತ್ತು ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರವಿವಾರ ಸಾಯಂಕಾಲ ಭಾಲ್ಕಿ ತಾಲೂಕಿನ ಖುದಾನಪುರ ಗ್ರಾಮದ ಬಳಿ ನಡೆದಿದೆ.
ಗ್ರಾಮದ ಭಾಗ್ಯಶ್ರೀ ಭೀಮರಾವ್ ಮೇತ್ರೆ (32) ಮತ್ತು ಆಕೆಯ ಮಗಳು ವೈಸಾಲಿ (9) ಮೃತಪಟ್ಟ ದುರ್ದೈವಿಗಳು.
ಹೊಲದಲ್ಲಿ ಕೆಲಸ ಮುಗಿಸಿ ತಮ್ಮ ಮನೆಗೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಮೆಹಕರ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ವಿಜಯಪುರ :ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ರೈತನ ಶವ ಪತ್ತೆ