ಟಿಕ್ ಟಾಕ್ ವೇಳೆ ಸ್ಪೈನಲ್ ಕಾರ್ಡ್ ಮುರಿದಿದ್ದ ಯುವಕ ಕೊನೆಯುಸಿರು
Team Udayavani, Jun 23, 2019, 3:48 PM IST
ಬೆಂಗಳೂರು: ಟಿಕ್ ಟಾಕ್ ಗೀಳಿಗೆ ಹೋಗಿ ಸ್ಪೈನಲ್ ಕಾರ್ಡ್ ಮುರಿದು ಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಕೊನೆಯುಸಿರೆಳೆದಿದ್ದಾನೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗ್ರಾಮದ ಕುಮಾರ್ ಜೂನ್ 15 ರಂದು ಸ್ನೇಹಿತರ ಜೊತೆ ಟಿಕ್ಟಾಕ್ನಲ್ಲಿ ಸಾಹಸ ಪ್ರದರ್ಶಿಸುವ ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ.
ಕುಟುಂಬದ ಆಧಾರ: ಬಡತನದಲ್ಲಿ ಬೆಳೆದಿದ್ದ ಕುಮಾರ್, ರಸಮಂಜರಿಗಳಲ್ಲಿ ಹಾಡುವ ಮೂಲಕ ಬಂದ ಹಣದಲ್ಲಿ ಕುಟುಂಬ ನಿರ್ವಹಿಸುತ್ತಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭೆ ಹೊರಹಾಕಿದರೆ ಅವಕಾಶ ಸಿಗುತ್ತದೆ ಎಂಬ ಆಸೆ ಬದುಕಿಗೆ ಎರವಾಗಿದೆ.
ಸಹಾಯಕ್ಕೆ ಮೊರೆ: ಚಿಕಿತ್ಸೆಗೆ 10 ಲಕ್ಷ ರೂ. ಖರ್ಚಾಗಲಿದ್ದು, ತಂದೆ ತಾಯಿ ಬಳಿ ಹಣವಿಲ್ಲ. ನೆರವಿಗೆ ಕುಟುಂಬ ಮನವಿ ಮಾಡಿದೆ.