ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಅತಿಥಿಗಳಿಗಿಲ್ಲ ಮಣೆ; ವಿಜೇತರಿಂದಲೇ ಪದಕಧಾರಣೆ!


Team Udayavani, Jul 15, 2021, 7:00 AM IST

ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಅತಿಥಿಗಳಿಗಿಲ್ಲ ಮಣೆ; ವಿಜೇತರಿಂದಲೇ ಪದಕಧಾರಣೆ!

ಟೋಕಿಯೊ : ಟೋಕಿಯೊ ಒಲಿಂಪಿಕ್ಸ್‌ ಮತ್ತೂಂದು ಸಂಪ್ರದಾಯ ಹಾಗೂ ಆಕರ್ಷಣೆಯಿಂದ ವಂಚಿತವಾಗಲಿದೆ. ಇಲ್ಲಿನ ವಿಜೇತರ ಕೊರಳಿಗೆ ಆತಿಥಿಗಳು ಪದಕ ಹಾಕುವುದಿಲ್ಲ, ಬದಲಿಗೆ ಗೆದ್ದವರೇ ತಮ್ಮ ಪದಕಗಳನ್ನು ತಾವೇ ಕೊರಳಿಗೆ ಹಾಕಿಕೊಳ್ಳಬೇಕಿದೆ. ಎಲ್ಲವೂ ಕೊರೊನಾ ಎಫೆಕ್ಟ್!

ಬದಲಾದ ಕ್ರಮದಂತೆ, ವಿಜೇತರ ಮೂರು ಪದಕಗಳನ್ನು ಮೂರು ಟ್ರೇಗಳಲ್ಲಿ ಹಾಕಿ ಪೋಡಿಯಂ ಮೇಲೆ ಇಡಲಾಗುವುದು. ವಿಜೇತರು ಬಂದು ತಮ್ಮ ಪದಕಗಳನ್ನು ತಾವೇ ಕುತ್ತಿಗೆಗೆ ಹಾಕಿಕೊಳ್ಳಬೇಕು. ಚಪ್ಪಾಳೆ ಇಲ್ಲ, ಅಭಿನಂದನೆ ಇಲ್ಲ, ಅಪ್ಪುಗೆ ಇಲ್ಲ, ಹಸ್ತಲಾಘವ ಇಲ್ಲ, ಯಾವ ಸಂಭ್ರಮವೂ ಇಲ್ಲ!

ಟೋಕಿಯೊ ಒಲಿಂಪಿಕ್ಸ್‌ನ ಈ ನಿಯಮವನ್ನು ಬುಧವಾರ ಐಒಸಿ ಅಧ್ಯಕ್ಷ ಥಾಮಸ್‌ ಬಾಕ್‌ ಪ್ರಕಟಿಸಿದರು.
“ಕೊರೊನಾದಿಂದಾಗಿ ಈ ಸಂಪ್ರದಾಯವನ್ನು ಕೈಬಿಡಲಾಗಿದೆ. ವಿಜೇತರು ಅವರ ವರೇ ಪದಕಕಳನ್ನು ಧರಿಸಿಬೇಕಿದೆ. ಟ್ರೇಯಲ್ಲಿ ಪದಕ ತಂದಿರಿಸುವವರು ಕೂಡ ಇದನ್ನು ಗ್ಲೌಸ್‌ ಧರಿಸಿಯೇ ಮುಟ್ಟಿರುತ್ತಾರೆ. ಪದಕ ಸಮಾರಂಭದಲ್ಲಿ ವಿಜೇತರಿಗೆ ಯಾವ ವಿಶೇಷ ಗೌರವವೂ ಇರುವುದಿಲ್ಲ. ಇದು ಕೇವಲ ಸಾಂಕೇತಿಕ ಸಮಾರಂಭ’ ಎಂದು ಬಾಕ್‌ ಸ್ಪಷ್ಟಪಡಿಸಿದರು.

ಕೊರೊನಾ ಹೆಚ್ಚಳ
ಒಲಿಂಪಿಕ್ಸ್‌ ಸಮೀಪಿಸುತ್ತಿದ್ದಂತೆಯೆ ಟೋಕಿಯೊದಲ್ಲಿ ಕೊರೊನಾ ಸಂಖ್ಯೆಯೂ ಹೆಚ್ಚಿದೆ. ಬುಧವಾರ 1,149 ಕೇಸ್‌ ದಾಖಲಾಗಿದೆ. ಕಳೆದ 6 ತಿಂಗಳಲ್ಲೇ ಇದು ಜಪಾನ್‌ ರಾಜಧಾನಿಯಲ್ಲಿ ಕಂಡುಬಂದ ಅತೀ ಹೆಚ್ಚಿನ ಸೋಂಕಿನ ಪ್ರಕರಣವಾಗಿರುವುದು ಕಳವಳದ ಸಂಗತಿ.

ನಿರಾಶ್ರಿತರ ತಂಡದಲ್ಲಿ ಕೊರೊನಾ
ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ 29 ಸದಸ್ಯರ ನಿರಾಶ್ರಿತರ ಕ್ರೀಡಾ ತಂಡಕ್ಕೆ (ರೆಪ್ಯುಜಿ ಟೀಮ್‌) ಕೊರೊನಾ ಆತಂಕ ಎದುರಾಗಿದೆ. ಕತಾರ್‌ನಲ್ಲಿ ಅಭ್ಯಾಸ ನಡೆಸುತ್ತಿರುವ ಈ ತಂಡದ ಅಧಿಕಾರಿಯೊಬ್ಬರಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ. ಹೀಗಾಗಿ ಈ ತಂಡದ ಟೋಕಿಯೊ ಪ್ರಯಾಣ ವಿಳಂಬಗೊಳ್ಳಲಿದೆ.

ಸಿರಿಯಾ, ಸೌತ್‌ ಸುಡಾನ್‌, ಎರಿಟ್ರಿಯಾ, ಅಫ್ಘಾನಿಸ್ಥಾನ, ಇರಾನ್‌ ಮೊದಲಾದ ನಿರಾಶ್ರಿತ ಕ್ರೀಡಾಪಟುಗಳು ಈ ತಂಡದಲ್ಲಿದ್ದು, ಒಲಿಂಪಿಕ್ಸ್‌ ಧ್ವಜದಡಿ 12 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಕಳೆದ ರಿಯೋ ಒಲಿಂಪಿಕ್ಸ್‌ನಲ್ಲಿ ಮೊದಲ ಸಲ ನಿರಾಶ್ರಿತರ ತಂಡ ಪ್ರತಿನಿಧಿಸಿತ್ತು.

ಬ್ರಝಿಲ್‌ ತಂಡ ತಂಗಿರುವ ಹೋಟೆಲ್‌ನಲ್ಲೇ ಕೊರೊನಾ!
ಒಲಿಂಪಿಕ್ಸ್‌ ಜೈವಿಕ ಸುರಕ್ಷಾ ವಲಯದಲ್ಲಿ ಬರುವ ಹೊಟೇಲೊಂದರ 7 ಸಿಬಂದಿಗೆ ಕೊರೊನಾ ಸೋಂಕು ಬಂದಿರುವುದು ಖಚಿತವಾಗಿದೆ! ಹಮನತ್ಸು ನಗರದಲ್ಲಿರುವ ಈ ಹೊಟೇಲ್‌ನಲ್ಲಿ ಬ್ರಝಿಲ್‌ ತಂಡ ಕೂಡ ತಂಗಿದೆ. ಈ ಹೊಟೇಲ್‌ನಲ್ಲೇ ಸೋಂಕು ಪತ್ತೆಯಾಗಿರುವುದು ಎಲ್ಲರಿಗೂ ಆತಂಕ ಮೂಡಿಸಿದೆ. ಸದ್ಯ ಬ್ರಝಿಲ್‌ ಆ್ಯತ್ಲೀಟ್ಸ್‌ಗಳು ಸುರಕ್ಷಾವಲಯದಲ್ಲಿರುವುದರಿಂದ ಆತಂಕಪಡುವ ಅಗತ್ಯವಿಲ್ಲ.

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.