ತಿರುಮಲದ ಈ ಸೇವೆಗೆ 1.5 ಕೋಟಿ ರೂ.! ಇದು ಜಗತ್ತಿನಲ್ಲೇ ಅತ್ಯಂತ ದುಬಾರಿ ಸೇವೆ
Team Udayavani, Jan 1, 2022, 9:30 PM IST
ತಿರುಮಲ : ಕ್ಯೂನಲ್ಲಿ ಗಂಟೆಗಟ್ಟಲೆ ಕಾದು ಅಥವಾ 300 ರೂ. ಪಾವತಿಸಿ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವುದನ್ನು ನೋಡಿರುತ್ತೀರಿ. ಆದರೆ, ಈಗ ತಿರುಮಲ ವೆಂಕಟೇಶ್ವರ ದೇವಾಲಯದ ಆಡಳಿತಮಂಡಳಿಯು ಜಗತ್ತಿನಲ್ಲೇ ಅತ್ಯಂತ ದುಬಾರಿ “ಸೇವೆ’ಯನ್ನು ಪರಿಚಯಿಸಲು ಮುಂದಾಗಿದೆ.
ಈ ವಿಶೇಷ ಸೇವೆಯ ಹೆಸರೇ “ಉದಯಾಸ್ತಮಾನ ಸೇವೆ’. ಇದಕ್ಕೆ ತಗಲುವ ವೆಚ್ಚ ಬರೋಬ್ಬರಿ 1 ಕೋಟಿ ರೂ.ಗಳಿಂದ ಒಂದೂವರೆ ಕೋಟಿ ರೂ.!
ಸುಪ್ರಭಾತಂನಿಂದ ಏಕಾಂತ ಸೇವೆವರೆಗೆ :
ಹೌದು.ಅಚ್ಚರಿಯಾದರೂ ಇದು ಸತ್ಯ. ಕೋಟಿ ರೂಪಾಯಿ ಪಾವತಿಸುವ ಭಕ್ತರು ಮತ್ತು ಅವರ ಕುಟುಂಬದ ಐವರು ಸದಸ್ಯರು ಗರ್ಭಗುಡಿಯ ಸಮೀಪ ಮತ್ತು ಇತರೆ ನಿರ್ದಿಷ್ಟ ಪ್ರದೇಶಗಳಲ್ಲಿ ಇಡೀ ದಿನ ಕುಳಿತು ಬೆಳಗ್ಗಿನ ಸುಪ್ರಭಾತಂನಿಂದ ಹಿಡಿದು ಸಂಜೆಯ ಏಕಾಂತ ಸೇವೆಯವರೆಗೆ ತಿಮ್ಮಪ್ಪನಿಗೆ ಸಲ್ಲುವ ಎಲ್ಲ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ವೀಕ್ಷಿಸಬಹುದು. ಇತರೆ ದಿನಗಳಲ್ಲಿ ಈ ಸೇವೆಗೆ 1 ಕೋಟಿ ರೂ. ಇದ್ದರೆ, ಶುಕ್ರವಾರ ಮಾತ್ರ ಅಭಿಷೇಕಂ ಕೂಡ ನೋಡಲು ಅವಕಾಶವಿರುವ ಕಾರಣ, ಇದರ ಮೊತ್ತ ಒಂದೂವರೆ ಕೋಟಿ ರೂ. ಆಗಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ : 70 ವರ್ಷಗಳ ಸಿನಿ ಪ್ರಯಾಣ ಮಾಡಿದ್ದ ಹಾಲಿವುಡ್ನ ಹಿರಿಯ ನಟಿ ಬೆಟ್ಟಿ ವೈಟ್ ನಿಧನ
ಎಷ್ಟು ಮಂದಿಗೆ ಅವಕಾಶ ಕಲ್ಪಿಸುವುದು, ಎಷ್ಟು ವರ್ಷಗಳ ಕಾಲ ಈ ಸೇವೆ ನೀಡುವುದು ಎಂಬ ಬಗ್ಗೆ ಅಂತಿಮ ನಿರ್ಧಾರವನ್ನು ಸದ್ಯದಲ್ಲೇ ಕೈಗೊಳ್ಳಲಾಗುವುದು. ಇದರಿಂದ ಬರುವ ಮೊತ್ತವನ್ನು ಸಂಪೂರ್ಣವಾಗಿ ಸೂಪರ್ ಸ್ಪೆಷಾಲಿಟಿ ಮಕ್ಕಳ ಹೃದ್ರೋಗ ಆಸ್ಪತ್ರೆಯ ನಿರ್ಮಾಣಕ್ಕೆ ಬಳಸಲಾಗುವುದು ಎಂದು ಟಿಟಿಡಿ ಹೇಳಿದೆ.
ಈ ಹಿಂದೆಯೂ ಅಂದರೆ 80ರ ದಶಕದಲ್ಲೂ ಉದಯಾಸ್ತಮಾನ ಸೇವೆ ನೀಡಲಾಗುತ್ತಿತ್ತು. ಅದರ ಆರಂಭಿಕ ದರ 1 ಲಕ್ಷ ರೂ. ಆಗಿತ್ತು. ಬಳಿಕ ಅದನ್ನು 10 ಲಕ್ಷ ರೂ.ಗೆ ಏರಿಸಲಾಯಿತು. ಸ್ಥಳಾವಕಾಶದ ಕೊರತೆ ಮತ್ತಿತರ ಕಾರಣಗಳಿಂದಾಗಿ 2010ರಲ್ಲಿ ಈ ಸೇವೆ ಸ್ಥಗಿತಗೊಳಿಸಲಾಯಿತು ಎಂದೂ ಟಿಟಿಡಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ