ನಿಯಮಾವಳಿಗಳನ್ನು ಪಾಲಿಸಿ ಮತ್ತೆ ಲಾಕ್ಡೌನ್ ಆಗುವುದನ್ನು ತಪ್ಪಿಸಿ : ಉಡುಪಿ ಜಿಲ್ಲಾಧಿಕಾರಿ
Team Udayavani, May 29, 2021, 8:29 PM IST
ಉಡುಪಿ : ಸರಕಾರ ಹಾಗೂ ಜಿಲ್ಲಾಡಳಿತ ನೀಡಿರುವ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮತ್ತೆ ಲಾಕ್ಡೌನ್ ಆಗುವುದನ್ನು ತಪ್ಪಿಸಿ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗುತ್ತಿವೆ. ಶೇ.38ರಷ್ಟು ಇದ್ದ ಪಾಸಿಟಿವಿಟಿ ಪ್ರಕರಣ ಶೇ.19ಕ್ಕೆ ಇಳಿಕೆಯಾಗಿದೆ. ಐಸಿಯು, ವೆಂಟಿಲೇಟರ್ಗಳ ಕೊರತೆಯಿಲ್ಲ. ಆಕ್ಸಿಜನ್ ಬಳಕೆಯೂ ಕಡಿಮೆಯಾಗಿದೆ. ಹಿಂದೆ 800 ಆಕ್ಸಿಜನ್ ಸಿಲಿಂಡರ್ಗಳು ಬಳಕೆಯಾಗುತ್ತಿದ್ದವು. ಶುಕ್ರವಾರ 390 ಆಕ್ಸಿಜನ್ ಸಿಲಿಂಡರ್ ಮಾತ್ರ ಬಳಕೆಯಾಗಿದೆ. ಇವುಗಳೆಲ್ಲ ಕೊರೊನಾ ಸೋಂಕು ಇಳಿಕೆಯ ಸೂಚನೆಗಳಾಗಿವೆ. ಲಾಕ್ಡೌನ್ ಕಟ್ಟುನಿಟ್ಟಾಗಿ ಜಾರಿಯಲ್ಲಿರುವುದರಿಂದ ಇದು ಸಾಧ್ಯವಾಗಿದೆ. ವಿನಾ ಕಾರಣ ಓಡಾಟ ಮಾಡುವ ವಾಹನಗಳನ್ನು ಮುಟ್ಟುಗೋಲು ಹಾಕಲಾಗುತ್ತಿದೆ.
ಇದನ್ನೂ ಓದಿ :ಕೋವಿಡ್ ಮುಕ್ತ ಗ್ರಾ.ಪಂ.ಗಳಿಗೆ ಹೆಚ್ಚಿನ ಅನುದಾನ : ಸಚಿವ ಕೋಟ
ಜೂ.7ರ ಒಳಗೆ ಪಾಸಿಟಿವಿಟಿ ಪ್ರಕರಣ ಶೇ.10ರ ಒಳಗೆ ಬರಬೇಕನ್ನುವ ಗುರಿ ಹೊಂದಲಾಗಿದೆ. ಇಷ್ಟಕ್ಕೆ ಇಳಿಕೆಯಾದರೆ ಮುಂದಿನ ಲಾಕ್ಡೌನ್ ತಪ್ಪಿಸಬಹುದಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಕೂಡ ಕೋವಿಡ್ ತಪಾಸಣೆಯನ್ನು ಹೆಚ್ಚಳ ಮಾಡಿದ್ದಾರೆ. ದಿನವೊಂದಕ್ಕೆ 3,500ರಷ್ಟು ಕೋವಿಡ್ ತಪಾಸಣೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ಸಾರ್ವಜನಿಕರೂ ಜಿಲ್ಲಾಡಳಿತಕ್ಕೆ ಇದೇ ರೀತಿ ಸಹಕಾರ ನೀಡಬೇಕು. ವಿನಾ ಕಾರಣ ಓಡಾಟ ಮಾಡಿದರೆ ಕಠಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ