ಟೋಕಿಯೊ ಒಲಿಂಪಿಕ್ಸ್ : ಬಂಗಾರ ಬೇಟೆಗೆ ಬಂಪರ್ ಬಹುಮಾನ
Team Udayavani, Jul 15, 2021, 7:20 AM IST
ಹೊಸದಿಲ್ಲಿ: ಟೋಕಿಯೊದಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ರಾಜ್ಯ ಸರಕಾರಗಳು ನಗದು ಬಹುಮಾನವನ್ನು ಫೋಷಿಸಿವೆ. ಆದರೆ ಇದರಲ್ಲಿ ಏಕರೂಪತೆ ಇಲ್ಲ. ಕನಿಷ್ಠ 25 ಲಕ್ಷ ರೂ.ಗಳಿಂದ ಮೊದಲ್ಗೊಂಡು 6 ಕೋ.ರೂ. ವರೆಗೂ ಈ ಮೊತ್ತ ನಿಗದಿಗೊಂಡಿದೆ.
ಅತೀ ಹೆಚ್ಚು 31 ಕ್ರೀಡಾಪಟುಗಳನ್ನು ಒಲಿಂಪಿಕ್ಸ್ಗೆ ಕಳುಹಿಸುವ ಹರ್ಯಾಣ ಸರಕಾರ, ತನ್ನ ರಾಜ್ಯದ ಸ್ವರ್ಣ ವಿಜೇತರಿಗೆ 6 ಕೋಟಿ ರೂ.ಗಳ ದೊಡ್ಡ ಮೊತ್ತವನ್ನು ನೀಡಲು ನಿರ್ಧರಿಸಿರುವುದು ವಿಶೇಷ. ಕೇವಲ 3 ಕ್ರೀಡಾಪಟುಗಳನ್ನು ಹೊಂದಿರುವ ಪಶ್ಚಿಮ ಬಂಗಾಲ, ಸ್ವರ್ಣ ವಿಜೇತರಿಗೆ ನೀಡುವುದು ಕೇವಲ 25 ಲಕ್ಷ ರೂ. ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಬಂಗಾಲದ ಕ್ರೀಡಾ ಸಚಿವ ಎಂಬುದಿಲ್ಲಿ ಉಲ್ಲೇಖನೀಯ!
ಉದಾಹರಣೆಗೆ, ಕುಸ್ತಿಪಟು ಭಜರಂಗ್ ಪುನಿಯ ಚಿನ್ನ ಗೆದ್ದರೆ ಅವರಿಗೆ 6 ಕೋಟಿ ರೂ. ಸಿಗಲಿದೆ. ಅವರು ಹರ್ಯಾಣದ ಪ್ರತಿನಿಧಿ. ಅದೇ, ಆರ್ಚರ್ ಅತನು ದಾಸ್ ಬಂಗಾರ ಗೆದ್ದರೆ ಸಿಗುವುದು ಕೇವಲ 25 ಲಕ್ಷ ರೂ. ಕಾರಣ, ಅವರು ಪಶ್ಚಿಮ ಬಂಗಾಲದವರು!
ಹರ್ಯಾಣದ ಕ್ರೀಡಾ ಸಚಿವ ಸಂದೀಪ್ ಸಿಂಗ್ ಮಾಜಿ ಒಲಿಂಪಿಯನ್ ಎಂಬುದನ್ನು ಮರೆಯುವಂತಿಲ್ಲ. ಇವರು ಚಿನ್ನ ಗೆದ್ದವರಿಗೆ 6 ಕೋಟಿ ರೂ., ಬೆಳ್ಳಿ ವಿಜೇತರಿಗೆ 4 ಕೋಟಿ ರೂ., ಕಂಚು ಪಡೆದವರಿಗೆ 2.5 ಕೋಟಿ ರೂ. ನೀಡುವುದಾಗಿ ತಿಳಿಸಿದ್ದಾರೆ. ಈಗಾಗಲೇ ರಾಜ್ಯದ ಒಲಿಂಪಿಯನ್ಗಳಿಗೆ ಸಿದ್ಧತೆ ಹಾಗೂ ಖರ್ಚಿಗಾಗಿ ತಲಾ 5 ಲಕ್ಷ ರೂ. ನೀಡಿ ಪ್ರೋತ್ಸಾಹಿಸಿದೆ. ಉತ್ತರಪ್ರದೇಶ, ಒಡಿಶಾ ಮತ್ತು ಚಂಡೀಗಢದ ಚಿನ್ನ ವಿಜೇತರಿಗೂ 6 ಕೋಟಿ ರೂ. ಬಹುಮಾನ ಲಭಿಸಲಿದೆ. ಕರ್ನಾಟಕ, ಗುಜರಾತ್ ತಲಾ 5 ಕೋಟಿ ರೂ. ಘೋಷಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ