ಹಾಕಿ: ಮನ್‌ಪ್ರೀತ್‌ ಪಡೆಗೆ ಜಯ : ವನಿತೆಯರಿಗೆ ಸೋಲು


Team Udayavani, Jul 24, 2021, 11:01 PM IST

ಹಾಕಿ: ಮನ್‌ಪ್ರೀತ್‌ ಪಡೆಗೆ ಜಯ : ವನಿತೆಯರಿಗೆ ಸೋಲು

ಟೋಕಿಯೊ: ಹರ್ಮನ್‌ಪ್ರೀತ್‌ ಸಿಂಗ್‌ ಅವರ ಅವಳಿ ಗೋಲು ಹಾಗೂ ಕೀಪರ್‌ ಪಿ.ಆರ್‌. ಶ್ರೀಜೇಶ್‌ ಕೊನೆಯ ಹಂತದಲ್ಲಿ ತೋರಿದ ದಿಟ್ಟ ಸಾಹಸದಿಂದಾಗಿ ಟೋಕಿಯೊ ಒಲಿಂಪಿಕ್ಸ್‌ ಪುರುಷರ ಹಾಕಿ ಕೂಟದ “ಎ’ ವಿಭಾಗದ ಪಂದ್ಯದಲ್ಲಿ ಭಾರತ 3-2 ಗೋಲುಗಳಿಂದ ನ್ಯೂಜಿಲ್ಯಾಂಡನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ. ಆದರೆ ವನಿತಾ ವಿಭಾಗದಲ್ಲಿ ಬಲಿಷ್ಠ ಡಚ್ಚರ ವಿರುದ್ಧ ಭಾರತ 1-5 ಗೋಲುಗಳ ಸೋಲುಂಡಿದೆ.

ಪಂದ್ಯದ ಮೊದಲ ಗೋಲು ಸಿಡಿಸಿದ್ದೇ ನ್ಯೂಜಿಲ್ಯಾಂಡ್‌. 6ನೇ ನಿಮಿಷದಲ್ಲೇ ಕೇನ್‌ ರಸೆಲ್‌ ಪೆನಾಲ್ಟಿ ಕಾರ್ನರ್‌ ಮೂಲಕ ಗೋಲು ಬಾರಿಸಿ ಭಾರತಕ್ಕೆ ಆಘಾತವಿಕ್ಕಿದರು. ಆದರೆ ಭಾರತ ನಾಲ್ಕೇ ನಿಮಿಷದಲ್ಲಿ ತಿರುಗಿ ಬಿತ್ತು. ರೂಪಿಂದರ್‌ ಪಾಲ್‌ ಸಿಂಗ್‌ 10ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡಕ್ಕೆ ಸ್ಫೂರ್ತಿ ತುಂಬಿದರು. ಮುಂದಿನದು ಹರ್ಮನ್‌ಪ್ರೀತ್‌ ಸಾಹಸ. ಅವರು 26ನೇ ಹಾಗೂ 33ನೇ ನಿಮಿಷದಲ್ಲಿ ಬೆನ್ನು ಬೆನ್ನಿಗೆ ಗೋಲು ಬಾರಿಸಿ ಭಾರತಕ್ಕೆ ಮುನ್ನಡೆ ಒದಗಿಸಿದರು. ಸ್ಟೀಫ‌ನ್‌ ಜೆನ್ಸೆನ್‌ 43ನೇ ನಿಮಿಷದಲ್ಲಿ ಅಂತರ ತಗ್ಗಿಸಿದರು.

ನ್ಯೂಜಿಲ್ಯಾಂಡ್‌ ಆಕ್ರಮಣ
ಕೊನೆಯ ಕೆಲವು ನಿಮಿಷಗಳಲ್ಲಿ ನ್ಯೂಜಿಲ್ಯಾಂಡ್‌ ಅತ್ಯಂತ ಆಕ್ರಮಣಕಾರಿಯಾಗಿ ಆಡಿತು. ಭಾರತದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರು. ಆದರೆ ಗೋಲ್‌ ಕೀಪರ್‌ ಶ್ರೀಜೇಶ್‌ ತಡೆಗೋಡೆಯಂತೆ ನಿಂತು ತಂಡವನ್ನು ಕಾಪಾಡಿದರು.

ಭಾರತ ರವಿವಾರ ಬಲಿಷ್ಠ ಆಸ್ಟ್ರೇಲಿಯ ಸವಾಲನ್ನು ಎದುರಿಸಲಿದೆ. ದಿನದ ಇನ್ನೊಂದು ಪಂದ್ಯದಲ್ಲಿ ಕಾಂಗರೂ ಪಡೆ ಜಪಾನ್‌ ವಿರುದ್ಧ 5-3 ಅಂತರದ ಗೆಲುವು ದಾಖಲಿಸಿದೆ.

ಇದನ್ನೂ ಓದಿ : ಜುಲೈ 25 ರಿಂದ ಧಾರ್ಮಿಕ ಸ್ಥಳಗಳು ಭಕ್ತರಿಗೆ ಮುಕ್ತ : ಎಲ್ಲ ಬಗೆಯ ಸೇವೆಗಳಿಗೆ ಅವಕಾಶ

ಆರಂಭ ಖುಷಿ ತಂದಿದೆ
“ಹಿನ್ನಡೆಯ ಬಳಿಕ ಭಾರತ ಕೆಚ್ಚೆದೆಯ ಪ್ರದರ್ಶನ ನೀಡಿ ಗೆಲುವು ಸಾಧಿಸಿದ್ದು ಖುಷಿ ತಂದಿದೆ. ಆದರೆ ಆಸ್ಟ್ರೇಲಿಯ ಎದುರಿನ ರವಿವಾರದ ಸ್ಪರ್ಧೆ ಬಹಳ ಕಠಿನ. ಸವಾಲಿಗೆ ನಮ್ಮವರು ಸಜ್ಜಾಗಿದ್ದಾರೆ’ ಎಂದಿದ್ದಾರೆ ಕೋಚ್‌ ಗ್ರಹಾಂ ರೀಡ್‌.

ವನಿತೆಯರ ವೈಫ‌ಲ್ಯ
ರಾಣಿ ರಾಮ್‌ಪಾಲ್‌ ಪಡೆ ನೆದರ್ಲೆಂಡ್ಸ್‌ಗೆ ಸರಿಸಮನಾದ ಹೋರಾಟ ನೀಡಲು ಸಂಪೂರ್ಣ ವಿಫ‌ಲವಾಯಿತು. ಪರಿಣಾಮ, 1-5 ಅಂತರದ ದೊಡ್ಡ ಸೋಲನ್ನು ಹೊತ್ತುಕೊಂಡಿತು.

6ನೇ ನಿಮಿಷದಲ್ಲೇ ಖಾತೆ ತೆರೆದ ನೆದರ್ಲೆಂಡ್ಸ್‌ ಮತ್ತೆ ಹಿಂದಿರುಗಿ ನೋಡಲಿಲ್ಲ. ನಾಯಕಿ ರಾಣಿ ರಾಮ್‌ಪಾಲ್‌ 10ನೇ ನಿಮಿಷದಲ್ಲಿ ಪಂದ್ಯವನ್ನು ಸಮಬಲಕ್ಕೆ ತಂದುದಷ್ಟೇ ಭಾರತದ ಸಾಹಸವೆನಿಸಿತು.

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.