ಪಡುಕರೆ ಕಾಂಡ್ಲಾವನ : ಕಯಾಕಿಂಗ್ ಸಾಹಸ ಕ್ರೀಡೆಯಲ್ಲಿ ಉಡುಪಿ ಜಿಲ್ಲಾಧಿಕಾರಿ
Team Udayavani, Mar 8, 2022, 12:59 PM IST
ಕೋಟ : ಸಾಲಿಗ್ರಾಮ ಸಮೀಪದಲ್ಲಿ ಸೀತಾ ನದಿಯ ಹಿನ್ನೀರಿನಲ್ಲಿನ ಕಾಂಡ್ಲಾ ವನದ ನಡುವೆ ನಡೆಯುತ್ತಿರುವ ಕಯಾಕಿಂಗ್ ಸಾಹಸ ಕ್ರೀಡೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ
ರಾವ್ ಮಾ.6ರಂದು ಭಾಗವಹಿಸಿ ವಿಶೇಷತೆ ಬಗ್ಗೆ ಮಾಹಿತಿ ಪಡೆದರು.
ಇಲ್ಲಿನ ಸೀತಾನದಿಯ ಹಿನ್ನೀರಿನ ಹತ್ತಾರು ಎಕ್ರೆ ದಟ್ಟ ಕಾಂಡ್ಲಾ ವನದಲ್ಲಿ ಕಯಾಕಿಂಗ್ ಸಾಹಸಯಾನ ನಡೆ ಯುತ್ತಿದ್ದು, ಈ ಬಗ್ಗೆ ಮಾಹಿತಿ ಪಡೆ ಯುವ ಸಲುವಾಗಿ ಜಿಲ್ಲಾಧಿಕಾರಿಗಳು ಆಗಮಿಸಿದರು. ಕಯಾಕಿಂಗ್ ಸಂಘಟಕರಾದ ಮಿಥುನ್ ಮುಂಡನ್ ಹಾಗೂ ಲೋಕೇಶ್ ಮೆಂಡನ್ ಅವರು ಜಿಲ್ಲಾಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡಿದರು ಹಾಗೂ ಅಗತ್ಯ ಮೂಲ ಸೌಕರ್ಯ ಒದಗಿಸಲು ಮತ್ತು ಖಾಸಗಿ ಯಾಗಿ ಆರಂಭಿಸುವವರಿಗೆ ಅನುಮತಿ ಹಾಗೂ ಸೂಕ್ತ ಮಾಗದರ್ಶನ, ನೆರವು ನೀಡಲು ಅಗತ್ಯ ಸಹಕಾರ ನೀಡಿದರೆ ಈ ಚಟುವಟಿಕೆ ಯನ್ನು ಜಿಲ್ಲೆಯಲ್ಲಿ ಪ್ರವಾಸೋದ್ಯಮವಾಗಿ ಬೆಳೆಸುವ ಅನುಕೂಲವಾಗು ತ್ತದೆ ಎಂದು ತಿಳಿಸಿದರು. ಈ ಬಗ್ಗೆ ಪರಿಶೀಲಿಸಿ ಅಗತ್ಯ ಸಹಕಾರ ನೀಡುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.
ಇದನ್ನೂ ಓದಿ : ಸಹಾಯಕ ಪ್ರಾಧ್ಯಾಪಕರ ನೇಮಕ: ಅಕ್ರಮಕ್ಕೆ ಕಡಿವಾಣ ಹಾಕಲು ಸಹಾಯವಾಣಿ