ಉಡುಪಿ ಜಿಲ್ಲೆ: 4 ಜಿ.ಪಂ. ಕ್ಷೇತ್ರ ಏರಿಕೆ, 9 ತಾ.ಪಂ. ಕ್ಷೇತ್ರ ಇಳಿಕೆ


Team Udayavani, Feb 23, 2021, 5:00 AM IST

ಉಡುಪಿ ಜಿಲ್ಲೆ: 4 ಜಿ.ಪಂ. ಕ್ಷೇತ್ರ ಏರಿಕೆ, 9 ತಾ.ಪಂ. ಕ್ಷೇತ್ರ ಇಳಿಕೆ

ಉಡುಪಿ: ಎಪ್ರಿಲ್‌/ಮೇ ತಿಂಗಳಲ್ಲಿ ನಿರೀಕ್ಷಿಸುತ್ತಿರುವ ಜಿ.ಪಂ. ಮತ್ತು ತಾ.ಪಂ. ಚುನಾವಣೆಗೆ ಪೂರಕವಾಗಿ ಕ್ಷೇತ್ರ ಪುನರ್ವಿಂಗಡನೆಗೆ ರಾಜ್ಯ ಚುನಾವಣ ಆಯೋಗ ಮಾರ್ಗದರ್ಶೀ ಸೂತ್ರವನ್ನು ಪ್ರಕಟಿಸಿದ್ದು ಅದರಂತೆ ಉಡುಪಿ ಜಿಲ್ಲೆಯಲ್ಲಿ ಜಿ.ಪಂ. ಕ್ಷೇತ್ರದ ಸಂಖ್ಯೆ ಹೆಚ್ಚಲಿದ್ದು, ತಾ.ಪಂ. ಕ್ಷೇತ್ರಗಳ ಸಂಖ್ಯೆ ಕುಗ್ಗಲಿದೆ.

ಈಗ ಜಿಲ್ಲೆಯಲ್ಲಿ ಒಟ್ಟು 26 ಜಿ.ಪಂ. ಕ್ಷೇತ್ರಗಳು, 95 ತಾ.ಪಂ. ಕ್ಷೇತ್ರಗಳಿವೆ. ಇನ್ನು ಮುಂದೆ 30 ಜಿ.ಪಂ. ಕ್ಷೇತ್ರಗಳು ಮತ್ತು 86 ತಾ.ಪಂ. ಕ್ಷೇತ್ರಗಳಾಗಲಿವೆ.

ಹಿಂದೆ ಜಿ.ಪಂ., ತಾ.ಪಂ. ಚುನಾವಣೆ ಆಗುವಾಗ ತಾಲೂಕು ಪುನರ್ವಿಂಗಡಣೆಗೆ ಪೂರ್ವ ಸ್ಥಿತಿ ಇತ್ತು. ಎರಡು ವರ್ಷಗಳ ಹಿಂದೆ ತಾಲೂಕು ಪುನರ್ವಿಂಗಡಣೆಯಾದ ಬಳಿಕ ಉಡುಪಿ ತಾಲೂಕು ಉಡುಪಿ, ಬ್ರಹ್ಮಾವರ, ಕಾಪು ತಾಲೂಕಾದರೆ, ಕುಂದಾಪುರ ತಾಲೂಕು ಕುಂದಾಪುರ, ಬೈಂದೂರು ತಾಲೂಕುಗಳಾದವು, ಕಾರ್ಕಳ ತಾಲೂಕು ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳಾಗಿವೆ.

ತಾಲೂಕುವಾರು ಕ್ಷೇತ್ರಗಳು
ಈಗ ವಿವಿಧ ತಾಲೂಕುಗಳಲ್ಲಿ ಇರುವ ಜಿ.ಪಂ. ಮತ್ತು ತಾ.ಪಂ. ಕ್ಷೇತ್ರಗಳು: ಉಡುಪಿ ತಾಲೂಕು 3- 13, ಬ್ರಹ್ಮಾವರ ತಾಲೂಕು 4-16, ಕಾಪು ತಾಲೂಕು 4-12, ಕುಂದಾಪುರ ತಾಲೂಕು 7- 23, ಬೈಂದೂರು ತಾಲೂಕು 3- 10, ಕಾರ್ಕಳ ತಾಲೂಕು 4-15, ಹೆಬ್ರಿ ತಾಲೂಕು 1- 6.

ಇನ್ನು ಮುಂದೆ ವಿವಿಧ ತಾಲೂಕುಗಳನ್ನು ಹೊಂದಲಿರುವ ಜಿಲ್ಲಾ ಪಂಚಾಯ ತ್‌ ಮತ್ತು ತಾ.ಪಂ. ಕ್ಷೇತ್ರಗಳು: ಉಡುಪಿ ತಾಲೂಕು 4- 11, ಬ್ರಹ್ಮಾವರ ತಾಲೂಕು 5-13, ಕಾಪು ತಾಲೂಕು 4-10, ಕುಂದಾಪುರ ತಾಲೂಕು 7- 19, ಬೈಂದೂರು ತಾಲೂಕು 3- 9, ಕಾರ್ಕಳ ತಾಲೂಕು 5-13, ಹೆಬ್ರಿ ತಾಲೂಕು 2- 11.

ಜನಸಂಖ್ಯೆಗೆ ಅನ್ವಯ ಕ್ಷೇತ್ರಗಳು
ಈಗಾಗಲೇ ನಡೆದ ಗ್ರಾ.ಪಂ. ಚುನಾವಣೆಯಲ್ಲಿ 400 ಜನಸಂಖ್ಯೆಗೆ ಅನುಗುಣವಾಗಿ ಒಂದು ಕ್ಷೇತ್ರವನ್ನು ರಚಿಸಲಾಗಿತ್ತು. ಈಗ ಜಿ.ಪಂ. ಕ್ಷೇತ್ರವನ್ನು ಪ್ರತಿ 35,000 ಜನಸಂಖ್ಯೆಗೆ ಅನುಗುಣವಾಗಿ ರಚಿಸಲು ಆಯೋಗ ಸೂಚನೆ ನೀಡಿದೆ. ತಾ.ಪಂ. ಕ್ಷೇತ್ರ ರಚನೆಯಲ್ಲಿ ಮಾತ್ರ ಎರಡು ರೀತಿಯ ಸೂತ್ರಗಳಿವೆ. ಒಂದು ತಾಲೂಕಿನಲ್ಲಿ (ತಾ.ಪಂ.) 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇದ್ದರೆ ಅಂತಹ ತಾಲೂಕಿನಲ್ಲಿ 11 ಕ್ಷೇತ್ರಗಳನ್ನು ರಚಿಸಬೇಕು, 1 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದರೆ ಅಂತಹ ಕಡೆ 12,500 ಜನಸಂಖ್ಯೆಗೆ ಅನುಗುಣವಾಗಿ ಒಂದು ಕ್ಷೇತ್ರವನ್ನು ರೂಪಿಸಬೇಕು. ಉಡುಪಿ ತಾಲೂಕಿನಲ್ಲಿ 1.28 ಲಕ್ಷ, ಬೈಂದೂರಿನಲ್ಲಿ 1 ಲಕ್ಷ, ಕಾಪುವಿನಲ್ಲಿ 1.13 ಲಕ್ಷ, ಬ್ರಹ್ಮಾವರದಲ್ಲಿ 1.5 ಲಕ್ಷ, ಕುಂದಾಪುರದಲ್ಲಿ 2.3 ಲಕ್ಷ, ಕಾರ್ಕಳದಲ್ಲಿ 1.5 ಲಕ್ಷ, ಹೆಬ್ರಿಯಲ್ಲಿ 46,000 ಜನಸಂಖ್ಯೆ ಇದೆ.

ಹೀಗಾಗಿ ಹೆಬ್ರಿ ತಾಲೂಕಿನಲ್ಲಿ 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಕಾರಣ 11 ತಾ.ಪಂ. ಕ್ಷೇತ್ರಗಳು ರಚನೆಯಾಗಲಿವೆ. ಉಳಿದ ಕಡೆ 12,500 ಜನಸಂಖ್ಯೆಗೆ ಒಂದು ಕ್ಷೇತ್ರ ರಚನೆಯಾಗಲಿದೆ. ಹೆಬ್ರಿಯಲ್ಲಿ 35,000ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಕಾರಣ ಎರಡು ಜಿ.ಪಂ. ಕ್ಷೇತ್ರಗಳು ಸಿಗಲಿವೆ. ಇಲ್ಲಿ ತಾಲೂಕುವಾರು ಜನಸಂಖ್ಯೆ ನಗರ ಪ್ರದೇಶವನ್ನು ಹೊರತುಪಡಿಸಿ ಗ್ರಾಮಾಂತರದ ಜನಸಂಖ್ಯೆಯನ್ನು ಮಾತ್ರ ಪರಿಗಣಿಸಲಾಗಿದೆ. ಜಿಲ್ಲೆಯಲ್ಲಿ ಅತಿ ದೊಡ್ಡ ತಾಲೂಕಾಗಿ ಕುಂದಾಪುರ ಇರಲಿದೆ. ಕುಂದಾಪುರ, ಬೈಂದೂರು ತಾಲೂಕುಗಳಿಗೆ ಹಿಂದೆ ಇದ್ದಷ್ಟೇ ಜಿ.ಪಂ. ಕ್ಷೇತ್ರಗಳು ಸಿಗಲಿವೆ, ಆದರೆ ತಾ.ಪಂ. ಕ್ಷೇತ್ರಗಳು ಕಡಿಮೆಯಾಗಲಿವೆ. ಹೆಬ್ರಿಯಲ್ಲಿ ಮಾತ್ರ ಜಿ.ಪಂ. ಮತ್ತು ತಾ.ಪಂ. ಎರಡರ ಸಂಖ್ಯೆಯೂ ಹೆಚ್ಚಳವಾಗಿದೆ. ಉಡುಪಿ, ಬ್ರಹ್ಮಾವರ, ಕಾಪು, ಕಾರ್ಕಳದಲ್ಲಿ ತಲಾ ಒಂದು ಜಿ.ಪಂ. ಕ್ಷೇತ್ರ ಹೆಚ್ಚಿಗೆಯಾಗಲಿದ್ದು ತಾ.ಪಂ. ಕ್ಷೇತ್ರ ಕಡಿಮೆಯಾಗಲಿವೆ.

ಕ್ಷೇತ್ರ ಪುನರ್ವಿಂಗಡಣೆೆ
ತಾಲೂಕುಗಳು ಹೊಸದಾಗಿ ರಚನೆ ಯಾದಲ್ಲಿ ಹಿಂದಿದ್ದ ಜಿ.ಪಂ. ಕ್ಷೇತ್ರಗಳ ಗ್ರಾಮಗಳು ಎರಡು ತಾಲೂಕುಗಳಲ್ಲಿ ಹಂಚಿಹೋಗಿವೆ. ಹೀಗಾಗಿ ಆಯಾ ತಾಲೂಕುಗಳ ಗ್ರಾಮಗಳನ್ನು ಮಾತ್ರ ಆಯಾ ತಾಲೂಕುಗಳ ಜಿ.ಪಂ. ಮತ್ತು ತಾ.ಪಂ. ಕ್ಷೇತ್ರಗಳಲ್ಲಿ ಹಂಚಿಹಾಕಲಿದ್ದಾರೆ. ಬೈಂದೂರಿನಲ್ಲಿ ಪ.ಪಂ. ರಚನೆಯಾದ ಕಾರಣ ಅಲ್ಲಿಯೂ ಕ್ಷೇತ್ರ ರಚನೆಯಲ್ಲಿ ಗ್ರಾಮಗಳು ವ್ಯತ್ಯಾಸವಾಗಲಿವೆೆ.

ಟಾಪ್ ನ್ಯೂಸ್

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ

Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ

Udyavara: ತಪಾಸಣೆ ನಿರತ ಕಾರಿಗೆ ಕಾರು ಢಿಕ್ಕಿ; ಮಹಿಳೆಗೆ ಗಾಯ

Udyavara: ತಪಾಸಣೆ ನಿರತ ಕಾರಿಗೆ ಕಾರು ಢಿಕ್ಕಿ; ಮಹಿಳೆಗೆ ಗಾಯ

Udupi; ಕಾರು ಢಿಕ್ಕಿ: ಸ್ಕೂಟರ್‌ ಸವಾರ ಆಸ್ಪತ್ರೆಗೆ

Udupi; ಕಾರು ಢಿಕ್ಕಿ: ಸ್ಕೂಟರ್‌ ಸವಾರ ಆಸ್ಪತ್ರೆಗೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.