ಆಯ್ದ ಬೋಧಕ ವರ್ಗಕ್ಕಷ್ಟೇ ಯುಜಿಸಿ ಶ್ರೇಣಿ ಪಿಂಚಣಿ
Team Udayavani, Mar 18, 2020, 7:00 AM IST
ಬೆಂಗಳೂರು: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 2006ರ ಜ.1ರ ಬಳಿಕ ನಿವೃತ್ತರಾದ ಬೋಧಕ ವರ್ಗದವರಿಗಷ್ಟೇ ಯುಜಿಸಿ ವೇತನ ಶ್ರೇಣಿಯನ್ವಯ ಪಿಂಚಣಿ ಸೌಲಭ್ಯ ಒದಗಿಸುವ ಸಂಬಂಧ ಕರ್ನಾಟಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ವೇತನ ಮತ್ತು ನಿವೃತ್ತಿ ವೇತನ (ನಿಯಂತ್ರಣ) ಮಸೂದೆಗೆ ಮಂಗಳವಾರ ಒಪ್ಪಿಗೆ ನೀಡಲಾಯಿತು.
ಜತೆಗೆ ಈ ಮಸೂದೆಯನ್ವಯ 2006ರ ಜ.1ರ ಮೊದಲು ನಿವೃತ್ತ ರು ಮತ್ತು ಉಳಿದ ಸರಕಾರಿ ನೌಕರರಿಗೂ ಇದೇ ರೀತಿಯ ಪಿಂಚಣಿ ಸೌಲಭ್ಯ ನೀಡುವುದನ್ನು ನಿರಾಕರಿಸಲಾಗುತ್ತದೆ.
ಮಂಗಳವಾರ ಮಾಹಿತಿ ನೀಡಿದ ಕಾನೂನು ಸಚಿವ ಜೆ.ಸಿ. ಮಾಧು ಸ್ವಾಮಿ, 2006ರ ಜ.1ರ ಬಳಿಕ ನಿವೃತ್ತರಾದವರಿಗೆ ಯುಜಿಸಿ ವೇತನ ಶ್ರೇಣಿಯನ್ವಯ ಪಿಂಚಣಿ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ 2006ರ ಜ.1ಕ್ಕೆ ಮೊದಲು ನಿವೃತ್ತರಾದವರಿಗೂ ಈ ಸೌಲಭ್ಯ ಕಲ್ಪಿಸಬೇಕೆಂದು ಕೋರಿ ಕೆಲವರು ಕೋರ್ಟ್ ಮೊರೆ ಹೊಕ್ಕಿದ್ದರು. ಅದರಂತೆ ನ್ಯಾಯಾಲಯ ಅವರಿಗೂ ಯುಜಿಸಿ ವೇತನ ಶ್ರೇಣಿಯಂತೆ ಪಿಂಚಣಿ ನೀಡುವಂತೆ ಸೂಚಿಸಿತ್ತು. ಇದನ್ನು ಜಾರಿಗೊಳಿಸಲು ಸಾಧ್ಯವಾಗದ ಕಾರಣ ಅಧ್ಯಾದೇಶ ಹೊರಡಿಸುವ ಮೂಲಕ 2006ರ ಜ.1ಕ್ಕೆ ಮೊದಲು ನಿವೃತ್ತರಾದವರಿಗೆ ಯುಜಿಸಿ ವೇತನ ಶ್ರೇಣಿಯಂತೆ ಪಿಂಚಣಿ ಸೌಲಭ್ಯ ಕಲ್ಪಿಸುವುದನ್ನು ರದ್ದುಪಡಿಸಲಾಗಿತ್ತು. ಅದಕ್ಕೆ ಪೂರಕವಾಗಿ ಮಸೂದೆ ಮಂಡನೆಯಾಗಿದೆ ಎಂದರು.
1,000 ಕೋ.ರೂ. ಹೊರೆ
ಡಿಸಿಎಂ ಡಾ| ಅಶ್ವತ್ಥ ನಾರಾಯಣ ಮಾತನಾಡಿ, ಎಲ್ಲ ಪ್ರಾಧ್ಯಾಪಕರಿಗೂ ಯುಜಿಸಿ ವೇತನ ಶ್ರೇಣಿಯಂತೆ ಪಿಂಚಣಿ ನೀಡಿದರೆ ಸರಕಾರಕ್ಕೆ ವಾರ್ಷಿಕ 1,000 ಕೋ.ರೂ.ಗಳಷ್ಟು ಹೊರೆಯಾಗಲಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ
ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Yugadi: ಯುಗದ ಆರಂಭದ ಮುನ್ನುಡಿ ಈ ಯುಗಾದಿ
Congress ನಿಂದ ಬದುಕು; ಬಿಜೆಪಿಯದ್ದು ಭಾವನೆಗಳ ಚೆಲ್ಲಾಟ: ಡಾ| ಭಂಡಾರಿ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?