ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ : ವ್ಯಾಕ್ಸಿನೇಶ‌ನ್‌ ಡ್ರೈವ್‌ ನೋಂದಣಿ ಹೇಗೆ?


Team Udayavani, Apr 21, 2021, 6:50 AM IST

ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ : ವ್ಯಾಕ್ಸಿನೇಶ‌ನ್‌ ಡ್ರೈವ್‌ ನೋಂದಣಿ ಹೇಗೆ?

ಭಾರತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಭಾರತೀಯ ನಾಗರಿಕರು ಮೇ 1ರ ಬಳಿಕ ಕೋವಿಡ್‌ -19 ಲಸಿಕೆ ಪಡೆಯಬಹುದು. ಭಾರತದಲ್ಲಿ ಸಂಪೂರ್ಣ ಕೋವಿಡ್‌ -19 ವ್ಯಾಕ್ಸಿನೇಶನ್‌ ಡ್ರೈವ್‌ ನೋಂದಣಿ ಹಾಗೂ ಆ ಬಳಿಕದ ಎಲ್ಲ ಪ್ರಕ್ರಿಯೆಗಳು ಡಿಜಿಟಲ್‌ ವ್ಯವಸ್ಥೆಯಡಿ ನಡೆಯಲಿದೆ. ಆನ್‌ಲೈನ್‌ನಲ್ಲಿ ಲಸಿಕೆಗಾಗಿ ನೋಂದಾಯಿಸುವುದು, ಅಪಾಯಿಂಟ್ಮೆಂಟ್‌ ಅನ್ನು ನಿಗದಿಪಡಿಸುವುದು ಮತ್ತು ಲಸಿಕೆ ಪ್ರಮಾಣ ಪತ್ರವನ್ನು ಡೌನ್ಲೋಡ್‌ ಮಾಡುವುದು ಸಹಿತ ಕೋವಿಡ್‌-19 ಲಸಿಕೆ ಪಡೆಯುವ ಹಂತಗಳ ವಿವರ ಇಲ್ಲಿ ನೀಡಲಾಗಿದೆ.

ಕೋವಿಡ್‌ -19 ಲಸಿಕೆಗಾಗಿ ಯಾವುದೇ ಮೊಬೈಲ್‌ ಆ್ಯಪ್ಲಿಕೇಶನ್‌ ಇಲ್ಲ. ಕಂಪ್ಯೂಟರ್‌ ಅಥವಾ ಮೊಬೈಲ್‌ನಲ್ಲಿ ಗೂಗಲ್‌ ಕ್ರೋಮ್‌ ಅಥವಾ ಯಾವುದೇ ಇಂಟರ್‌ನೆಟ್‌ ಬ್ರೌಸರ್‌ ಅನ್ನು ಬಳಸಬೇಕಾಗುತ್ತದೆ. ಚಾಲ್ತಿಯಲ್ಲಿರುವ ಮೊಬೈಲ್‌ ಸಂಖ್ಯೆ ಮತ್ತು ಆಧಾರ್‌ ಕಾರ್ಡ್‌, ಡ್ರೈವಿಂಗ್‌ ಲೈಸೆನ್ಸ್‌ ಇವುಗಳಲ್ಲಿ ಯಾವುದಾದರೂ ಒಂದು ಫೋಟೋ ಐಡಿ ಆ ಸಂದರ್ಭ ಅಗತ್ಯವಿರುತ್ತದೆ.

ಆನ್‌ಲೈನ್‌ನಲ್ಲಿ ಲಸಿಕೆ ನೋಂದಣಿ ಹೇಗೆ?
www.cowin.gov.in ಗೆ ಲಾಗ್‌ ಇನ್‌ ಮಾಡುವ ಮೂಲಕ ನೀವು ಕೋವಿಡ್‌ -19 ಲಸಿಕೆಗಾಗಿ ನೋಂದಾಯಿಸಿಕೊಳ್ಳಬಹುದು. SMS ಮೂಲಕ ಪರಿಶೀಲನೆಗಾಗಿ OTP ಸ್ವೀಕರಿಸಲು ನಿಮ್ಮ ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ. ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ‘Verify’ಬಟನ್‌ ಕ್ಲಿಕ್‌ ಮಾಡಿ.

ನೋಂದಣಿಯನ್ನು ದೃಢಪಡಿಸುವುದು ಹೇಗೆ?
ವೆಬ್‌ಸೈಟ್‌ನಲ್ಲಿ ನೋಂದಾಯಿಸಿದ ಆಮೇಲೆ “ವ್ಯಾಕ್ಸಿನೇಶ‌ನ್‌ ನೋಂದಣಿ (Registration of Vaccination)ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಫೋಟೋ ಐಡಿ ಪ್ರೂಫ್ ಸಂಖ್ಯೆ, ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ಇತರ ವಿವರಗಳನ್ನು ನಮೂದಿಸಿ. ಅನಂತರ “ರಿಜಿಸ್ಟರ್‌ ಬಟನ್‌’ ಕ್ಲಿಕ್‌ ಮಾಡಿ. ಚುಚ್ಚುಮದ್ದಿನ ಬಗ್ಗೆ ಅಗತ್ಯ ವಿವರಗಳನ್ನು ನೀವು ಮೆಸೇಜ್‌ ಮೂಲಕ ಸ್ವೀಕರಿಸುತ್ತೀರಿ. ನೀಡಲಾದ ವಿವರಗಳನ್ನು ಸರಿಯಾಗಿದೆಯೇ ಎಂಬುದನ್ನು ಮತ್ತೂಮ್ಮೆ ಪರಿಶೀಲಿಸಿ. ಲಸಿಕೆಗಾಗಿ ನೋಂದಾಯಿಸುವ ಸಮಯದಲ್ಲಿ ಫ‌ಲಾನುಭವಿ ಐಡಿ(Beneficiary Reference ID)ಪಡೆಯುತ್ತೀರಿ. ಈ ಐಡಿಯನ್ನು ಎಲ್ಲಾದರೂ ಸೇವ್‌ ಮಾಡಿಟ್ಟುಕೊಳ್ಳಿ.

ಒಂದು ಮೊಬೈಲ್‌ ಸಂಖ್ಯೆಯಲ್ಲಿ ಎಷ್ಟು ನೋಂದಣಿ?
ಕೋವಿನ್‌ ವೆಬ್‌ಸೈಟ್‌ನಲ್ಲಿ ಲಿಂಕ್‌ ಮಾಡಲಾದ ಖಾತೆಗೆ ಇನ್ನೂ 3 ಜನರನ್ನು ನೀವು ಸೇರಿಸಬಹುದು. ಇದನ್ನು ಮಾಡಲು, ಖಾತೆ ವಿವರಗಳ ಪುಟದ ಕೆಳಗಿನ ಬಲಭಾಗದಲ್ಲಿರುವ ಇನ್ನಷ್ಟು ಸೇರಿಸಿ'(Add More) ಬಟನ್‌ ಕ್ಲಿಕ್‌ ಮಾಡಿ. ವ್ಯಾಕ್ಸಿನೇಶ‌ನ್‌ಗಾಗಿ ಇತರರನ್ನು ನೋಂದಾಯಿಸಲು ಮೇಲೆ ತಿಳಿಸಲಾದ ಎಲ್ಲ ಮಾಹಿತಿಯನ್ನು ನಮೂದಿಸಬೇಕಾಗುತ್ತದೆ.

ಪ್ರಮಾಣಪತ್ರವನ್ನು ಡೌನ್ಲೋಡ್‌ ಮಾಡುವುದು ಹೇಗೆ?
ಮೊದಲ ಲಸಿಕೆ ಪಡೆದ ಬಳಿಕ ವ್ಯಾಕ್ಸಿನೇಶನ್‌ ಪ್ರಮಾಣಪತ್ರವನ್ನು ಡೌನ್ಲೋಡ್‌ ಮಾಡಬಹುದು. ಪ್ರಮಾಣಪತ್ರದಲ್ಲಿ ಹೆಸರು, ಹುಟ್ಟಿದ ದಿನಾಂಕ, ಫ‌ಲಾನುಭವಿ ಉಲ್ಲೇಖ ಐಡಿ, ಫೋಟೋ ಐಡಿ, ಲಸಿಕೆ ಹೆಸರು, ಆಸ್ಪತ್ರೆಯ ಹೆಸರು, ದಿನಾಂಕ ಮತ್ತು ಇತರ ವಿವರಗಳಿರುತ್ತವೆ. ಪ್ರಮಾಣಪತ್ರವನ್ನು ಪಡೆಯಲು Beneficiary Reference ID ಬಹಳ ಮುಖ್ಯ. ಕೋ-ವಿನ್‌ ಪೋರ್ಟಲ್‌ (cowin.gov.in)/ ಆರೋಗ್ಯ ಸೇತು ಅಪ್ಲಿಕೇಶನ್‌/ಡಿಜಿ-ಲಾಕರ್‌ ಮೂಲಕ ಡೌನ್ಲೋಡ್‌ ಮಾಡಬಹುದು.

46 ಕೋಟಿ ಲಸಿಕೆ ಅಗತ್ಯ
ಎಪ್ರಿಲ್‌ 19ರಂದು ಬೆಳಗ್ಗೆ 8.00ರ ವರೆಗೆ 12.38 ಕೋಟಿ ಡೋಸ್‌ಗಳನ್ನು ನೀಡಲಾಗಿದೆ. ಈ ಪೈಕಿ 10.73 ಕೋಟಿ ಮೊದಲ ಡೋಸ್‌ ಆಗಿದ್ದರೆ, 1.64 ಕೋಟಿ ಎರಡನೇ ಡೋಸ್‌ ಆಗಿದೆ. ಜನಗಣತಿಯ ಮಾಹಿತಿಯ ಪ್ರಕಾರ ಆರೋಗ್ಯ ರಕ್ಷಣೆ, ಮುಂಚೂಣಿ ಕಾರ್ಮಿಕರು ಮತ್ತು ದೇಶದ 45+ ಜನಸಂಖ್ಯೆಗೆ ಲಸಿಕೆ ನೀಡಲು ಸುಮಾರು 46 ಕೋಟಿ ಲಸಿಕೆ ಇನ್ನೂ ಅಗತ್ಯವಿದೆ. ಎಪ್ರಿಲ್‌ 1ರ ಅನಂತರ ವ್ಯಾಕ್ಸಿನೇಷನ್‌ ವೇಗವನ್ನು ಪಡೆಯಿತು. ಎಪ್ರಿಲ್‌ 5ರಂದು ದಾಖಲೆಯ 4.5 ಮಿ. ಡೋಸೇಜ್‌ ನೀಡಲಾಯಿತು, ಆದರೆ ಬಳಿಕ ಕೇವಲ 30 ಲಕ್ಷ ಡೋಸೇಜ್‌ಗಳನ್ನಷ್ಟೇ ನೀಡಲು ಸಾಧ್ಯವಾಗಿದೆ. ಲಸಿಕೆ ಕೊರತೆಯಿಂದಾಗಿ ಈ ಅಂಕಿ-ಅಂಶವು ದಿನದಿಂದ ದಿನಕ್ಕೆ ಕಡಿಮೆಯಾಗಿದೆ.

ಆನ್‌ಲೈನ್‌ ಅಪಾಯಿಂಟ್ಮೆಂಟ್‌ ಹೇಗೆ?
ವೆಬ್‌ಸೈಟ್‌ನಲ್ಲಿ ಕಾಣುವ ಕ್ಯಾಲೆಂಡರ್‌ ಐಕಾನ್‌ ಕ್ಲಿಕ್‌ ಮಾಡಿ ಅಥವಾ ನೇರವಾಗಿ ಅಪಾಯಿಂಟ್ಮೆಂಟ್‌‌ ಬಟನ್‌ ಕ್ಲಿಕ್‌ ಮಾಡಿ. ನಿಮ್ಮನ್ನು ವ್ಯಾಕ್ಸಿನೇಶ‌ನ್‌ನ ಅಪಾಯಿಟ್ಮೆಂಟ್‌‌ಗಾಗಿ “ಬುಕ್‌’ ಮಾಡುವ ಪುಟಕ್ಕೆ ಕೊಂಡೊಯ್ಯುತ್ತದೆ. ಈ ಪುಟದಲ್ಲಿ ರಾಜ್ಯ, ಜಿಲ್ಲೆ, ಬ್ಲಾಕ್‌ ಮತ್ತು ನಿಮ್ಮ ಪಿನ್‌ಕೋಡ್‌ ಮೂಲಕ ಆಯ್ಕೆಯ ವ್ಯಾಕ್ಸಿನೇಶನ್‌ ಕೇಂದ್ರವನ್ನು ಹುಡುಕಿ. ಅಲ್ಲಿ ಕಂಡುಬರುವ ಕೇಂದ್ರದ ಹೆಸರಿನ ಮೇಲೆ ಕ್ಲಿಕ್‌ ಮಾಡಿ ಮತ್ತು ಅದು ಲಭ್ಯವಿರುವ ಸ್ಲಾಟ್‌ಗಳನ್ನು ತೋರಿಸುತ್ತದೆ. ಅನಂತರ “ಬುಕ್‌’ ಬಟನ್‌ ಅನ್ನು ಕ್ಲಿಕ್‌ ಮಾಡಿ. ಆಮೇಲೆ ‘Appointment Confirmation’ಪುಟ ತೆರೆದುಕೊಳ್ಳುತ್ತದೆ. ಎಲ್ಲ ವಿವರಗಳನ್ನು ಸರಿಯಾಗಿ ಪರಿಶೀಲಿಸಿ “ಕನ್ಫರ್ಮ್’ ಬಟನ್‌ ಕ್ಲಿಕ್‌ ಮಾಡಿ. ನಿಮಗೆ ನೀಡಲಾದ ದಿನಾಂಕದಂದು ತಪ್ಪದೇ ಭೇಟಿ ನೀಡಿ ಲಸಿಕೆ ಸ್ವೀಕರಿಸಿ.

ಹತ್ತಿರದ ಕೇಂದ್ರದಲ್ಲಿ ಪಡೆಯುವುದು ಹೇಗೆ?
ಯಾವುದೇ ವೆಬ್‌ ಬ್ರೌಸರ್‌ನಲ್ಲಿ www.cowin.gov.in ಗೆ ಭೇಟಿ ನೀಡಿ. ಪುಟದ ಕೆಳಗಡೆ ಕಾಣುವ Enter place/address/eLoc ಮೇಲೆ ಕ್ಲಿಕ್‌ ಮಾಡಿ, ಅಲ್ಲಿ ಸ್ಥಳ ವಿವರಗಳನ್ನು ನಮೂದಿಸಿ ಮತ್ತು “ಗೋ’ ಬಟನ್‌ ಒತ್ತಿರಿ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.