ಮತ್ತೊಮ್ಮೆ ರೈತರ ಬದುಕನ್ನು ಕಸಿದುಕೊಂಡ ಕೋವಿಡ್ : ತೋಟದಲ್ಲೇ ಕೊಳೆಯುತ್ತಿದೆ ತರಕಾರಿ ಬೆಳೆ
Team Udayavani, Jun 3, 2021, 6:07 PM IST
ಬನಹಟ್ಟಿ: ಕೊರೊನಾ ಲಾಕ್ಡೌನ್ ರೈತರ ಬದುಕನ್ನು ಮತ್ತೂಮ್ಮೆ ಕಸಿದುಕೊಂಡಿದ್ದು, ಅಪಾರ ಪ್ರಮಾಣದಲ್ಲಿ ಬೆಳೆ ಬೆಳೆದು
ಹಾನಿ ಮಾಡಿಕೊಂಡ ರೈತರ ಸಂಕಷ್ಟ ಮಾತ್ರ ಹೇಳ ತೀರದು. ಅದರಲ್ಲೂ ಲಾಕ್ಡೌನ್ನಿಂದಾಗಿ ರೈತರು ಬೆಳೆದ ತರಕಾರಿಗಳು ತೋಟದಲ್ಲಿಯೇ ಕೊಳೆಯುವಂತಾಗಿದೆ.
ಬನಹಟ್ಟಿಯ ಕೆರೆಯ ರಸ್ತೆಯ ರೈತ ಮಲ್ಲಿಕಾರ್ಜುನ ಮಿರ್ಜಿ ತಮ್ಮ ತೋಟದಲ್ಲಿ ಎರಡು ಎಕರೆ ಪ್ರದೇಶದಲ್ಲಿ ಬದನೆ, ಸವತೆ, ಕೋಬೀಜ, ಟೊಮ್ಯಾಟೊ, ಮಣಸಿನಕಾಯಿ ಬೆಳೆದಿದ್ದರು. ಆದರೆ ಲಾಕ್ಡೌನ್ನಿಂದ ಮಾರುಕಟ್ಟೆ ಸಿಗದೇ ಬೆಳೆದ ಬೆಳೆ
ಗಿಡದಲ್ಲಿಯೇ ಕೊಳೆಯುವಂತಾಗಿದೆ.
“ಸರಿಯಾದ ಮಾರುಕಟ್ಟೆ ಇತ್ತು. ತರಕಾರಿ ಮಾರಾಟಕ್ಕೆ ಇನ್ನಷ್ಟು ಅನುಕೂಲತೆ ಕಲ್ಪಿಸಿದರೆ ಮೂರು ತಿಂಗಳ ಅವಧಿಯಲ್ಲಿ ಐವತ್ತು ಸಾವಿರ ರೂ.ದಷ್ಟು ಲಾಭ ಆಕ್ಕಿತ್ರಿ. ಆದರ ಈಗ ಖರ್ಚು ಮಾಡಿದ 40 ಸಾವಿರದಷ್ಟು ಹಣ ಕೂಡಾ ಬರದ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ : ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ರಾಜಿನಾಮೆ
ಬದನೆಕಾಯಿ, ಸವತೆಕಾಯಿ, ಕೋಬೀಜ್, ಟೊಮ್ಯಾಟೊ ತರಕಾರಿಗಳು ತೋಟದಲ್ಲಿ ಕೊಳೆತು ಹೋಗಿವೆ. ಬದನೆಕಾಯಿ ಬೆಳೆ
ಸಂಪೂರ್ಣವಾಗಿ ಕೊಳೆತಿದ್ದು, ಹಳದಿ ಬಣ್ಣಕ್ಕೆ ತಿರುಗಿದೆ ಎನ್ನುತ್ತಾರೆ ರೈತ ಮಲ್ಲಿಕಾರ್ಜುನ ಮಿರ್ಜಿ. ಬೆಳಗ್ಗೆ 6 ರಿಂದ 10ರವರೆಗೆ ತಳ್ಳುವ ಗಾಡಿಗಳ ಮೂಲಕ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ರೈತರು ತಳ್ಳುವ ಗಾಡಿಗಳ ಮೂಲಕ ಊರು ತುಂಬ
ತಿರುಗಾಡಿಲಿಕ್ಕೆ ಸಾಧ್ಯವಿಲ್ಲ. ಇನ್ನ ಹೆಣ್ಣು ಮಕ್ಕಳು ಸಂತೆಯಲ್ಲಿ ಕುಳಿತು ಮಾರಾಟ ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ.
ಬೇಗ ಮಾರಾಟ ಮಾಡಬೇಕು ಎಂದರೆ ಗ್ರಾಹಕರು ಇದೇ ಅವಕಾಶ ಎಂದು ತಿಳಿದುಕೊಂಡು ಅರ್ಧಕ್ಕಿಂತ ಕಡಿಮೆ ದರಕ್ಕೆ ತರಕಾರಿ ಕೇಳುತ್ತಿದ್ದಾರೆ ಎಂದರು. ಬೇಸಿಗೆಯ ಸಂದರ್ಭದಲ್ಲಿ ತರಕಾರಿ ಬೆಳೆದ ರೈತರಿಗೆ ಸ್ವಲ್ಪ ಮಟ್ಟಿನ ಆದಾಯವಿರುತ್ತದೆ. ಆದರೆ
ಲಾಕ್ಡೌನ್ ಸಂಪೂರ್ಣವಾಗಿ ಬೇಸಿಗೆಯಲ್ಲಿ ಇದ್ದ ಪರಿಣಾಮವಾಗಿ ಬಹಳಷ್ಟು ಹಾನಿಯಾಗಿದೆ ಎನ್ನುತ್ತಾರೆ ತೋಟಗಾರಿಕಾ ರೈತರು.
ಮೂರ್ನಾಲ್ಕು ತಿಂಗಳುಗಳ ಕಾಲ ಗೊಬ್ಬರ ಹಾಕಿ, ನೀರು ಹಾಯಿಸಿ ಕಷ್ಟ ಪಟ್ಟು ಬೆಳೆದ ಕೈ ಬಾರದೆ ಹೋದರೆ ಕೆಟ್ಟ ಅನಸತೈತ್ರಿ. ಒಂದ ದಿವಸಕ್ಕ ಬೇರೆ ಬೇರೆ ತರಕಾರಿ ಮಾರಾಟ ಮಾಡಿ 4ರಿಂದ 5 ಸಾವಿರದಷ್ಟು ಆದಾಯ ಬರುತ್ತಿತ್ತು. ಆದರ ಈಗ ಎರಡ ಸಾವಿರದಷ್ಟು ವ್ಯಾಪಾರ ಮಾಡುವುದು ಸಾಧ್ಯ ಇಲ್ಲಿ ಎನ್ನುತ್ತಾರೆ ಜಗದಾಳ ಗ್ರಾಮದ ರೈತ ಮಹಿಳೆ ಸುವರ್ಣಾ ಬಂಗಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ