6 ತಿಂಗಳಲ್ಲಿ ಸರಕಾರಿ-ಖಾಸಗಿ ಸಹಭಾಗಿತ್ವ ವಾಹನಗಳ ಚಾರ್ಜರ್ ಲಭ್ಯ!
Team Udayavani, Jun 10, 2021, 6:40 AM IST
ಹೊಸದಿಲ್ಲಿ: ಕೇಂದ್ರ ಸರಕಾರದ ಪ್ರೋತ್ಸಾಹದ ಮೇರೆಗೆ ದೇಶಾದ್ಯಂತ ವಿದ್ಯುತ್ ಚಾಲಿತ ವಾಹನಗಳ ಮಾರುಕಟ್ಟೆ ನಿಧಾನವಾಗಿ ತಳವೂರುತ್ತಿದ್ದು, ಇದೇ ವೇಳೆ ಆ ವಾಹನಗಳಿಗೆ ಬೇಕಾದ ಪರಿಕರಗಳ ಮಾರುಕಟ್ಟೆಯೂ ಕ್ರಮೇಣ ಚಿಗುರೊಡೆಯುತ್ತಿದೆ. ದ್ವಿಚಕ್ರ ಅಥವಾ ತ್ರಿಚಕ್ರ ವಾಹನಗಳನ್ನು ವೇಗವಾಗಿ ಚಾರ್ಜ್ ಮಾಡುವಂಥ ಚಾರ್ಜಿಂಗ್ ಯಂತ್ರಗಳು ಮುಂದಿನ ಆರು ತಿಂಗಳುಗಳಲ್ಲಿ ಮಾರು ಕಟ್ಟೆಗೆ ಬರಲಿವೆ.
ದೇಶದ ವಾಹನ ಮಾರಾಟ ಕ್ಷೇತ್ರದಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಮಾರಾಟದ ಪಾಲೇ ಅತ್ಯಧಿಕ. ದೇಶದ ವಾಯುಮಾಲಿನ್ಯಕ್ಕೆ ಇವುಗಳ ಕಾಣಿಕೆಯೂ ಅಷ್ಟೇ ಅಧಿಕ! ಹಾಗಾಗಿ ಈ ಶ್ರೇಣಿಯಲ್ಲಿನ ವಾಹನಗಳನ್ನು ತೈಲಾಧಾರಿತ ಬದಲಿಗೆ ವಿದ್ಯುತ್ ಆಧಾರಿತವಾಗಿ ಪರಿವರ್ತಿಸಿದರೆ ವಾಯು ಮಾಲಿನ್ಯವನ್ನು ಗಣನೀಯವಾಗಿ ಇಳಿಸಬಹುದು ಎನ್ನುವುದು ಸರಕಾರದ ಲೆಕ್ಕಾಚಾರ. ಹಾಗಾಗಿ ವಿದ್ಯುತ್ ಚಾಲಿತ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ಬೇಕಾದ ಚಾರ್ಜಿಂಗ್ ಪಾಯಿಂಟ್ಗಳನ್ನು ಕಡಿಮೆ ದರದಲ್ಲಿ ಲಭ್ಯವಾಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲಿ ಬೇಕಾದರೂ ಬಳಸಬಹುದು
ಇವು ಸಾರ್ವಕಾಲಿಕ ಹವಾಮಾನಕ್ಕೆ ಒಗ್ಗು ವಂಥ ಯಂತ್ರಗಳಾಗಿರಲಿದ್ದು, ಯಾವುದೇ ಸ್ಥಳದಲ್ಲಿ 220 ವೋಲ್ಟೆàಜ್ ಹಾಗೂ 15 ಆ್ಯಂಪಿಯರ್ ವಿದ್ಯುತ್ ಇರುವ ಕಡೆ ಸುಲಭವಾಗಿ ಬಳಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಲೆ ಎಷ್ಟು?
ಸರಕಾರಿ, ಖಾಸಗಿ ಸಹ ಭಾಗಿತ್ವದಲ್ಲಿ ಚಾರ್ಜಿಂಗ್ ಪರಿಕರಗಳನ್ನು ತಯಾರಿಸಲು ಕೇಂದ್ರ ಸರಕಾರ ಉದ್ದೇಶಿಸಿದೆ. ಇದರಡಿ ತಯಾರಾಗುವ ಪ್ರತೀ ಚಾರ್ಜರ್ನ ಕನಿಷ್ಠ ಬೆಲೆ 3,500 ರೂ. ಇರಲಿದೆ. ಸದ್ಯದ ಮಾರುಕಟ್ಟೆಯಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರ, ತ್ರಿಚಕ್ರ ವಾಹನಗಳ ಚಾರ್ಜರ್ ಗಳ ಬೆಲೆ 15,000 ರೂ.ಗಳಿಂದ 20,000 ರೂ. ವರೆಗೆ ಇದೆ. ಇದೇ ತಂತ್ರಜ್ಞಾನವುಳ್ಳ ಸಣ್ಣ ಗಾತ್ರದ ಚಾರ್ಜರ್ ಗಳನ್ನು ತಯಾರಿ ಸಲು ಅನೇಕ ಕಂಪೆನಿಗಳು ಮುಂದೆ ಬಂದಿವೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ (ಡಿಎಸ್ಟಿ) ಸಚಿವಾಲಯ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು