ಲಕ್ಷಾಂತರ ಮನೆಗಳಿಗೆ ನೀರು ; ಸಮೃದ್ಧಿಗೆ ಹೊಸ ಆಯಾಮ


Team Udayavani, Sep 18, 2021, 6:55 AM IST

ಲಕ್ಷಾಂತರ ಮನೆಗಳಿಗೆ ನೀರು ; ಸಮೃದ್ಧಿಗೆ ಹೊಸ ಆಯಾಮ

ಮಿಜೋರಾಂನ ಲ್ವಾಂಗ್‌ ಟೆಲೈ, ಜಮ್ಮು ಮತ್ತು ಕಾಶ್ಮೀರದ ಕುಪ್ವಾರ, ಗುಜರಾತ್‌ನ ಕಛ್ ಮತ್ತು ನಿಕೋಬಾರ್‌ ದ್ವೀಪಗಳ ನಡುವೆ ನಾಲ್ಕು ಅತೀ ಮೂಲೆಯ ಜಿಲ್ಲೆಗಳ ಹೊರತಾಗಿ ಸಾಮಾನ್ಯವಾದ್ದದ್ದು ಏನಿದೆ? ಈ ಎಲ್ಲ ಸ್ಥಳಗಳಲ್ಲಿನ ಸಾಮಾನ್ಯ ವಿಷಯವೆಂದರೆ, ಈಗ ನೀವು ಆ ಜನರನ್ನು ನೀರು ಕೇಳಿದರೆ ಅವರು ಹೊಸದಾಗಿ ಸ್ಥಾಪಿಸಿದ ಕೊಳಾಯಿಗಳಿಗೆ ಹೋಗುತ್ತಾರೆ ಮತ್ತು ಹೆಮ್ಮೆಯಿಂದ ಹಾಗೂ ಮುಖದಲ್ಲಿ ವಿಶಾಲ ನಗುವಿನೊಂದಿಗೆ ನಿಮ್ಮ ಬಾಯಾರಿಕೆಯನ್ನು ನೀಗಿಸುತ್ತಾರೆ. ನಕ್ಷೆ ಬಿಡಿಸುವವರ ಪೆನ್‌ ನಿಲ್ಲುವ ಮತ್ತು ಮಿಲಿಟರಿ ಯೋಧರ ಪಹರೆ ಆರಂಭ ವಾಗುವ ಈ ಗಡಿ ಜಿಲ್ಲೆಗಳು ಜಲಜೀವನ್‌ ಮಿಷನ್‌ (ಜೆಜೆಎಂ) ಯಶಸ್ಸಿನ ಸಂಕೇತವಾಗಿವೆ. ಈ ಯೋಜನೆ ಹಿಮಾಲಯದ ತಪ್ಪಲಿನಲ್ಲಿ ನಿರುಪದ್ರವಿ ಕುಗ್ರಾಮಗಳಿಂದ ಹಿಡಿದು ಕೇರಳದ ಬಾಳೆ ತೋಟಗಳವರೆಗೆ ದೇಶಾದ್ಯಂತ ಯಶಸ್ವಿಯಾಗಿದೆ ಮತ್ತು ಜೆಜೆಎಂ- ಜಲ್‌ ಜೀವನ್‌ ಮಿಷನ್‌ ಇದೀಗ ಜನರ ವಾಸ್ತವವಾಗಿದೆ. 70 ವರ್ಷಗ ಳಲ್ಲಿ ಮಾಡಲಾಗಿದ್ದನ್ನು ಕೇವಲ 2 ವರ್ಷಗ ಳಲ್ಲಿ ಅತ್ಯಂತ ಯಶಸ್ವಿ ಹಾಗೂ ಚತುರತೆಯಿಂದ ಜಾರಿಗೊಳಿಸಲಾಗಿದೆ. ಗೌರ ವಾನ್ವಿತ ಪ್ರಧಾನಮಂತ್ರಿ ಅವರು ಕೆಂಪುಕೋಟೆಯ ಪ್ರಾಂಗಣದ ಮೇಲೆ ಮೊದಲು ರಾಷ್ಟ್ರದಲ್ಲಿನ ನಲ್ಲಿ ನೀರಿನ ಸಂಪರ್ಕ ಹೊಂದಿಲ್ಲದ ಮನೆಗಳ ಬಗ್ಗೆ ಮಾತನಾಡುವ ಮೂಲಕ, ಜಲ ಜೀವನ್‌ ಮಿಷನ್‌ನ ಬೀಜವನ್ನು ಬಿತ್ತಿದರು.

ಅವರು ತಮ್ಮ “ಮನ್‌ ಕೀ ಬಾತ್‌’ನಲ್ಲಿ ಪಾನಿ – ನೀರನ್ನು ಪರಮೇಶ್ವರ ಅಂದರೆ ದೇವರು ಮತ್ತು ಪರಸ್‌ ಸ್ಪರ್ಷಮಣಿ ಅಥವಾ ಅಮೃತ(ಎಲಿಕ್ಸರ್‌ )ದ ಸಮಾನ ಹಾಗೂ ಜೆಜೆಎಂ ತಂಡವನ್ನು ಎತ್ತರದ ಸ್ಥಾನಮಾನಕ್ಕೇರಿಸಿದರು ಮತ್ತು ನೀರು ಒದಗಿಸುವುದು ದೇವರನ್ನು ಜನರ ಮನೆಗೆ ಕೊಂಡೊ ಯ್ದಂತೆ, ಅದು ಮಾನವೀಯ ಸೇವೆಯ ರೂಪ ಮತ್ತು ದೈವಿಕ ಸೇವೆ ಎಂದರು. ಅನಂತರ ಎರಡು ವರ್ಷಗ ಳಲ್ಲಿ ಸಂಪೂರ್ಣ ಗಮನಹರಿಸಿದ್ದರಿಂದ ಮತ್ತು ಅವಿರತ ಶ್ರಮದ ಫಲವಾಗಿ, ಭಾರತ 8.12 ಕೋಟಿ ಕುಟುಂಬಗಳಿಗೆ ಅಂದರೆ ಶೇ.42.46ರಷ್ಟು ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಒದಗಿಸುವಲ್ಲಿ ಸಫಲವಾಗಿದೆ. ಕಳೆದ 70 ವರ್ಷಗಳ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ, ಅಷ್ಟು ವರ್ಷಗಳಲ್ಲಿ ಕೇವಲ 3.23 ಕೋಟಿ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ನೀಡಲಾಗಿತ್ತು. ಆದರೆ ಜೆಜೆಎಂ ಅಡಿ ಕೇವಲ 2 ವರ್ಷಗ ಳಲ್ಲಿ 4.92 ಕೋಟಿ ಮನೆಗಳಿಗೆ ಕೊಳಾಯಿ ನೀರಿನ ಸಂಪರ್ಕ ನೀಡಲಾಗಿದ್ದು, 78 ಜಿಲ್ಲೆಗಳ 930 ಬ್ಲಾಕ್‌ಗಳು, 56,696 ಪಂಚಾಯತ್‌ಗಳು ಮತ್ತು 1,13,005 ಗ್ರಾಮಗಳಲ್ಲಿ ಶೇ.100ರಷ್ಟು ಮನೆಗಳಿಗೆ ಕೊಳಾಯಿ ನೀರಿನ ಸಂಪರ್ಕ ಒದಗಿಸಲಾಗಿದೆ. ಸಂಖ್ಯೆಗಳು ಮತ್ತು ಅದರ ಪ್ರಗತಿಯ ಗ್ರಾಫ್‌ ನೋಡಿದಾಗ ಅದು ಗೂಳಿಯಂತೆ ಓಡುತ್ತಿದೆ. ಅಂಕಿ ಸಂಖ್ಯೆಯನ್ನು ಉಲ್ಲೇಖೀಸಿ ಭಾರತೀಯರ ಮೇಲೆ ಕಠಿನ ಪ್ರಭಾವ ಬೀರಲಾಗದು ಮತ್ತು ಈ ಸತ್ಯಾಸತ್ಯ ತೆಯ ವಿರುದ್ಧ ಅವರನ್ನು ಹಿಡಿದಿಡಲಾಗದು. ಸ್ವಾತಂತ್ರಾé ಅನಂತರ ಕಳೆದ 74 ಬೇಸಗೆಗಳಲ್ಲಿ ಅವರು, ಹಲವು ನೀತಿಗಳು ಮತ್ತು ಯೋಜನೆಗಳಿಂದ ಬಜೆಟ್‌ ವರೆಗೆ ಮತ್ತು ಕಾಗದಗಳಿಗೆ ದತ್ತಾಂಶ ವರ್ಗಾವಣೆಯಾಗಿರುವುದನ್ನು ಮತ್ತು ಅದು ನಿಜ ಜೀವನಕ್ಕೆ ಪರಿವರ್ತನೆಯಾಗದಿರುವು ದನ್ನು ಕಂಡಿದ್ದಾರೆ. ಹಾಗಾಗಿ ಅಂಕಿ ಸಂಖ್ಯೆಗಳು ಜನ ರ ನ್ನು ಪ್ರಭಾವಗೊಳಿಸುವಲ್ಲಿ ವಿಫಲವಾಗುತ್ತವೆ. ಆದರೆ ಯಾವುದು ವಿಫಲವಾಗುವುದಿಲ್ಲವೆಂದರೆ ಅವರೇ ತಮ್ಮ ಕಣ್ಣಾರೆ ನೋಡುತ್ತಿರುವುದು, ನಂಬುತ್ತಿರುವುದು ಮತ್ತು ಪರಿಶೀಲಿಸುತ್ತಿರುವುದು ಹಾಗೂ ಸ್ಪಷ್ಟವಾಗಿ ಕಾಣುತ್ತಿರು ವುದು. ಈ ಯೋಜನೆ ರಾಷ್ಟ್ರದ ಪರಿಶೀಲನೆಗೆ ಶೇ.100ರಷ್ಟು ಜವಾಬ್ದಾರಿಯುತ ಎಂಬುದು ಹೆಮ್ಮೆಯ ಸಂಗತಿಯಾಗಿದೆ. ಜೆಜೆಎಂ ಡ್ಯಾಶ್‌ ಬೋರ್ಡ್‌ನಲ್ಲಿಯೇ ತಮ್ಮ ಪ್ರದೇಶದಲ್ಲಿ ಪ್ರತೀ ದಿನ ನೀಡಿರುವ ಹೊಸ ನಲ್ಲಿ ನೀರಿನ ಸಂಪರ್ಕಗಳ ಕ್ಷಣ ಕ್ಷಣದ ನೈಜ ಮಾಹಿತಿಯನ್ನು ಯಾರು ಬೇಕಾದರೂ ಪಡೆಯಬಹುದು. ಜತೆಗೆ ಅವರು ಪ್ರತಿಯೊಂದು ಜಿಲ್ಲೆಗ ಳಲ್ಲಿ, ತಮ್ಮ ಗ್ರಾಮಗಳಲ್ಲಿ ಹಾಗೂ ಪ್ರತೀ ಗ್ರಾಮಗಳಲ್ಲಿನ ಫಲಾನುಭವಿಗಳ ಪಟ್ಟಿಯನ್ನು ನೋಡಬಹುದು, ಜತೆಗೆ ನೀರಿನ ಇತ್ತೀಚಿನ ಗುಣಮಟ್ಟವನ್ನೂ ಸಹ ಪರಿಶೀಲಿ ಸಬಹುದು, ಅಲ್ಲದೆ ಎಷ್ಟು ಸಂಖ್ಯೆಯ ಜಲಮೂಲಗಳನ್ನು ನಿರ್ಮಿಸಲಾಗಿದೆ ಗ್ರಾಮಗಳ ನೀರು ಬಳಕೆದಾರರ ಸಮಿತಿಯಲ್ಲಿ ಯಾರಿದ್ದಾರೆ ಮತ್ತು ತಂತ್ರಜ್ಞರ ಮಾಹಿತಿ ಯನ್ನೂ ಸಹ ಪಡೆಯಬಹುದಾಗಿದೆ. ಮಿಷನ್‌ನ ಸೆನ್ಸಾರ್‌ ಆಧಾರಿತ ನೀರಿನ ಗುಣಮಟ್ಟ ಪರೀಕ್ಷಾ ವ್ಯವಸ್ಥೆಯು ವಿಶ್ವ ದರ್ಜೆಯ ಮಟ್ಟಕ್ಕಿಂತ ಕಡಿಮೆಯಿಲ್ಲ. ಮುಕ್ತ ಸಾರ್ವಜನಿಕ ವೇದಿಕೆಗಳಲ್ಲಿ ದಿನದಲ್ಲಿ ಹಲವು ಬಾರಿ ನಿರ್ದಿಷ್ಟ ಮಾನ ದಂಡಗಳ ಮೂಲಕ ನೀರಿನ ನೈಜ ಸಮಯದ ಗುಣ ಮಟ್ಟ ವನ್ನು ಪರಿಶೀಲಿಸುವುದನ್ನು ನೋಡಬಹುದಾಗಿದೆ. ಮಿಷನ್‌ನ ನೀರಿನ ಗುಣಮಟ್ಟದ ಕುರಿತು ಪ್ರತ್ಯೇಕ ಲೇಖನ ಆವಶ್ಯಕತೆ ಇದೆ, ಅದನ್ನು ಇನ್ನೊಂದು ದಿನ ನೋಡೋಣ. ಒಟ್ಟಾರೆ ಒಂದೇ ಸಾಲಿನಲ್ಲಿ ಹೇಳುವುದಾದರೆ, ಜಲಜೀವನ್‌ ಮಿಷನ್‌ ಸ್ವತಃ ಜನರಿಗೆ ತಪಾಸಣೆ ಮಾಡಲು, ತೀರ್ಪು ನೀಡಲು ಮತ್ತು ನಿಜವಾಗಿಯೂ ಪ್ರಗತಿ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಅವಕಾಶ ಮಾಡಿಕೊಡುತ್ತದೆ.

ಜಲಜೀವನ್‌ ಮಿಷನ್‌ನ ಅಸಾಧಾರಣ ಕೆಲಸವನ್ನು ಉಲ್ಲೇಖೀಸುವಾಗ ನಾವು ಅದರ ಒಂದು ಸಾಧನೆಯನ್ನು ಹೆಚ್ಚಾಗಿ ಚರ್ಚಿಸುವುದಿಲ್ಲ, ಅದೆಂದರೆ ಮಹಿಳಾ ಸಶಕ್ತೀಕರಣ. ಮೊದಲಿಗೆ ಇದು, ಮಹಿಳೆಯರು ದೂರ ಕ್ರಮಿಸುವ ಅಗತ್ಯವನ್ನು ನಿವಾರಿಸುತ್ತದೆ, ಜತೆಗೆ ಸಮುದಾಯ ಮಟ್ಟದಲ್ಲಿ ಮಹಿಳಾ ನಾಯಕಿಯರನ್ನು ಸೃಷ್ಟಿಸುವ ಮೂಲಕ ಉದ್ಯೋಗ, ಕೌಶಲ ಮತ್ತು ಸಮಾಜದಲ್ಲಿ ಇದುವರೆಗೆ ಇದ್ದ ಲಿಂಗ ಪಾತ್ರಗಳಲ್ಲಿನ ಬದಲಾವಣೆಯನ್ನು ಪ್ರಮುಖವಾಗಿ ವೃದ್ಧಿಸುತ್ತಿದೆ. ಈ ಮಹಿಳಾ ನಾಯಕಿಯರು ತಮ್ಮನ್ನು ಶೇ.50ರಷ್ಟು ಮೀಸಲಿ ಟ್ಟಿರುವ ಗ್ರಾಮಗಳು ಮತ್ತು ಜಲ ನೈರ್ಮಲ್ಯ ಸಮಿತಿಗಳಲ್ಲಿ ಸ್ಥಾನ ಪಡೆಯುತ್ತಾರೆ ಮತ್ತು ಪೈಲಟ್‌ನ ಸ್ಥಾನ ಅಲಂಕರಿಸಿ, ಗ್ರಾಮಗಳ ಕುಡಿಯುವ ನೀರು ಪೂರೈಕೆ ಯೋಜನೆಗಳನ್ನು ಸಿದ್ಧಪಡಿಸುವುದು, ಅನುಷ್ಠಾನ, ನಿರ್ವಹಣೆ ಮತ್ತು ಕಾರ್ಯಾಚರಣೆ ಸೇರಿ ಎಲ್ಲ ಕಾರ್ಯದಲ್ಲಿ ಪ್ರತಿಕ್ಷಣವೂ ತೊಡಗಿಸಿಕೊಳ್ಳುತ್ತಾರೆ. ಅಲ್ಲದೆ ಪ್ರತೀ ಹಳ್ಳಿಯ 5ಕ್ಕಿಂತ ಹೆಚ್ಚು ಮಹಿಳೆಯರಿಗೆ ನೀರಿನ ಗುಣಮಟ್ಟದ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ವಹಿಸಲಾಗಿದೆ ಮತ್ತು ಹಲವು ಮಹಿಳೆಯರು ಪ್ಲಂಬರ್‌, ಮೆಕ್ಯಾನಿಕ್‌, ಪಂಪ್‌ ಆಪರೇಟರ್‌ ಮತ್ತಿತರ ಕೌಶಲ್ಯಗಳನ್ನು ಹೊಂದಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಈ ಎರಡು ವರ್ಷಗಳಲ್ಲಿ, ಮಹಿಳೆಯರು ಈ ಹೊಸ ಜವಾಬ್ದಾರಿಗಳಿಗೆ ಸಕ್ರಿಯವಾಗಿ ಹೆಜ್ಜೆ ಹಾಕುತ್ತಿರುವುದು ಹೃದಯಸ್ಪರ್ಶಿಯಾಗಿದೆ. ಈ ಕ್ರಿಯಾಶೀಲ ಮಹಿಳೆಯರು ಯುವ ಬಾಲಕಿಯರ ಮೇಲೆ ಬೀರಲಿರುವ ಪರಿಣಾಮ ನಿಜಕ್ಕೂ ಅಪಾರ. ಅವರ ನೆರಳಿನಲ್ಲಿ ಯುವ ಬಾಲಕಿಯರು ಬೆಳೆಯುತ್ತಾರೆ ಮತ್ತು ಭವಿಷ್ಯದಲ್ಲಿ ಅವರು ಇತರೆ ಸ್ಥಾಪಿತ ಲಿಂಗಪಾತ್ರಗಳನ್ನು ಕಸಿದುಕೊಳ್ಳುತ್ತಾರೆ.

ಮೆಮೆಟಿಕ್ಸ್‌ ಎಂದು ಕರೆಯಲ್ಪಡುವ ವಿಭಿನ್ನ ಅಧ್ಯಯನವಿದೆ, ಅದರಲ್ಲಿ ಕೆಲವು ಆಲೋಚನೆಗಳು ಜೀವಂತ ಘಟಕಗಳಂತೆ ಕಾರ್ಯನಿರ್ವಹಿಸುತ್ತವೆ, ಅವು ಮರು ಉತ್ಪಾದಿಸುತ್ತವೆ, ಕೆಲವೊಮ್ಮೆ ಅವು ಸರಳವಾಗಿ ಪುನರಾವರ್ತನೆಯಾಗುತ್ತವೆ, ಕೆಲವೊಮ್ಮೆ ವಿಕಾಸ ಹೊಂದುತ್ತವೆ ಮತ್ತು ಅವು ದೀರ್ಘ‌ ಬದಲಾವಣೆಗೂ ಮುನ್ನ ವಾಸಿಸುವ ಜಗತ್ತನ್ನೇ ಬದಲಾಯಿಸುತ್ತದೆ. ಪ್ರಧಾನಿಯಿಂದ ಪ್ರತೀ ಮನೆಗೂ ಕೊಳಾಯಿ ಸಂಪರ್ಕ ಕಲ್ಪಿಸುವ ಕಲ್ಪನೆ ಜೀವಂತ ಘಟಕವಾಗಿ ಮಾರ್ಪಟ್ಟಿದ್ದು, ಅದೊಂದು ಜಗತ್ತಿಗೆ ಹೊಳೆಯದ ಕ್ರಿಯಾತ್ಮಕ ಯೋಜನೆ ಯಾಗಿದೆ. ಪ್ರತೀ ಕೊಳಾಯಿಯೊಂದಿಗೆ ಮತ್ತು ಪ್ರತೀ ಜಲ ನೈರ್ಮಲ್ಯ ಸಮಿತಿಗಳೊಂದಿಗೆ ಅದನ್ನು ಪುನರಾವರ್ತಿಸಲಾ ಗುತ್ತಿದೆ ಮತ್ತು ಈ ಆಲೋಚನೆಯೇ ಮಹಿಳಾ ಸಶಕ್ತೀ ಕರಣದ ಪರಿಕಲ್ಪನೆ ಯನ್ನು ತನ್ನೊಳಗೆ ಬೆಸೆಯುವುದಲ್ಲದೆ ಹೊಸತನ್ನು ಪರಿವರ್ತನೆ ಗೊಳಿಸುತ್ತಿದೆ. 2024ರ ವೇಳೆಗೆ ಪ್ರತೀ ಮನೆಗೂ ಕೊಳಾಯಿ ನೀರಿನ ಸಂಪರ್ಕ ಕಲ್ಪಿಸುವ ಜಲ ಜೀವನ್‌ ಮಿಷನ್‌ ಎಂಬ ಕಲ್ಪನೆಯು ನೀರಿನ ವಲಯದಲ್ಲಿ ಮಾತ್ರವಲ್ಲದೆ, ಇತರ ಸಂಬಂಧಿತ ವಲಯಗಳ ಮೇಲೂ ಯಾವ ರೀತಿಯ ಪರಿವರ್ತನೆ ತರಲಿದೆ. ಅಲ್ಲಿಯವರೆಗೆ ನಾವು ಮನೆಗಳಿಗೆ ಹೊಸ ನಲ್ಲಿ ನೀರಿನ ಸಂಪರ್ಕ ಒದಗಿಸುತ್ತಲೇ ಇರುತ್ತೇವೆ, ಹೊಸ ಮಹಿಳಾ ನಾಯಕಿ ಯರನ್ನು ಸೃಷ್ಟಿಸುತ್ತೇವೆ ಮತ್ತು ಅವರ ಮೊಗದಲ್ಲಿ ಹೊಸ ಮುಗುಳ್ನಗೆ ಮೂಡಿಸುತ್ತಲೇ ಇರುತ್ತೇವೆ.

– ಗಜೇಂದ್ರ ಸಿಂಗ್‌ ಶೇಖಾವತ್‌, ಕೇಂದ್ರ ಜಲಶಕ್ತಿ ಸಚಿವರು

ಟಾಪ್ ನ್ಯೂಸ್

Moodabidri: ಉದ್ಯಮಿ ಮನೆಯಲ್ಲಿ ರೂ.1.5 ಲಕ್ಷ ಕಳ್ಳತನ

Moodabidri: ಉದ್ಯಮಿ ಮನೆಯಲ್ಲಿ ರೂ.1.5 ಲಕ್ಷ ಕಳ್ಳತನ

1-sasadsa

2nd ODI ; ಆಸೀಸ್ ವಿರುದ್ಧ ಭರ್ಜರಿ ಜಯ : ಸರಣಿ ವಶ ಪಡಿಸಿಕೊಂಡ ಟೀಮ್ ಇಂಡಿಯಾ

Katapadi: ಮಟ್ಕಾ ಅಡ್ಡೆಗೆ ದಾಳಿ ; ವ್ಯಕ್ತಿ ಸೆರೆ

Katapadi: ಮಟ್ಕಾ ಅಡ್ಡೆಗೆ ದಾಳಿ ; ವ್ಯಕ್ತಿ ಸೆರೆ

Fraud Case ಶಂಕರಪುರ: ಬ್ಯಾಂಕ್‌ ಕೆವೈಸಿ ಮಾಹಿತಿ ಪಡೆದು ಹಣ ವಂಚನೆ: ದೂರು

Fraud Case ಶಂಕರಪುರ: ಬ್ಯಾಂಕ್‌ ಕೆವೈಸಿ ಮಾಹಿತಿ ಪಡೆದು ಹಣ ವಂಚನೆ: ದೂರು

1-sasadas

Pavagada ; ಹಾವು ಕಡಿದು ಅರು‌ ವರ್ಷದ ಬಾಲಕ ಸಾವು: ಆಸ್ಪತ್ರೆ ಎದುರು ಪ್ರತಿಭಟನೆ

Ullal ನೇತ್ರಾವತಿ ಸೇತುವೆಯಲ್ಲಿ ಮೀನು ಸಾಗಾಟದ ಪಿಕಪ್‌ ವಾಹನ ಪಲ್ಟಿ

Ullal ನೇತ್ರಾವತಿ ಸೇತುವೆಯಲ್ಲಿ ಮೀನು ಸಾಗಾಟದ ಪಿಕಪ್‌ ವಾಹನ ಪಲ್ಟಿ

Belthangady ಮರ ಕಡಿಯುವ ವೇಳೆ ಆಕಸ್ಮಿಕವಾಗಿ ಮರ ಬಿದ್ದು ವ್ಯಕ್ತಿ ಸಾವು

Belthangady ಮರ ಕಡಿಯುವ ವೇಳೆ ಆಕಸ್ಮಿಕವಾಗಿ ಮರ ಬಿದ್ದು ವ್ಯಕ್ತಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Modi: ಪ್ರಧಾನಮಂತ್ರಿ ಮೋದಿಯವರ ಭವ್ಯ ದೂರದೃಷ್ಟಿ…ಭಾರತದ ಸುವರ್ಣ ಯುಗ…

PM Modi: ಪ್ರಧಾನಮಂತ್ರಿ ಮೋದಿಯವರ ಭವ್ಯ ದೂರದೃಷ್ಟಿ…ಭಾರತದ ಸುವರ್ಣ ಯುಗ…

1-asddsaddd

‘INDIA’ಕ್ಕೆ ಬೇಕಿದೆ ಸಮರ್ಥ ನಾಯಕತ್ವ

ಪ್ರಭಾವಿಗಳ ಪ್ರಚಾರಕ್ಕೆ ಕಡಿವಾಣ ಬೇಕು

ಪ್ರಭಾವಿಗಳ ಪ್ರಚಾರಕ್ಕೆ ಕಡಿವಾಣ ಬೇಕು

TRANSFER

ಸರಕಾರಿ ನೌಕರರ ವರ್ಗಾವಣೆ ರಾಜಕೀಯ ಮುಕ್ತವಾಗಿರಲಿ

1-w-ewqewq

ಸ್ಥಿರ ಬೆಳವಣಿಗೆಗೆ ಪರಿಸರ ಸಹ್ಯ ನಡೆ ನಮ್ಮದಾಗಲಿ

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

Moodabidri: ಉದ್ಯಮಿ ಮನೆಯಲ್ಲಿ ರೂ.1.5 ಲಕ್ಷ ಕಳ್ಳತನ

Moodabidri: ಉದ್ಯಮಿ ಮನೆಯಲ್ಲಿ ರೂ.1.5 ಲಕ್ಷ ಕಳ್ಳತನ

1-sasadsa

2nd ODI ; ಆಸೀಸ್ ವಿರುದ್ಧ ಭರ್ಜರಿ ಜಯ : ಸರಣಿ ವಶ ಪಡಿಸಿಕೊಂಡ ಟೀಮ್ ಇಂಡಿಯಾ

ayodhya airport

Ayodhya: ವರ್ಷಾಂತ್ಯಕ್ಕೆ ಅಯೋಧ್ಯಾ ವಿಮಾನ ನಿಲ್ದಾಣ ಲೋಕಾರ್ಪಣೆ

Katapadi: ಮಟ್ಕಾ ಅಡ್ಡೆಗೆ ದಾಳಿ ; ವ್ಯಕ್ತಿ ಸೆರೆ

Katapadi: ಮಟ್ಕಾ ಅಡ್ಡೆಗೆ ದಾಳಿ ; ವ್ಯಕ್ತಿ ಸೆರೆ

Fraud Case ಶಂಕರಪುರ: ಬ್ಯಾಂಕ್‌ ಕೆವೈಸಿ ಮಾಹಿತಿ ಪಡೆದು ಹಣ ವಂಚನೆ: ದೂರು

Fraud Case ಶಂಕರಪುರ: ಬ್ಯಾಂಕ್‌ ಕೆವೈಸಿ ಮಾಹಿತಿ ಪಡೆದು ಹಣ ವಂಚನೆ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.