ಶಾಕೂ ಇಲ್ಲ ಎಂತದ್ದು ಇಲ್ಲ, ತೀರ್ಪಿಗೆ ತಲೆಬಾಗಿದ್ದೇವೆ: ಸಿದ್ದರಾಮಯ್ಯ
ಸ್ಥಾನ ಒಂದಾಗಲಿ, ಎರಡಾಗಲಿ ವ್ಯತ್ಯಾಸ ಇಲ್ಲ
Team Udayavani, May 25, 2019, 11:31 AM IST
ಹೊಸದಿಲ್ಲಿ: ಲೋಕಸಭಾ ಚುನಾವಣಾ ಫಲಿತಾಂಶ ನಮಗೆ ಶಾಕ್ ನೀಡಿಲ್ಲ, ಎಂತದ್ದು ಇಲ್ಲ,ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಪಿಗೆ ತಲೆಬಾಗಲೇ ಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಶುಕ್ರವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ , ರಾಜ್ಯ ಸರ್ಕಾರ ಸುಭದ್ರವಾಗಿದ್ದು ಯಾವುದೇ ಬದಲಾವಣೆ ಆಗುವುದಿಲ್ಲ ಎಂದರು.
ಈಗ ಸೋಲಿಗೆ ಕಾರಣ ಹುಡುಕಲಿಕ್ಕೆ ಹೋಗುವುದಿಲ್ಲ. ಜನ ಕೊಟ್ಟ ತೀರ್ಪನ್ನು ತಲೆ ಬಾಗಿ ಒಪ್ಪಿಕೊಂಡಿದ್ದೇವೆ ಎಂದರು.
ಸ್ಥಾನ ಒಂದಾಗಲಿ, ಎರಡಾಗಲಿ ವ್ಯತ್ಯಾಸ ಇಲ್ಲ, ಜನರ ತೀರ್ಪು ಒಪ್ಪಿಕೊಳ್ಳಬೇಕು ಎಂದರು.