ವಾರಾಂತ್ಯದ ಕರ್ಫ್ಯೂ : ಮಣಿಪಾಲ ಸೇರಿದಂತೆ ಉಡುಪಿ ನಗರದಲ್ಲಿ ಹೆಚ್ಚಿದ ವಾಹನ ಓಡಾಟ
Team Udayavani, Jul 3, 2021, 7:59 PM IST
ಉಡುಪಿ : ಜಿಲ್ಲೆಯಲ್ಲಿ ಕೋವಿಡ್ -19 ನಿಯಂತ್ರಣ ಕುರಿತು ವಾರಾಂತ್ಯದ ಕರ್ಫ್ಯೂ ಜಾರಿಯಲಿದ್ದು, ಶನಿವಾರ ಅಗತ್ಯ ಮತ್ತು ತುರ್ತು ಚಟುವಟಿಕೆಗಳನ್ನು ಹೊರತುಪಡಿಸಿ ಜನರ ಓಡಾಟಕ್ಕೆ ನಿಷೇಧವಿತ್ತು.
ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ದಿನಸಿ ಸಹಿತ ಅಗತ್ಯ ವಸ್ತು ಮಾರಾಟಕ್ಕೆ ಸಂಬಂಧಿಸಿದ ಅಂಗಡಿ-ಮುಂಗಟ್ಟುಗಳು ಬೆಳಗ್ಗೆ 6 ಗಂಟೆಯಿಂದ ಅಪರಾಹ್ನ 2 ಗಂಟೆಯವರೆಗೆ ತೆರೆದಿದ್ದವು.
ಉಳಿದೆಲ್ಲ ವಾಣಿಜ್ಯ ಚಟುವಟಿಕೆ, ವ್ಯಾಪಾರ ವಹಿವಾಟು ಸ್ತಬ್ಧವಾಗಿತ್ತು. ಮಣಿಪಾಲ ಸೇರಿದಂತೆ ಉಡುಪಿ ನಗರದ ಕೆಲ ಭಾಗದಲ್ಲಿ ವಾಹನ ಸಂಚಾರ ಹೆಚ್ಚಿತ್ತು. ರವಿವಾರವೂ ಇದೇ ರೀತಿ ಮುಂದುವರಿಯಲಿದೆ.
ಇದನ್ನೂ ಓದಿ :3ನೇ ಹಂತದ ಅನ್ ಲಾಕ್ : ದೇವಸ್ಥಾನ, ಶಾಪಿಂಗ್ ಮಾಲ್ ಗಳಿಗೆ ಅನುವು : ಸಿನಿ ಪ್ರಿಯರಿಗೆ ಶಾಕ್