ನಾವೇಕೆ ನಂದಾದೀಪವನ್ನು ಬೆಳಗಬೇಕು?


Team Udayavani, Apr 4, 2020, 6:00 AM IST

ನಾವೇಕೆ ನಂದಾದೀಪವನ್ನು ಬೆಳಗಬೇಕು?

ಹಳೆ ಬಾಳು ಸತ್ತಿತ್ತು ಕೊನೆ ಬಾಳು ಸುಟ್ಟಿತ್ತು ಹೊಸಬಾಳು ಹುಟ್ಟಿತ್ತು ದೀಪ ಹಚ್ಚಾ|
ಸಾವಿನ ಒಳಸಂಚು ಮಾಯದ ಕಣ್ಣು ಮಿಂಚು ನಿನ್ನೆದುರು ನಂದಿತು ದೀಪ ಹಚ್ಚಾ||
– ಕವಿ ಎಸ್‌.ವಿ. ಪರಮೇಶ್ವರ ಭಟ್ಟರು ಹೀಗೆ ಹಾಡಿದ್ದರು.

ಪ್ರಕೃತಿ ಆರಾಧಕ ಮಾನವನಿಗೆ ಸೂರ್ಯನೇ ಕಣ್ಣಿಗೆ ಕಾಣುವ ದೇವರು. ಸೂರ್ಯನ ಕಿರಣ ಗಳಿಗೆ ಔಷಧೀಯ ಗುಣವಿರುವುದು ನಮಗೆಲ್ಲ ಗೊತ್ತಿ ರುವ ಸಂಗತಿಯೇ. ಕಲ್ಲಿನ ಆಯುಧಗಳನ್ನು ಚೂಪು ಮಾಡಿಕೊಳ್ಳುವಾಗ ಅಕಸ್ಮಾತ್‌ ಆದ ಬೆಂಕಿಯ ಅವಿಷ್ಕಾರದಿಂದಾಗಿ ಮಾನವನ ಅಲೆಮಾರಿ ಬದುಕು ಬದಲಾಯಿತು, ನಾಗರಿಕತೆಯ ಕಿಡಿ ಬೆಳಗಿತು. ಕಾಡಿನಲ್ಲಿ, ರಾತ್ರಿಯ ಕಗ್ಗತ್ತಲೆಯಲ್ಲಿ ಕಾಡು ಪ್ರಾಣಿಗಳನ್ನು ಹತ್ತಿಕ್ಕಲು ದೀಪದ ಜ್ವಾಲೆ ಅವನಿಗೆ ಖಂಡಿತ ಸಹಾಯ ಮಾಡಿದ್ದಿರಬಹುದು.
ಕಾಲಕ್ರಮೇಣ ಅಗ್ನಿಯ ಸಂರಕ್ಷಣೆಗಾಗಿ ಹೆಣ್ಣು ಮನೆ ಯಲ್ಲಿ ನಿಂತು ಗೃಹಿಣಿಯಾದಳು. ಗಂಡು ಬೇಟೆಯಾಡಲು ಕಾಡಿಗೆ ಹೋಗುವುದು ರೂಢಿಯಾಯಿತು. ಅದರ ಪ್ರತೀಕವಾಗಿ ನಾಗರಿಕತೆಯ ತೊಟ್ಟಿಲಾದ ಹಿಂದೂ ಧರ್ಮದಲ್ಲಿ ಸಂಜೆ ದೀಪ ಹಚ್ಚುವ ಪದ್ಧತಿ ರೂಢಿಯಾಗಿದ್ದಿರಬಹುದು.
ದೀಪದ ಜ್ವಾಲೆ ಊಧ್ವಮುಖೀ. ಜ್ಞಾನ ಎತ್ತರಕ್ಕೆ ಪ್ರಜ್ವಲಿಸಲಿ ಎಂಬುದರ ದ್ಯೋತಕ.
ಎಲ್ಲ ಧರ್ಮಗಳಲ್ಲೂ ಇದೆ

ಮನಸ್ಸು, ಶರೀರ, ಬುದ್ಧಿ ಮತ್ತು ನಮ್ಮನ್ನಾಳುವ ಚೈತನ್ಯ ಶಕ್ತಿ- ಈ ನಾಲ್ಕೂ ಸೇರಿ ಆರೋಗ್ಯವಾಗುತ್ತದೆ. ಎಲ್ಲ ಧರ್ಮಗಳೂ ಇವು ಗಳನ್ನು ಉದ್ದೀಪನಗೊಳಿಸುವ ಕ್ರಿಯೆಗಳಿಗೆ ಮಹತ್ವ ನೀಡಿವೆ. ಮೇಣ ತಾನು ಕರಗಿ ಬೆಳಕು ಚೆಲ್ಲುವುದು ತ್ಯಾಗದ, ಪರಿಶ್ರಮದ ನಂಬಿಕೆಯಾಗಿದೆ. ಮೇಣ ದಂತಿರುವ ನಮ್ಮ ಶರೀರ, ಪ್ರಾಪಂಚಿಕವಾಗಿ ತ್ಯಾಗ- ಪರಿಶ್ರಮದಲ್ಲಿ ಬದುಕಲಿ ಎಂಬುದು ಸಂಕೇತ.

ಅಧ್ಯಯನಕ್ಕೆ ಸಿಲುಕದ, ಅಗೋಚರ ಅಧ್ಯಾತ್ಮಿಕ ತೃಪ್ತಿಯನ್ನು ಮನುಷ್ಯನ ಮನಸ್ಸು ದೀಪದ ಬೆಳಕಿನಲ್ಲಿ ಕಂಡುಕೊಳ್ಳುತ್ತದೆ. ಕಾಣದ ದೇವರನ್ನು ದೀಪದ ಬೆಳಕಿನಲ್ಲಿ ಕಾಣುವ ಪ್ರಯತ್ನದಲ್ಲಿ ಮನುಷ್ಯ ಮನಃಶಾಂತಿಯನ್ನು ಕಂಡುಕೊಂಡಿರುವುದೇ ದೀಪ ಬೆಳಗುವುದಕ್ಕಿರುವ ಮಹತ್ವವನ್ನು ಸಾರುತ್ತದೆ.

ಇಂದು ಪ್ರಕೃತಿಯೇ ನಮ್ಮ ಮುಂದೆ ಇರಿಸಿರುವ ಮಹಾ ಸವಾಲನ್ನು ನಾವು ಗೆಲ್ಲಬೇಕಾದರೆ ನಿಸರ್ಗದ ಮಹಾಶಕ್ತಿಗೆ ವಿನಮ್ರವಾಗಿ ತಲೆಬಾಗುವ ಅರಿವು ನಮ್ಮಲ್ಲಿ ಉಂಟಾಗಬೇಕು. ಆ ಅರಿವೇ ಈ ಬೆಳಕು. ನಾನು ಒಂಟಿಯಲ್ಲ. ನನ್ನೊಂದಿಗೆ ಬೆಳಕಿದೆ ಎನ್ನುವ ಪ್ರಜ್ಞೆಯೂ ಇದು ಹೌದು.

- ಡಾ| ಶುಭಾ ಮಧುಸೂಧನ್‌
ಮನೋಚಿಕಿತ್ಸಾ ವಿಜ್ಞಾನಿ

ಟಾಪ್ ನ್ಯೂಸ್

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.