ಸುರತ್ಕಲ್ :ಮಹಿಳೆ ನಾಪತ್ತೆ, ಹೊಳೆಗೆ ಹಾರಿರುವ ಶಂಕೆ : ಶಿಬರೂರು ಹೊಳೆಯ ಬಳಿ ಪಾದರಕ್ಷೆ ಪತ್ತೆ
Team Udayavani, Jul 13, 2021, 10:31 PM IST
ಸುರತ್ಕಲ್: ಸೂರಿಂಜೆ ಬಳಿಯ ಪುಚ್ಚಾಡಿ ನಿವಾಸಿ ಪುಷ್ಪ (40) ಎಂಬ ವಿವಾಹಿತ ಮಹಿಳೆ ಸೋಮವಾರ ಮಧ್ಯಾಹ್ನದಿಂದ ಮನೆಯಿಂದ ನಾಪತ್ತೆಯಾಗಿದ್ದಾರೆ.
ಇವರ ಪಾದರಕ್ಷೆಗಳು ಮನೆಯ ಬಳಿ ಇರುವ ಶಿಬರೂರು ಹೊಳೆಯ ಪಕ್ಕದಲ್ಲಿ ಪತ್ತೆಯಾಗಿದೆ. ಇವರು ಮುಂಬಯಿಂದ ಆಗಮಿಸಿದ್ದರು. ಯಾವುದೋ ಕಾರಣಕ್ಕೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂಬ ಶಂಕೆಯಿಂದ ಅಗ್ನಿಶಾಮಕ ದಳದವರು ನದಿಯಲ್ಲಿ ಶೋಧ ಕಾರ್ಯ ನಡೆಸಲು ಮುಂದಾಗಿದ್ದು ಮಳೆಯ ಅಬ್ಬರಕ್ಕೆ ನದಿಯಲ್ಲಿ ಪ್ರವಾಹ ಹೆಚ್ಚಿರುವ ಪರಿಣಾಮ ಶೋಧ ನಡೆಸಲು ಅಡ್ಡಿಯಾಗಿದೆ.
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಚಿನ್ನ ಕಳ್ಳಸಾಗಣೆ ಪ್ರಕರಣ : 12 ಮಂದಿಯ ಜಾಮೀನು ರದ್ದತಿಗೆ ಸುಪ್ರೀಂ ನಕಾರ