ದಿನವಿಡೀ ದುಡಿದು ಪಡೆಯುವ ಕೂಲಿ


Team Udayavani, Jan 16, 2021, 6:20 AM IST

ದಿನವಿಡೀ ದುಡಿದು ಪಡೆಯುವ ಕೂಲಿ

ಕೆಲಸ ಮತ್ತು ವಿಶ್ರಾಂತಿ – ಇವೆರಡೂ ವಿರುದ್ಧ ಧ್ರುವಗಳು ಎಂಬುದು ಒಂದು ವಾದ. ಇನ್ನೊಂದು ವಾದವೆಂದರೆ, ಇವುಗಳು ಒಂದಕ್ಕೊಂದು ಪೂರಕ. ಸದಾ ಕೆಲಸ ಮಾಡುತ್ತಿದ್ದರೆ ವಿಶ್ರಾಂತಿ ಇಲ್ಲವಾಗುತ್ತದೆ, ಹೀಗಾಗಿ ವಿಶ್ರಾಂತಿ ಪಡೆಯಬೇಕಿದ್ದರೆ ದಿನವಿಡೀ ಸುಮ್ಮನೆ ಕುಳಿತಿರಬೇಕು ಅಥವಾ ನಿದ್ದೆ ಮಾಡ ಬೇಕು ಎನ್ನುವುದು ಒಂದು ವಾದ. ಇನ್ನೊಂದು ಇದನ್ನು ವಿರೋಧಿ ಸುತ್ತದೆ. ದಿನವಿಡೀ ಬೆವರು ಸುರಿಸಿ ದುಡಿಯ ಬೇಕು, ಆಗ ನಿದ್ದೆ ಆವರಿಸಿ ಬರುತ್ತದೆ. ದುಡಿದು ದಣಿದ ದೇಹ ಬಡಿದು ಹಾಕಿದಂತೆ ವಿಶ್ರಾಂತಿಯನ್ನು ಅನು ಭವಿಸುತ್ತದೆ ಎನ್ನುವುದು ಎರಡನೆಯ ವಾದದ ಪ್ರತಿಪಾದನೆ.

ಒಂದು ಹಳೆಯ ಕಥೆ ಯಿದೆ. ಇದು ವೃದ್ಧ ನೊಬ್ಬನ ಕಥೆ.

ಚೀನೀ ತಣ್ತೀಜ್ಞಾನಿ ಕನ್‌ಫ್ಯೂಶಿಯಸ್‌ ಒಮ್ಮೆ ನಡೆದು ಹೋಗುತ್ತಿದ್ದಾಗ ಒಬ್ಬ ವೃದ್ಧನನ್ನು ಕಂಡ. ವಿಚಿತ್ರ ಎಂದರೆ ಸುಮಾರು 90 ವರ್ಷಗಳಷ್ಟು ವಯಸ್ಸಿನ ಆ ವೃದ್ಧ 30ರ ಆಸುಪಾಸಿನಲ್ಲಿದ್ದ ತನ್ನ ಮಗನ ಜತೆಗೆ ಸೇರಿಕೊಂಡು ಏತದಲ್ಲಿ ನೀರೆತ್ತುತ್ತಿದ್ದ. ಏತಕ್ಕೆ ಎತ್ತುಗಳನ್ನು ಕಟ್ಟಿರ ಲಿಲ್ಲ; ಒಂದು ಬದಿಯಲ್ಲಿ ವೃದ್ಧ, ಇನ್ನೊಂದು ಬದಿಯಲ್ಲಿ ಅವನ ಮಗ ನೊಗಕ್ಕೆ ಕೊರಳೊಡ್ಡಿದ್ದರು.

ಕನ್‌ಫ್ಯೂಶಿಯಸ್‌ಗೆ ಬಹಳ ವಿಚಿತ್ರ ವಾಗಿ ಕಂಡದ್ದು ಇದೇ. ಅವನಿಗೆ ಅಪ್ಪನ ಜತೆಗೆ ಕಷ್ಟಪಡುತ್ತಿದ್ದ ಯುವಕನ ಬಗ್ಗೆ ಬಹಳ ಕನಿಕರ ಉಂಟಾಯಿತು.

ಕನ್‌ಫ್ಯೂಶಿಯಸ್‌ ಸುಮಾರು ಹೊತ್ತಿನ ವರೆಗೆ ವೃದ್ಧ ತಂದೆ ಮತ್ತು ಯುವಕ ಮಗ ನೀರೆಳೆಯುತ್ತಿದ್ದುದನ್ನು ನೋಡಿದ. ಬಳಿಕ ಮೆಲ್ಲನೆ ವೃದ್ಧ ತಂದೆಯ ಬಳಿಗೆ ಹೋಗಿ, “ನಿನ್ನ ಮಗನಿಗೆ ಸುಮ್ಮನೆ ಯಾಕೆ ಕಷ್ಟ ಕೊಡುತ್ತಿದ್ದೀಯಾ? ಇದು ಮೂರ್ಖ ತನ ಅನ್ನಿಸುವುದಿಲ್ಲವೇ? ಎತ್ತುಗಳನ್ನು ಹೂಡಿ ಈ ಕೆಲಸ ಮಾಡಿಸಬಾರದೇ’ ಎಂದು ಪ್ರಶ್ನಿಸಿದ.

“ಶ್ಶೂ… ಸುಮ್ಮನಿರಿ. ಈಗ ನನ್ನ ಮಗನಿಗೆ ಕೇಳುವ ಹಾಗೆ ಇಂಥ ಅಪದ್ಧಗಳನ್ನೆಲ್ಲ ನುಡಿಯಬೇಡಿ. ಇದೆಲ್ಲ ಅವನ ಕಿವಿಗೆ ಬೀಳಬಾರದು. ಸ್ವಲ್ಪ ಹೊತ್ತಿನ ಬಳಿಕ ಅವನು ಉಣ್ಣಲು ಹೊರಡುತ್ತಾನೆ. ನಿಮ್ಮದೇನಿದ್ದರೂ ಆಗ ಮಾತನಾಡಿ’ ಎಂದು ವೃದ್ಧ ತಂದೆ ಕನ್‌ಫ್ಯೂಶಿಯಸ್‌ನ ಬಾಯಿ ಮುಚ್ಚಿಸಿದ.

ಕನ್‌ಫ್ಯೂಶಿಯಸ್‌ಗೆ ಮತ್ತಷ್ಟು ಆಶ್ಚರ್ಯವಾಯಿತು. ಆದರೂ ವೃದ್ಧನ ವಿನಂತಿಯಂತೆ ಆತ ಅಲ್ಲೇ ಬದಿಯ ಮರದಡಿಯಲ್ಲಿ ಕೊಂಚ ವಿಶ್ರಮಿಸಿದ. ಸ್ವಲ್ಪ ಹೊತ್ತಿನಲ್ಲಿ ವೃದ್ಧನ ಮಗ ಊಟಕ್ಕಾಗಿ ಹೊರಟು ಹೋದಾಗ ಕನ್‌ಫ್ಯೂಶಿ ಯಸ್‌ ಮತ್ತೆ ವೃದ್ಧನ ಬಳಿಗೆ ಬಂದು ಪ್ರಶ್ನೆಗ ಳನ್ನು ಪುನ ರಾವರ್ತಿ ಸಿದ. ಮಾತ್ರ ವಲ್ಲದೆ, ಈ ಪ್ರಶ್ನೆಗಳನ್ನು ಯುವಕ ಮಗ ಕೇಳ ಬಾರದು ಯಾಕೆ ಎಂದೂ ಪ್ರಶ್ನಿಸಿದ.

ವೃದ್ಧ ಕೊಟ್ಟ ಉತ್ತರ ಹೀಗಿತ್ತು, “ನನಗೆ ಈಗ 90 ವರ್ಷ ವಯಸ್ಸಾಗಿದೆ. ಆದರೂ 30ರ ನನ್ನ ಮಗನ ಜತೆಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಸಾಮರ್ಥ್ಯ ಹೊಂದಿದ್ದೇನೆ. ಈಗ ನಾನು ಏತ ತಿರುಗಿಸಲು ಎತ್ತುಗಳನ್ನು ನಿಯೋ ಜಿಸಿದರೆ ನನ್ನ ಮಗ ಜಡ್ಡುಗಟ್ಟುತ್ತಾನೆ, ಅವನಿಗೆ 90 ವರ್ಷವಾಗುವ ಹೊತ್ತಿಗೆ ಏನೂ ಸಾಮರ್ಥ್ಯ ಉಳಿದಿರುವುದಿಲ್ಲ. ಇದಕ್ಕಾಗಿಯೇ ನಿಮ್ಮ ಪ್ರಶ್ನೆಗಳನ್ನೆಲ್ಲ ಮಗನಿಗೆ ಕೇಳುವ ಹಾಗೆ ಎತ್ತಬೇಡಿ ಎಂದು ಹೇಳಿದ್ದು. ನಗರದಲ್ಲಿ ಇದಕ್ಕಾಗಿ ಯಂತ್ರಗಳು ಲಭ್ಯವಿವೆ ಎಂಬುದು ಕೂಡ ನನಗೆ ಗೊತ್ತು. ಅವನ್ನೆಲ್ಲ ಅಳವಡಿಸಿಕೊಂಡರೆ ನನ್ನ ಮಗನ ಕಥೆ ಏನಾದೀತು, ಅವನ ಆರೋಗ್ಯ ಹೇಗಾ ದೀತು, ಶರೀರದ ಕಥೆಯೇನು…’

ನಾವು ಒಂದು ಕೈಯಿಂದ ಮಾಡು ವುದು ಇನ್ನೊಂದು ಕೈಯ ಮೇಲೆ ಪರಿಣಾಮ ಬೀರುತ್ತದೆ. ಮೈಮುರಿ ಯುವಂತೆ ದುಡಿದವನನ್ನು ಮಾತ್ರ ನಿದ್ದೆ ಒತ್ತರಿಸಿಕೊಂಡು ಬರುತ್ತದೆ. ವಿಶ್ರಾಂತಿ ಬೇಕಲ್ಲ ಎಂದುಕೊಂಡು ಹಗಲಿಡೀ ಆರಾಮ ಕುರ್ಚಿಯಲ್ಲಿ ಕುಳಿತವನು ರಾತ್ರಿಯಿಡೀ ನಿದ್ದೆಯಿಲ್ಲದೆ ಹೊರಳಾಡ ಬೇಕಾಗುತ್ತದೆ. ವಿಶ್ರಾಂತಿ ಎಂಬುದು ದುಡಿದು ಪಡೆ ಯಬೇಕಾದ ಕೂಲಿ.

(ಸಾರ ಸಂಗ್ರಹ)

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.