ಇಂದು ವಿಶ್ವ ತಂಬಾಕು ರಹಿತ ದಿನ: ತಂಬಾಕಿನಿಂದ ಪ್ರತಿವರ್ಷ 8 ಮಿಲಿಯನ್ ಸಾವು

ಧೂಮಪಾನವು ಕ್ಯಾನ್ಸರ್ ಮತ್ತಿತರೆ  ರೋಗಗಳಿಗೆ ಒಳಗಾಗುವ ಸಾಧ್ಯತೆಗಳನ್ನು ಕೂಡಾ ಹೆಚ್ಚಿಸುತ್ತದೆ

Team Udayavani, May 31, 2021, 2:16 PM IST

Day-may

ಶ್ವಾಸಕೋಸದ ಕ್ಯಾನ್ಸರ್ ಅತ್ಯಂತ ಸಾಮಾನ್ಯವಾಗಿರುವ ಕ್ಯಾನ್ಸರ್ ಗಳಲ್ಲಿ ಒಂದಾಗಿದೆ ಮತ್ತು ವಿಶ್ವದಾದ್ಯಂತ ಕ್ಯಾನ್ಸರ್-ಸಂಬಂಧಿತ ಮರಣಗಳ ಮುಂಚೂಣಿಯ ಕಾರಣವಾಗಿದೆ. ಇದು ವಿಶ್ವದಾದ್ಯಂತ ಶೇ.13ರಷ್ಟು ಹೊಸ ಕ್ಯಾನ್ಸರ್ ಪ್ರಕರಣಗಳಿಗೆ ಹಾಗೂ ಶೇ.19ರಷ್ಟು ಕ್ಯಾನ್ಸರ್-ಸಂಬಂಧಿತ ಸಾವುಗಳಿಗೆ ಕಾರಣವಾಗಿದೆ.

ಶ್ವಾಸಕೋಶದ ಅತ್ಯಂತ ಪ್ರಮುಖ ರಿಸ್ಕ್ ಅಂಶವೆಂದರೆ ಧೂಮಪಾನ. ಶ್ವಾಸಕೋಶದ ಕ್ಯಾನ್ಸರ್ ಇತರೆ ತಂಬಾಕು ಉತ್ಪನ್ನಗಳಾದ ಸಿಗಾರ್ ಗಳು ಅಥವಾ ಪೈಪ್ ಗಳ ಬಳಕೆಯಿಂದಲೂ ಹೆಚ್ಚಾಗುತ್ತದೆ. ತಂಬಾಕು ಹೊಗೆಯಲ್ಲಿ 7,000 ಸಂಯುಕ್ತಗಳಿದ್ದು ಅವುಗಳಲ್ಲಿ ಹಲವು ವಿಷಕಾರಿಯಾಗಿವೆ.

ಈ ಕುರಿತು ಆಸ್ಟರ್ ಸಿಎಂಐ ಆಸ್ಪತ್ರೆಯ ಕನ್ಸಲ್ಟೆಂಟ್ ಮೆಡಿಕಲ್ ಆಂಕಾಲಜಿಸ್ಟ್ ಡಾ.ಆದಿತ್ಯ ಮುರಳಿ, ಎಂಡಿ ಡಿಎಂ, “ತಂಬಾಕು ಪ್ರತಿವರ್ಷ 8 ಮಿಲಿಯನ್ ಸಾವುಗಳಿಗೆ ಕಾರಣವಾಗುತ್ತದೆ. ಈ ವರ್ಷ ನಡೆಸಲಾದ ಅಧ್ಯಯನಗಳು ಧೂಮಪಾನ ಮಾಡದೇ ಇರುವವರಿಗೆ ಹೋಲಿಸಿದರೆ ಕೋವಿಡ್-19ರ ಗಂಭೀರ ರೋಗ ಅಭಿವೃದ್ಧಿಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತೋರಿಸಿವೆ. ಈ ವೈರಸ್ ಪ್ರಾಥಮಿಕವಾಗಿ ಶ್ವಾಸಕೋಶಕ್ಕೆ ದಾಳಿ ನಡೆಸುತ್ತದೆ ಮತ್ತು ಧೂಮಪಾನ
ಶ್ವಾಸಕೋಶವನ್ನು ದುರ್ಬಲಗೊಳಿಸುತ್ತದೆ, ಇದರಿಂದ ಕೋವಿಡ್ ಹಾಗೂ ಇತರೆ ರೋಗಗಳ ವಿರುದ್ಧ ಹೋರಾಟವನ್ನು ಕಠಿಣಗೊಳಿಸುತ್ತದೆ. ಧೂಮಪಾನವು ಹೃದಯರೋಗಗಳು, ಉಸಿರಾಟದ ರೋಗಗಳು, ಕ್ಯಾನ್ಸರ್ ಮತ್ತು ಮಧುಮೇಹ ಉಂಟು ಮಾಡಬಹುದಾಗಿದ್ದು ಇದರಿಂದ ಕೋವಿಡ್ ಅನ್ನು ಹೆಚ್ಚು ಅಪಾಯಕ್ಕೆ ಒಳಪಡಿಸುತ್ತದೆ” ಎಂದು ತಿಳಿಸಿದ್ದಾರೆ.

ಕೆ.ಎಸ್.ಹೆಗ್ಡೆ ಹಾಸ್ಪಿಟಲ್ ಮಂಗಳೂರಿನ ಕನ್ಸಲ್ಟೆಂಟ್ ಮೆಡಿಕಲ್ ಆಂಕಾಲಜಿಸ್ಟ್ ಡಾ.ವಿಜಿತ್ ಶೆಟ್ಟಿ, ಎಂಡಿ ಡಿಎಂ, “ಸಿಗರೇಟುಗಳು ಅಥವಾ ಧೂಮಪಾನದ ತಂಬಾಕು ಉತ್ಪನ್ನಗಳಿಗಿಂತ ತಂಬಾಕು ಸೇವನೆ ಸುರಕ್ಷಿತ ಎಂದು ಭಾವಿಸಲಾಗುತ್ತದೆ. ಆದಾಗ್ಯೂ, ತಂಬಾಕು ಜಗಿಯುವುದು ಬಾಯಿ ಕ್ಯಾನ್ಸರ್ ಗಳು ಮತ್ತು ಪೂರ್ವ ಕ್ಯಾನ್ಸರ್ ಗಳ ಅಭಿವೃದ್ಧಿಯ ರಿಸ್ಕ್ ಅಂಶವಾಗಿವೆ(ಕೆಲವು ಬದಲಾವಣೆಗಳಿಗೆ ಒಳಗಾದ ಅಸಹಜ ಜೀವಕೋಶಗಳು ಕ್ಯಾನ್ಸರ್ ಉಂಟು
ಮಾಡಬಲ್ಲವು). ತಂಬಾಕು ಜಗಿಯುವುದು ಕೂಡಾ ನಿಮ್ಮನ್ನು ಹೃದಯ ಸಂಬಂಧಿ ರೋಗಗಳು, ವಸಡಿನ ರೋಗ, ಹಲ್ಲಿನ ಕ್ಷಯ ಮತ್ತು ಹಲ್ಲುಗಳ ನಷ್ಟ ಉಂಟು ಮಾಡಬಲ್ಲದು” ಎಂದರು.

ಸಿಗರೇಟುಗಳನ್ನು ಸೇವನೆ ಮಾಡುವವರು ಶ್ವಾಸಕೋಶದ ಕ್ಯಾನ್ಸರ್ ಗೆ ಒಳಗಾಗುವ 15ರಿಂದ 30 ಪಟ್ಟು ಹೆಚ್ಚು ಸಾಧ್ಯತೆ ಇರುತ್ತದೆ ಅಥವಾ ಧೂಮಪಾನ ಮಾಡದೇ ಇರುವವರಿಗಿಂತ ಶ್ವಾಸಕೋಶ ಕ್ಯಾನ್ಸರ್ ನಿಂದ ಮರಣಿಸುವ ಸಂಭವನೀಯತೆ ಇರುತ್ತದೆ. ಶ್ವಾಸಕೋಶ ಕ್ಯಾನ್ಸರ್ ದಿನಕ್ಕೆ ಕೆಲವೇ ಸಿಗರೇಟುಗಳನ್ನು ಸೇದಿದರೂ ಅಥವಾ ಆಗಾಗ್ಗೆ ಸೇದಿದರೂ ಹೆಚ್ಚಾಗಬಹುದು. ವ್ಯಕ್ತಿ ಎಷ್ಟು ದೀರ್ಘಕಾಲ ಸಿಗರೇಟು ಸೇದುತ್ತಾನೆ ಮತ್ತು ದಿನಕ್ಕೆ ಎಷ್ಟು ಹೆಚ್ಚು ಸಿಗರೇಟುಗಳನ್ನು ಸೇದುತ್ತಾನೆ ಎನ್ನುವುದನ್ನು ಆಧರಿಸಿ ಅಪಾಯವೂ ಅಷ್ಟೇ ಹೆಚ್ಚಾಗಿರುತ್ತದೆ.

ಎಚ್ ಸಿಜಿ ಆಸ್ಪತ್ರೆ ಬೆಂಗಳೂರಿನ ಮೆಡಿಕಲ್ ಆಂಕಾಲಜಿಸ್ಟ್ ಡಾ.ಶ್ರೀನಿವಾಸ್ ಬಿ.ಜೆ., ಎಂಡಿ ಡಿಎನ್ ಬಿ, “ಧೂಮಪಾನವು ಧ್ವನಿಪೆಟ್ಟಿಗೆ, ಮೂತ್ರನಾಳ, ಮೂತ್ರಕೋಶ, ಗರ್ಭಗೊರಳು, ಅನ್ನನಾಳ, ಯಕೃತ್ತು, ಶ್ವಾಸಕೋಶ, ಮೇದೋಜಿರಕ ಗ್ರಂಥಿ, ಹೊಟ್ಟೆ, ಕರುಳು ಅಥವಾ ಗುದನಾಳ, ನಾಲಿಗೆ ಮತ್ತು ಟಾನ್ಸಿಲ್ ಗಳು ಮತ್ತಿತರ ದೇಹದ ಯಾವುದೇ ಭಾಗದಲ್ಲಿ ಕ್ಯಾನ್ಸರ್ ಉಂಟು ಮಾಡಬಹುದು. ಧೂಮಪಾನವು ಕ್ಯಾನ್ಸರ್ ಮತ್ತಿತರೆ  ರೋಗಗಳಿಗೆ ಒಳಗಾಗುವ ಸಾಧ್ಯತೆಗಳನ್ನು ಕೂಡಾ ಹೆಚ್ಚಿಸುತ್ತದೆ” ಎಂದರು.

ಇತರೆ ಪ್ರಮುಖ ತೊಂದರೆಯ ಅಂಶಗಳು ಹೀಗಿವೆ:
-ವಾಯು ಮಾಲಿನ್ಯ(ಕಲ್ಲಿದ್ದಲು ಸುಡುವುದು, ಮರ ಅಥವಾ ಘನ ಇಂಧನಗಳನ್ನು ಸುಡುವುದು)
-ತಂಬಾಕು ಸೇದುವುದು/ಧೂಮಪಾನಿಗಳ ಹೊಗೆ ಸೇವಿಸುವುದು(ಧೂಮಪಾನಿಗಳಿಗಿತ 20-50 ಪಟ್ಟು ಹೆಚ್ಚು ರಿಸ್ಕ್)
-ವೈದ್ಯಕೀಯ ಪರಿಸ್ಥಿತಿ(ಟ್ಯೂಬರ್ಕುಲೋಸಿಸ್ ಮತ್ತು ಸಿಒಪಿಡಿಯು ಶ್ವಾಸಕೋಶದ ಕ್ಯಾನ್ಸರ್ ರಿಸ್ಕ್ ಹೆಚ್ಚಿಸುತ್ತದೆ)
-ಕೌಟುಂಬಿಕ ಇತಿಹಾಸ(ಕೌಟುಂಬಿಕ ಇತಿಹಾಸವುಳ್ಳವರಿಗೆ ಹೆಚ್ಚಿನ ರಿಸ್ಕ್)
-ವೃತ್ತಿ ಸಂಬಂಧಿತ ಒಡ್ಡಿಕೊಳ್ಳುವಿಕೆ(ಆಸ್ಬೆಸ್ಟಾಸ್, ಸಿಲಿಕಾ, ಭಾರದ ಲೋಹಗಳು, ಪಾಲಿಸಿಸಿಲಿಕ್ ಆರೊಮ್ಯಾಟಿಕ್
ಹೈಡ್ರೊಕಾರ್ಬನ್ ಮತ್ತು ಡೀಸಲ್ ಎಕ್ಸಾಸ್ಟ್ ಉಸಿರು ಸೇವನೆ).

ಟಾಪ್ ನ್ಯೂಸ್

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.