ವುಹಾನ್‌: ಒಬ್ಬೊಬ್ಬರದ್ದೂ ಒಂದೊಂದು ಕಥೆ

ನವ ಜೀವನದ ನಿರೀಕ್ಷೆಯಲ್ಲಿ

Team Udayavani, Apr 26, 2020, 5:45 AM IST

ವುಹಾನ್‌: ಒಬ್ಬೊಬ್ಬರದ್ದೂ ಒಂದೊಂದು ಕಥೆ

ಸಾಂದರ್ಭಿಕ ಚಿತ್ರ

ವುಹಾನ್‌: ಈಗಿನ ಕೋವಿಡ್-19 ಉಗಮ ಸ್ಥಾನ ಎಂದೇ ಗುರುತಿಸಲಾದ ಚೀನದ ವುಹಾನ್‌ ನಗರದಲ್ಲಿ ಈಗ ನಿಧಾನವಾಗಿ ಜನಜೀವನ ಆರಂಭವಾಗುತ್ತಿದೆ. ಆದರೂ ಅಲ್ಲಿನ ವ್ಯಾಪಾರಿಗಳ ಸ್ಥಿತಿ ಅಯೋಮಯ.

ವುಹಾನ್‌ನಲ್ಲಿ ಸದ್ಯ ಲಾಕ್‌ಡೌನ್‌ ಹಿಂಪಡೆಯ ಲಾಗಿದ್ದರೂ ಎರಡನೇ ಹಂತದ ಕೋವಿಡ್-19 ಸೋಂಕಿನ ಭೀತಿಯಿಂದ ಜನಸಂಚಾರ ವಿರಳವಾಗಿದೆ. ವ್ಯಾಪಾರ, ಉದ್ಯೋಗ ಕ್ಷೇತ್ರ ತೀವ್ರ ಸಂಕಷ್ಟದಲ್ಲಿದೆ. ಅಲ್ಲಿನ ಪ್ರತಿಯೋರ್ವನದ್ದೂ ಒಂದೊಂದು ಕಥೆ.

ವಾಂಗ್‌ ಎಂಬವರು ವುಹಾನ್‌ನ ಖ್ಯಾತ ಹೊಟೇಲ್‌ ಉದ್ಯಮಿ. ಮೂರು ತಿಂಗಳ ಹಿಂದೆ ತನ್ನ ರೆಸ್ಟೋರೆಂಟ್‌ನ ಸಿಬಂದಿಗೆ ಚೀನದ ಹೊಸ ವರ್ಷ ಹಾಗೂ ತನ್ನ ಉದ್ಯಮ ಮೂರನೇ ವರ್ಷದ ಹಿನ್ನೆಲೆಯಲ್ಲಿ ಭರ್ಜರಿ ಬೋನಸ್‌ ನೀಡಿ ಸಂಭ್ರಮಿಸಿದ್ದರು. ಈಗ ಅವರ ಕಥೆಯೇ ಬೇರೆ.

ಕೋವಿಡ್-19 ಹಿನ್ನೆಲೆಯಲ್ಲಿ ಈ ನಗರ ಸುಮಾರು 76 ದಿನಗಳ ಲಾಕ್‌ಡೌನ್‌ನಲ್ಲಿದ್ದು ಈಗ ನಿಧಾನ ವಾಗಿ ಜೀವಕಳೆ ತುಂಬಿಸಿ ಕೊಳ್ಳು ತ್ತಿದೆ. ಆದರೆ ವ್ಯಾಪಾರಿಗಳು ಮಾನಸಿಕ ವಾಗಿ, ಆರ್ಥಿಕವಾಗಿ ತುಂಬಾ ಕುಗ್ಗಿ ಹೋಗಿದ್ದಾರೆ. ಅವರಲ್ಲಿ ಯಾವ ಲವಲವಿಕೆಯೂ ಕಂಡು ಬರುತ್ತಿಲ್ಲ.

ಎಪ್ರಿಲ್‌ 8ರಿಂದ ವುಹಾನ್‌ನಲ್ಲಿ ಲಾಕ್‌ಡೌನ್‌ ಹಿಂಪಡೆಯಲಾಗಿದೆ. ಆದರೆ ಎರಡು ವಾರ ಕಳೆದ ಬಳಿಕವೂ ವ್ಯಾಪಾರ ಸಂಸ್ಥೆಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಲು ಸರಕಾರ ಅನುಮತಿ ನೀಡಿಲ್ಲ. ಮೂರು ತಿಂಗಳಿನಿಂದ ವ್ಯಾಪಾರವಿಲ್ಲದ ಕಾರಣ ತಾನು ಸುಮಾರು 8,500 ಡಾಲರ್‌ (60,000 ಯಾನ್‌) ಬಾಡಿಗೆ ನೀಡಲು ಬಾಕಿಯಿದೆ. ಈಗ ಎರಡನೇ ಹಂತದ ಕೋವಿಡ್-19 ಸೋಂಕಿನ ಭೀತಿಯಿಂದ ಆರ್ಥಿಕ ಸಂಕಷ್ಟ ಹೆಚ್ಚಾಗಿದ್ದು, ಅಂಗಡಿಗಳನ್ನು ಮುಚ್ಚದೆ ಬೇರೆ ದಾರಿಯಿಲ್ಲ ಎಂದು ವಾಂಗ್‌ ಹೇಳುತ್ತಾರೆ.

ವಾಂಗ್‌ ಈಗ ಬೇರೆ ಉದ್ಯೋಗದ ಹುಡುಕಾಟ ದಲ್ಲಿದ್ದಾರೆ. ಆದರೆ ವುಹಾನ್‌ನಲ್ಲೆಲ್ಲೂ ಈಗ ಉದ್ಯೋಗವೇ ಸಿಗುತ್ತಿಲ್ಲವಂತೆ! ಅತ್ತ ವ್ಯಾಪಾರವೂ ಇಲ್ಲ, ಇತ್ತ ಉದ್ಯೋಗವೂ ಇಲ್ಲ. ಜೀವನ ನಡೆಸೋದು ಹೇಗೆ ಎಂಬ ದೊಡ್ಡ ಪ್ರಶ್ನೆಗೆ ಉತ್ತರವಿಲ್ಲದ ಉತ್ತರ ಹುಡುಕುತ್ತಿರುವವರೇ ಹೆಚ್ಚು.

ಇದು ಕೇವಲ ವಾಂಗ್‌ ಒಬ್ಬರ ಕಥೆಯಲ್ಲ. ಅಲ್ಲಿನ ಪ್ರತಿಯೋರ್ವ ವ್ಯಾಪಾರಿಯದ್ದೂ ಇದೇ ಕಥೆ. ವುಹಾನ್‌ ರಾಜಧಾನಿ ಹುಬೇ ಪ್ರಾಂತ್ಯದ ಈ ವರ್ಷದ ತ್ತೈಮಾಸಿಕ ಆರ್ಥಿಕತೆಯಲ್ಲಿ ಶೇ. 40ರಷ್ಟು ಇಳಿಕೆ ಯಾಗಿದೆ ಎಂದು ಸರಕಾರಿ ಏಜೆನ್ಸಿಗಳೇ ಹೇಳುತ್ತಿವೆ.

ಲಾಕ್‌ಡೌನ್‌, ಆರ್ಥಿಕ ನಷ್ಟ ಹಾಗೂ ಗೆಳೆಯರು, ಸಂಬಂಧಿಕರ ಸಾವಿ ನಿಂದ ಜರ್ಝರಿತರಾಗಿರುವ ಜನರು ಜೀವನೋತ್ಸಾಹವನ್ನು ಕಳೆದು ಕೊಂಡಿದ್ದಾರೆ. ತನ್ನ ಮೂವರು ಸಂಬಂಧಿ ಕರಿಗೆ ಕೋವಿಡ್-19 ಸೋಂಕಾಗಿದ್ದು, ಈ ಪೈಕಿ ಓರ್ವ ಸಾವಿಗೀಡಾಗಿದ್ದಾನೆ. ಆತನ ಅಂತ್ಯಕ್ರಿಯೆಯ ಅವಕಾಶವೂ ಸಿಕ್ಕಿಲ್ಲ ಎಂದು ವಾಂಗ್‌ ಹೇಳುತ್ತಾರೆ.

ಪ್ರಮುಖ ನಗರ
ಚೀನದ ಒಂದು ಪ್ರಮುಖ ಕೈಗಾರಿಕಾ ಮತ್ತು ಸಾರಿಗೆ ಹಬ್‌ ಆಗಿರುವ 11 ಮಿಲಿಯನ್‌ ಜನಸಂಖ್ಯೆ ಹೊಂದಿರುವ ವುಹಾನ್‌ ನಗರವು ಯಾಂಗೆl ನದಿ ತೀರದಲ್ಲಿದೆ. ಇಲ್ಲಿ ಜನವರಿ 23ರಿಂದ ಲಾಕ್‌ಡೌನ್‌ ಘೋಷಣೆಯಾದಾಗಿನಿಂದ ಎಲ್ಲ ವ್ಯವಹಾರಗಳೂ ಸ್ತಬ್ಧವಾಗಿವೆ. ಹುಬೇ ಪ್ರಾಂತ್ಯದಲ್ಲಿ ಕೊರೊನಾದಿಂದ 4,512 ಸಾವು ಸಂಭವಿಸಿದೆ.

ಲಾಕ್‌ಡೌನ್‌ ಹಿಂಪಡೆದ ಬಳಿಕ ಜನರು ಮನೆಯಿಂದ ಹೊರ ಬರುತ್ತಿದ್ದಾರೆ. ಆದರೆ ವ್ಯಾಪಾರ ಸಂಸ್ಥೆಗಳಿಗೆ ಕೆಲವು ನಿರ್ಬಂಧ ವಿಧಿಸಿರುವುದರಿಂದ ಹಿಂದಿನಂತೆ ವ್ಯಾಪಾರವಾಗುತ್ತಿಲ್ಲ. ಹೆಸರು ಬಹಿರಂಗ ಮಾಡಲಿಚ್ಛಿಸದ ವ್ಯಕ್ತಿಯೋರ್ವ ಎಲೆಕ್ಟ್ರಾನಿಕ್ಸ್‌ ಹಾಗೂ ಯಂತ್ರೋಪಕರಣಗಳ ವ್ಯಾಪಾರ ಮಾಡುತ್ತಿದ್ದು, ಆತನ ಸಂಸ್ಥೆಯ ಪರಿಸರವನ್ನು ವಾಹನ ನಿರ್ಬಂಧಿತ ಪ್ರದೇಶ ಎಂದು ಘೋಷಿಸಿರುವ ಕಾರಣ ಸರಿಯಾಗಿ ವ್ಯಾಪಾರವೇ ಆಗುತ್ತಿಲ್ಲ. ತಾನು ವಾರ್ಷಿಕ 24,000 ಡಾಲರ್‌ (1,70,000 ಯಾನ್‌) ಬಾಡಿಗೆ ನೀಡುತ್ತಿದ್ದೇನೆ. ಈ ರೀತಿ ಸಂಕಷ್ಟದಲ್ಲಿರುವ ಎಲ್ಲರಲ್ಲೂ ಆಕ್ರೋಶವಿದೆ. ಆದರೆ ಏನೂ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಹೇಳುತ್ತಿದ್ದಾನೆ. ನಾವು ಎಷ್ಟೆಲ್ಲ ಕಷ್ಟದಲ್ಲಿದ್ದರೂ ಸರಕಾರದ ಕಡೆಯಿಂದ ಯಾವುದೇ ಸಹಾಯ ಸಿಕ್ಕಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.

ಟಾಪ್ ನ್ಯೂಸ್

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ

Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

1—weqe

Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ

LGBTQ Couple anjali chakra sufi malik broke their marriage

Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್‌ ಸಲಿಂಗಿ ಜೋಡಿ ಬ್ರೇಕಪ್‌!

ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.