ಯಾದಗಿರಿ: ಸೋಂಕಿತರ ಸಂಖ್ಯೆ 916ಕ್ಕೆ ಏರಿಕೆ
ಸುರಪುರ ಸಾರಿಗೆ ಘಟಕದ ಚಾಲಕರಿಗೂ ಸೋಂಕು
Team Udayavani, Jun 26, 2020, 9:37 PM IST
ಯಾದಗಿರಿ: ಇಷ್ಟು ದಿನ ಮಹಾರಾಷ್ಟ್ರದ ಸಂಪರ್ಕದಿಂದ ಹರಡುತ್ತಿದ್ದ ಸೋಂಕು, ಇದೀಗ ಸೋಂಕಿತರ ಸಂಪರ್ಕದಿಂದಲೂ ಹಬ್ಬುತ್ತಿದೆ. ಜೂನ್ 19ರಂದು ಸುರಪುರ ಸಾರಿಗೆ ಘಟಕದ 31 ವರ್ಷದ ಚಾಲಕ ( ಪಿ-8228)ಗೆ ಆತನ ಪತ್ನಿಯಿಂದ ಸೋಂಕು ದೃಢವಾಗಿತ್ತು, ಅವರ ಸಂಪರ್ಕದಿಂದ ಈಗ ಸುರಪುರ ಸಾರಿಗೆ ಘಟಕದ ನಾಲ್ವರು ಸಿಬ್ಬಂದಿಗಳಲ್ಲಿ ಸೋಂಕು ಹರಡಿದೆ.
ಚಾಲಕನ ಸಂಪರ್ಕಕ್ಕೆ ಬಂದಿದ್ದ 8 ಜನರನ್ನು ಕ್ವಾರಂಟೈನ್ನಲ್ಲಿರಿಸಿ, ಘಟಕವನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಇದೀಗ ಸುರಪುರ ಬಸ್ ಡಿಪೋದ 58 ವರ್ಷದ ಪುರುಷ (ಪಿ-10657), 54 ವರ್ಷದ ಪುರುಷ (ಪಿ-10658), 44 ವರ್ಷದ ಪುರುಷ (ಪಿ-10659) ಹಾಗೂ 50 ವರ್ಷದ ಪುರುಷ (ಪಿ-10660)ಗೆ ಸೋಂಕು ದೃಢವಾಗಿದ್ದು ಆತಂಕಕ್ಕೆ ಕಾರಣವಾಗಿದೆ.
ಇನ್ನು ಶಹಾಪುರ ತಾಲೂಕಿನ ಹೋತಪೇಟ ಗ್ರಾಮದ 35 ವರ್ಷದ ಪುರುಷ (ಪಿ-10655), ಸುರಪುರ ತಾಲೂಕಿನ ಲಕ್ಷ್ಮೀ ದೇವಸ್ಥಾನ ಸಮೀಪದ 55 ವರ್ಷದ ಮಹಿಳೆ (ಪಿ-10656), ಹುಣಸಗಿ ಲಕ್ಷ್ಮೀ ದೇವಸ್ಥಾನ ಸಮೀಪದ 53 ವರ್ಷದ ಪುರುಷ (ಪಿ-10661) ಕೋವಿಡ್ 19 ಸೋಂಕಿಗೆ ತುತ್ತಾಗಿದ್ದಾರೆ. ಪ್ರಕರಣ ಸಂಖ್ಯೆ ಪಿ-10655 ಮತ್ತು ಪಿ-10656ರ ವ್ಯಕ್ತಿಗಳು ಮಹಾರಾಷ್ಟ್ರದ ಪುಣೆ ಹಾಗೂ ಮುಂಬಯಿನಿಂದ ಜಿಲ್ಲೆಗೆ ಹಿಂದಿರುಗಿದ್ದಾರೆ. ಪಿ-10661 ಐಎಲ್ಐ ಪ್ರಕರಣವಾಗಿದ್ದು ಒಟ್ಟು 7 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರ ಸಂಖ್ಯೆ916ಕ್ಕೆ ಏರಿಕೆಯಾಗಿದೆ.
70 ಜನ ಗುಣಮುಖ: ಜಿಲ್ಲೆಯಲ್ಲಿ ಕೋವಿಡ್-19 ಖಚಿತಪಟ್ಟ 916 ವ್ಯಕ್ತಿಗಳ ಪೈಕಿ ಶುಕ್ರವಾರ ಮತ್ತೆ 70 ಜನ ಸೇರಿ ಈವರೆಗೆ ಒಟ್ಟು 785 ಜನ ಗುಣಮುಖರಾಗಿದ್ದು ಉಳಿದ 130 ಪ್ರಕರಣಗಳು ಸಕ್ರಿಯವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ