ಉದಯವಾಣಿಗೆ “ಯೋಗ ಮೀಡಿಯಾ ಸಮ್ಮಾನ್”
Team Udayavani, Dec 27, 2019, 11:36 PM IST
ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವೇಳೆ “ಉದಯವಾಣಿ’ ನಡೆಸಿದ ಯೋಗ ಜಾಗೃತಿ ಅಭಿಯಾನ “ಯೋಗೋತ್ಸವ’ವನ್ನು ಗುರುತಿಸಿ ಕೇಂದ್ರ ಸರಕಾರ “ಮೀಡಿಯಾ ಸಮ್ಮಾನ್’ ಪ್ರಶಸ್ತಿ ಪ್ರಕಟಿಸಿದೆ.
ಮುದ್ರಣ ಮಾಧ್ಯಮ (ಕನ್ನಡ) ವಿಭಾಗದಲ್ಲಿ ಈ ಪ್ರಶಸ್ತಿ ಲಭಿಸಿದೆ. ಉದಯವಾಣಿ ಜೂನ್ 14ರಿಂದ 22ರ ತನಕ ಈ ಅಭಿಯಾನವನ್ನು ನಡೆಸಿದ್ದು, ಇದರಡಿ ಯೋಗಗುರುಗಳು ಹಾಗೂ ಯೋಗತಜ್ಞರ ಲೇಖನಗಳನ್ನು ಪ್ರಕಟಿಸಿತ್ತು. 2020ರ ಜನವರಿ 7ರಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾಬ್ಡೇಕರ್ ಅವರು ದಿಲ್ಲಿಯಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.