ಪೇಜಾವರ ವಿಶೇಷ: ಒಂದೆರಡು ವರ್ಷದಲ್ಲಿ ನಾಲ್ಕು ಶಾಲೆಗಳಿಗೆ ಹೋಗಿದ್ದ ವೆಂಕಟ್ರಾಮು  


Team Udayavani, Dec 29, 2019, 10:19 AM IST

young

ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪೂರ್ವಾಶ್ರಮದ ಹೆಸರು ವೆಂಕಟರಮಣ. ತಾಯಿ ಕರೆಯುತ್ತಿದ್ದ ಮುದ್ದಿನ ಹೆಸರು ವೆಂಕಟ್ರಾಮು. ಇದುವೇ ವೆಂಕಟರಾಮ ಆದದ್ದೂ ಇದೆ. ಸುಬ್ರಹ್ಮಣ್ಯ ಸಮೀಪ ಪುತ್ತೂರು ತಾಲೂಕು ವ್ಯಾಪ್ತಿಯ ರಾಮಕುಂಜದಲ್ಲಿ 1931ರ ಎಪ್ರಿಲ್ 27ರಂದು ಎಂ. ನಾರಾಯಣಾಚಾರ್ಯ ಮತ್ತು ಕಮಲಮ್ಮ ದಂಪತಿಗೆ ವೆಂಕಟ್ರಾಮು ಜನಿಸಿದ.

ನಾರಾಯಣಾಚಾರ್ಯರಿಗೆ ಒಟ್ಟು ಆರು ಮಂದಿ ಮಕ್ಕಳು, ಮೂವರು ಪುತ್ರರು, ಮೂವರು ಪುತ್ರಿಯರು. ಮೂವರು ಪುತ್ರರಲ್ಲಿ ಹಿರಿಯವನೇ ವೆಂಕಟ್ರಾಮು.

ನಾರಾಯಣಾಚಾರ್ಯ ತಮ್ಮ ನರಸಿಂಹ ಆಚಾರ್ಯ ಉಡುಪಿ ಪೇಜಾವರ ಮಠದಲ್ಲಿ ಮೆನೇಜರ್ ಆಗಿದ್ದರು. ಈ ಕಾರಣದಿಂದ ನಾರಾಯಣಾಚಾರ್ಯರು ಉಡುಪಿಗೂ ಬಂದು ಹೋಗುತ್ತಿದ್ದರು. ಆ ಕಾಲದಲ್ಲಿ ಬದುಕೆಂದರೆ ಊಟವೇ ದೊಡ್ಡ ಖರ್ಚಿನ ಬಾಬ್ತು. ನಾರಾಯಣಾಚಾರ್ಯರು ತಲಕಾವೇರಿಗೆ ಸೀಸನ್ನಲ್ಲಿ ಕೆಲಸಕ್ಕೆಂದು ಹೋಗುತ್ತಿದ್ದರು. ಆಗ ಒಂದೂರಿನಿಂದ ಇನ್ನೊಂದೂರಿಗೆ ಹೊಗುವುದೆಂದರೆ ಸಂಸಾರ ಸಮೇತ ಹೋಗುವ ಕ್ರಮವಿತ್ತು. ತಂದೆ ತಾಯಿಗಳ ಜತೆಗೆ ವೆಂಕಟ್ರಾಮುವೂ ಬರುತ್ತಿದ್ದ.

ಕಮಲಮ್ಮನ ತವರೂರು ಕಾಣಿಯೂರು ಬಳಿಯ ತುಂಬೆಯಲ್ಲಿ. ಅಲ್ಲಿಗೂ ವೆಂಕಟ್ರಾಮು ಹೋಗುತ್ತಿದ್ದ. ಆಗಿನ ಶಾಲಾ ಶಿಕ್ಷಣವೆಂದರೆ ಹೋದಲ್ಲಿ ಆ ಊರಿನ ಶಾಲೆಗೆ ಹೋಗುವುದು ಕ್ರಮ. ತಾಯಿ ಮನೆಗೆ ಹೋದಾಗ ಬೆಳಂದೂರು ಶಾಲೆ, ರಾಮಕುಂಜದಲ್ಲಿದ್ದಾಗ ನೇರಂಕಿ ಶಾಲೆ, ಕೆಲವು ವೇಳೆ ರಾಮಕುಂಜದ ಸಂಸ್ಕೃತ ಶಾಲೆ, ಉಡುಪಿಗೆ ಬಂದಾಗ ಈಗ ನಗರಸಭೆ ಎದುರು ಇರುವ ಮಹಾತ್ಮಾ ಗಾಂಧಿ ಸ.ಹಿ.ಪ್ರಾ. ಶಾಲೆ ಹೀಗೆ ಒಂದೋ ಎರಡೋ ತರಗತಿಗೆಂದು ಹೋದದ್ದು ಸುಮಾರು ನಾಲ್ಕು ಶಾಲೆಗಳಿಗೆ. ಅನಂತರ ಅದೇ ಶ್ರೀವಿಶ್ವೇಶ ತೀರ್ಥರು ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ನಡೆಸುವ ಶಾಲಾ ಕಾಲೇಜುಗಳನ್ನು, ಬಡಮಕ್ಕಳಿಗೆ ಉಚಿತ ಊಟ, ವಸತಿ ಕೊಡುವ ಹಾಸ್ಟೆಲ್ಗಳನ್ನು ನಡೆಸುವ ಸಾಮರ್ಥ್ಯ ಪಡೆದರು.

ಟಾಪ್ ನ್ಯೂಸ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ve-46

ರಾಜಕಾರಣ- ಭ್ರಷ್ಟಾಚಾರ- ಸ್ವರ್ಗ- ಪರಿಸರ- ಪುಣ್ಯ…

ve-44

ರಥಬೀದಿ, ಪೇಜಾವರ ಮಠದಲ್ಲಿ ನೀರವ ಮೌನ

ve-47

ರಾಮ-ವಿಠಲ, ಶ್ರೀಕೃಷ್ಣ, ರಾಮಲಲ್ಲಾ…

bg-68

ಪೇಜಾವರ ಶ್ರೀ ಬದುಕಿನ ಸಾರ

kolar-tdy-1

ದಲಿತ ಕೇರಿಗೆ ಭೇಟಿ ನೀಡಿದ್ದ ಪೇಜಾವರ ಶ್ರೀ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.