“ಗೆಣ್ಗ್ ಬೇಸೂಕ್‌ಬಂದದ್ದಾ?’: ಜಿ.ಪಂ. ಸಭೆಯಲ್ಲಿ ಆಕ್ರೋಶ


Team Udayavani, Apr 6, 2021, 2:30 AM IST

“ಗೆಣ್ಗ್ ಬೇಸೂಕ್‌ಬಂದದ್ದಾ?’: ಜಿ.ಪಂ. ಸಭೆಯಲ್ಲಿ ಆಕ್ರೋಶ

ಉಡುಪಿ: ಸಿದ್ದಾಪುರ ಜಿ.ಪಂ. ಕ್ಷೇತ್ರ ವ್ಯಾಪ್ತಿಯ ಕೊರಗ ಸಮುದಾಯದವರ ಕಾಲನಿಯ ಬಾವಿ ನಿರ್ಮಾಣಕ್ಕೆ ಸಂಬಂಧಿಸಿ ಗುತ್ತಿಗೆದಾರರಿಗೆ ಹಣ ಪಾವತಿ ಮಾಡದ ವಿಷಯ ಚರ್ಚೆಗೆ ಬಂದಾಗ ಸಂಬಂಧಪಟ್ಟ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆಯವರು ತನಿಖೆಗೆ ಬಂದುದನ್ನು ಉಲ್ಲೇಖೀಸಿ, “ಅವರು ವರದಿ ನೀಡಲಿಲ್ಲ’ ಎಂದರು. ಹಾಗಿದ್ದರೆ “ಅವರು ಗೆಣ್ಗ್ ಬೇಸೂಕ್‌ ಬಂದದ್ದಾ?’ (ಕುಂದಾಪುರ ಕನ್ನಡದಲ್ಲಿ ಗೆಣಗು, ಗೆಣ್ಗ್= ಗೆಣಸು) ಎಂದು ಸದಸ್ಯ ರೋಹಿತ್‌ಕುಮಾರ್‌ ಶೆಟ್ಟಿ ಪ್ರಶ್ನಿಸಿದರು.

“ಹಾಗೆಲ್ಲ ಮಾತನಾಡುವುದು ಸರಿಯಲ್ಲ’ ಎಂದು ಸಿಇಒ ಡಾ| ನವೀನ್‌ ಭಟ್‌ ಕಿವಿಮಾತು ಹೇಳಿದರು.
ಸೋಮವಾರ ಜಿ.ಪಂ. ಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅವರ ಅಧ್ಯಕ್ಷತೆಯಲ್ಲಿ ಈ ಅವಧಿಯ ಕೊನೆಯ ಸಾಮಾನ್ಯ ಸಭೆ ನಡೆದಾಗ, ಬಿಸಿ ಬಿಸಿ ಚರ್ಚೆ ನಡೆಯಿತು.

ನೀರಿನ ಪ್ರಮಾಣ ಕಡಿಮೆ ಇದ್ದರೆ ಗುತ್ತಿಗೆದಾರರು ಹೊಣೆಯೆ?
ಬೇಸಗೆಯಲ್ಲಿ ನೀರು ಕಡಿಮೆಯಾಗುವುದು ಸಹಜ. ಕೆಲಸ ಆಗದೆ ಇದ್ದರೆ, ಕಳಪೆ ಕಾಮಗಾರಿಯಾಗಿದ್ದರೆ ಪಾವತಿಸುವುದು ಬೇಡ. ಬಂದ ಸಿಮೆಂಟ್‌ನ್ನು ಮಾರುವು ದಿಲ್ವಾ ಎಂದು ಸ್ಥಾಯೀ ಸಮಿತಿ ಅಧ್ಯಕ್ಷ ಪ್ರತಾಪ ಹೆಗ್ಡೆ ಮಾರಾಳಿ ಪ್ರಶ್ನಿಸಿದರು.

ಅಧಿಕಾರಿಗಳಿಗೆ ತರಾಟೆ
ಕೆಆರ್‌ಡಿಎಲ್‌, ಸಣ್ಣ ನೀರಾವರಿ ಇಲಾಖೆಯಿಂದ ಆಗುವ ಕಾಮಗಾರಿ ವೈಖರಿಗೆ ಬಾಬು ಶೆಟ್ಟಿ, ಉದಯ ಕೋಟ್ಯಾನ್‌ ಮತ್ತಿತರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಣ್ಣ ನೀರಾವರಿ ಇಲಾಖೆ ಯಿಂದ ಹೊಗೆ ತೆಗೆದು ಮಾರಾಟ ಮಾಡಲಾಗುತ್ತಿದೆ ವಿನಾ ಏಲಂ ಹಾಕಿ ಮಾರುವ ಕ್ರಮವಿಲ್ಲ. ಟೆಂಡರ್‌ಗಳು ಬೆಂಗಳೂರಿನಲ್ಲಿ ಆಗುತ್ತದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಆದ ಕಾಮಗಾರಿಗಳಿಗೆ ಪಿಡಿಒ ಪ್ರಮಾಣಪತ್ರ ಬೇಕಾಗಿಲ್ಲ. ಕಾಮಗಾರಿಹಸ್ತಾಂತರವೂ ಆಗುವುದಿಲ್ಲ ಎಂದು ಬಾಬು ಶೆಟ್ಟಿ, ಉದಯ ಕೋಟ್ಯಾನ್‌ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಹತ್ತು ದಿನಗಳಲ್ಲಿ ನನಗೆ ಎಲ್ಲ ಕಾಮಗಾರಿಗಳ ಪಟ್ಟಿ ಬರಬೇಕು, ಗ್ರಾ.ಪಂ. ಪಿಡಿಒಗಳ ಪ್ರಮಾಣ
ಪತ್ರ ಬೇಕು ಎಂದು ಸಿಇಒ ತಿಳಿಸಿದರು.

ಕಡಿಮೆ ಮೊತ್ತ-ಕಳಪೆ ಕೆಲಸ
ಶೇ.40ಕ್ಕಿಂತ ಕಡಿಮೆ ಹಣವನ್ನು ತೋರಿಸಿ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ. ಇಂತಹವರನ್ನು ಕಪ್ಪು ಪಟ್ಟಿಗೆ ಸೇರಿಸುವುದು ಅಷ್ಟಕ್ಕಷ್ಟೆ. ಆದರೆ ಇವರಿಗೆ ಹಣ ಪಾವತಿಸಿದರೆ ಎಂಜಿನಿಯರರೇ ಹೊಣೆ ಹೊರಬೇಕು. ಉಪ್ಪೂರು, ಹಾವಂಜೆಯಲ್ಲಿ ಹೀಗೆ ಆಗಿದೆ ಎಂದು ಸದಸ್ಯ ಜನಾರ್ದನ ತೋನ್ಸೆ ಎಚ್ಚರಿಸಿದರು. ಇಂತಹವರು ಮತ್ತೆ ಕಾಮಗಾರಿ ಕ್ಷೇತ್ರಕ್ಕೆ ಬರುವುದೇ ಬೇಡ ಎಂದು ಪ್ರತಾಪ್‌ ಹೆಗ್ಡೆ ಆಗ್ರಹಿಸಿದರು. “ಮೇಲೆ ರಿಂಗ್‌ ತೋರುತ್ತದೆ. ಆಳವಿರುವುದಿಲ್ಲ. ಇಂತಹ ಕಾಮಗಾರಿ ಕಂಡಾಗ ತಡೆ ಹಿಡಿದಿದ್ದೇನೆ. ಇದನ್ನೂ ತನಿಖೆ ನಡೆಸಿ ತಪ್ಪಿದ್ದರೆ ಟೆಂಡರ್‌ ರದ್ದುಪಡಿಸಿ ಕಪ್ಪು ಪಟ್ಟಿಗೆ ಸೇರಿಸಲು ಶಿಫಾರಸು ಮಾಡುತ್ತೇನೆ’ ಎಂದು ಸಿಇಒ ಭರವಸೆ ನೀಡಿದರು.

ಪರಿಹಾರ ಪಾವತಿಗೆ ಅದಾಲತ್‌
ಕಲ್ಯಾಣಪುರ, ಕೆಮ್ಮಣ್ಣಿನಲ್ಲಿ ತಾಂತ್ರಿಕ ಸಮಸ್ಯೆಯಿಂದ ಪ್ರವಾಹಪೀಡಿತರಿಗೆ ಹಣ ಪಾವತಿ ಆಗಲಿಲ್ಲ ಎಂದು ಜನಾರ್ದನ ತೋನ್ಸೆ ಹೇಳಿದರು. 38 ಮಂದಿಗೆ ಇಂತಹ ಸಮಸ್ಯೆಯಾಗಿದ್ದು ವಾರದೊಳಗೆ ಸರಿ ಪಡಿಸುವುದಾಗಿ ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌ ತಿಳಿಸಿದರು. ಮುಂದಿನ ವಾರ ಲೀಡ್‌ ಡಿಸ್ಟ್ರಿಕ್ಟ್ ಮ್ಯಾನೇಜರ್‌ ಸಹಕಾರದಲ್ಲಿ ಅದಾಲತ್‌ ಏರ್ಪಡಿಸಿ ಸಮಸ್ಯೆ ಸರಿಪಡಿಸಲು ಸಿಇಒ ಸೂಚಿಸಿದರು.

ವನ್ಯಜೀವಿಗಳಿಂದ ತೊಂದರೆ
ಹಾವಂಜೆ, ಉಪ್ಪೂರಿನಲ್ಲಿ ಮಂಗಗಳು, ಚಿರತೆ, ಕಾಡು ಹಂದಿ ಸಮಸ್ಯೆಯಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಜನಾರ್ದನ ತೋನ್ಸೆ ಹೇಳಿದಾಗ, ಹಣ್ಣಿನ ಗಿಡಗಳನ್ನು ಕಾಡಿನಲ್ಲಿ ಬೆಳೆಸುತ್ತಿದ್ದೇವೆ. ಇದರಿಂದ ಮಂಗಗಳ ಸಮಸ್ಯೆ ಬಗೆಹರಿಯ ಬಹುದು. ಉಳಿದಂತೆ ಐದು ವರ್ಷಗಳಲ್ಲಿ ಚಿರತೆಯೂ ಸೇರಿದಂತೆ ವನ್ಯಪ್ರಾಣಿಗಳ ಸಂಖ್ಯೆ ಹೆಚ್ಚಿದೆ. ಬೆಳೆ ಹಾನಿ ಉಂಟಾದವರಿಗೆ 25 ಲ.ರೂ. ಪರಿಹಾರ ನೀಡಲಾಗಿದೆ ಎಂದು ಅರಣ್ಯ ಇಲಾಖೆಯ ಡಿಎಫ್ಒ ಆಶೀಶ್‌ ರೆಡ್ಡಿ ಹೇಳಿದರು.

ತಪ್ಪಿತಸ್ಥರ ವಿರುದ್ಧ ಕ್ರಮ
ಕೊಕ್ಕರ್ಣೆ ಸಮೀಪದ ಕೋಟಂಬೈಲಿ ನಲ್ಲಿ ಕಳಪೆ ಕಾಮಗಾರಿ ಮಾಡಿದವರ ಮೇಲೆ ಕ್ರಮ ಕೈಗೊಂಡಿಲ್ಲ. ಇದು ಲೋಕಾಯುಕ್ತರಿಂದ ತನಿಖೆ ನಡೆಸ ಬೇಕಾದ ಪ್ರಕರಣ ಎಂದು ಜನಾರ್ದನ ತೋನ್ಸೆ ಗಮನ ಸೆಳೆದರು. “ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರಕ್ಕೆ ಬರೆದುಕೊಳ್ಳಲಾಗಿದೆ. ಅವರ ವಿರುದ್ಧ ಕ್ರಮ ನಡೆಯುತ್ತದೆ ಎಂಬ ವಿಶ್ವಾಸವಿದೆ’ ಎಂದು ಅಧ್ಯಕ್ಷರು ಉತ್ತರಿಸಿದರು. “ಜಿ.ಪಂ. ಅಧ್ಯಕ್ಷರು, ಸಿಇಒ ಅವರಿಗೆ ತನಿಖೆ ನಡೆಸುವ ಅಧಿಕಾರವಿದೆ, ಕ್ರಮ ಕೈಗೊಳ್ಳುವುದು ಸರಕಾರದಿಂದ ಆಗಬೇಕಾಗಿದೆ. ವಾರಾಹಿ ನೀರಾವರಿ ನಿಗಮದಿಂದ ಆದ ಕಾಮಗಾರಿ ಇದಾಗಿದ್ದು ತನಿಖೆಗೆ ಸರಕಾರದಿಂದ ಸೂಚನೆ ಬಂದಿದೆ’ ಎಂದು ಸಿಇಒ ಹೇಳಿದರು.

ಪರದಾಟ
ಪರವಾನಿಗೆದಾರ ಸರ್ವೆಯರ್‌ಗಳು ಮುಷ್ಕರ ಹೂಡಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಸ್ಥಾಯೀ ಸಮಿತಿ ಅಧ್ಯಕ್ಷ ಸುಮಿತ್‌ ಶೆಟ್ಟಿ ಕಳವಳ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಜ. 16ರಿಂದ 51 ಲೈಸನ್ಸ್‌ ಸರ್ವೆಯರುಗಳು ವಿವಿಧ ಬೇಡಿಕೆ ಮುಂದಿಟ್ಟು ಮುಷ್ಕರ ಹೂಡಿದ್ದಾರೆ. 3,426 ಅರ್ಜಿಗಳಲ್ಲಿ 1,220 ಅರ್ಜಿ ವಿಲೇವಾರಿ ಆಗಿದೆ.
ಒಟ್ಟು 10,000 ಅರ್ಜಿಗಳು ಬಾಕಿ ಇದೆ. ಸರಕಾರಿ ಸರ್ವೆಯರ್‌ ಗಳು 33 ಮಂದಿ ಇದ್ದಾರೆ. ಎ. 7ರಿಂದ ಕೆಲಸಕ್ಕೆ ಹಾಜ ರಾಗುವುದಾಗಿ ಮುಷ್ಕರನಿರತರು ಹೇಳಿದ್ದಾರೆ. ರಾಜ್ಯದಲ್ಲಿ 2,000 ಹೊಸ ಸರ್ವೆಯರುಗಳ ನೇಮಕ ಆಗುತ್ತಿದೆ. ಇವರಿಗೆ ಕಡಿಮೆ ಸಮಯದ ಅಗತ್ಯ ತರಬೇತಿ ಕೊಟ್ಟು ನೇಮಕಾತಿ ಮಾಡುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದರು.

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.

ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.