ಪಣಂಬೂರು : ಮೀನುಗಾರಿಕಾ ದೋಣಿ ದುರಂತ ಪ್ರಕರಣ ; ಮೂವರ ಮೃತದೇಹ ಪತ್ತೆ
Team Udayavani, Apr 16, 2021, 10:48 PM IST
ಪಣಂಬೂರು : ಏಪ್ರಿಲ್ 13ರಂದು ನವಮಂಗಳೂರು ಬಂದರಿಂದ 43ನಾ.ಮೈಲ್ ದೂರದಲ್ಲಿ ನಡೆದ ಮೀನುಗಾರಿಕಾ ದೋಣಿ ಅವಘಡದಲ್ಲಿ ನಾಪತ್ತೆಯಾದ ಮೀನುಗಾರರ ಪತ್ತೆಗೆ ಶೋಧಕಾರ್ಯ ಮುಂದುವರಿದ್ದು ಶುಕ್ರವಾರ ಮೂವರ ಮೃತದೇಹವನ್ನು ನೌಕಾಪಡೆ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದೆ.
ನೌಕಾಪಡೆ,ಕೋಸ್ಟ್ಗಾರ್ಡ್ ಹಾಗೂ ಕೇರಳದ ಮುಳುಗು ತಜ್ಞರ ಪಡೆ ಮುಳುಗಡೆಯಾದ ದೋಣಿ ಹಾಗೂ ಸಮುದ್ರದಾಳದಲ್ಲಿ ನಿರಂತರವಾಗಿ ಶೋಧ ಮುಂದುವರಿಸಿತ್ತು. ಈ ಸಂದರ್ಭ ದೋಣಿ ಸಮೀಪವೇ ಮೂವರ ಮೃತದೇಹಗಳು ಪತ್ತೆಯಾಗಿವೆ. ಮೃತದೇಹವನ್ನು ಮಂಗಳೂರಿಗೆ ತರಲಾಗುತ್ತಿದ್ದು ಕೋಸ್ಟಲ್ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ. ಆ ಬಳಿಕ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ :ಹೆಚ್ಚುತ್ತಿರುವ ಕೋವಿಡ್ ಪ್ರಕರಣ : ರಾಜ್ಯ ಸರಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ