ಫಕಾರ್ ಜಮಾನ್: ಏಕದಿನ ಪಂದ್ಯದ ಚೇಸಿಂಗ್ ವೇಳೆ ಅತ್ಯಧಿಕ ರನ್
Team Udayavani, Apr 5, 2021, 11:20 PM IST
ಜೊಹಾನ್ಸ್ಬರ್ಗ್: ಪಾಕಿಸ್ಥಾನದ ಎಡಗೈ ಆರಂಭಕಾರ ಫಕಾರ್ ಜಮಾನ್ ಏಕದಿನ ಚೇಸಿಂಗ್ ವೇಳೆ ಅತ್ಯಧಿಕ ರನ್ ಬಾರಿಸಿದ ದಾಖಲೆ ಬರೆದರು. ರವಿವಾರ ನಡೆದ ದಕ್ಷಿಣ ಆಫ್ರಿಕಾ ಎದುರಿನ ದ್ವಿತೀಯ ಏಕದಿನ ಪಂದ್ಯದ ವೇಳೆ 193 ರನ್ ಬಾರಿಸುವ ಮೂಲಕ ಅವರು ಶೇನ್ ವಾಟ್ಸನ್ ದಾಖಲೆ ಮುರಿದರು.
ಶೇನ್ ವಾಟ್ಸನ್ 2011ರಲ್ಲಿ ಬಾಂಗ್ಲಾದೇಶ ವಿರುದ್ಧ ಅಜೇಯ 185 ರನ್ ಬಾರಿಸಿದ್ದು ಚೇಸಿಂಗ್ ವೇಳೆ ದಾಖಲಾದ ಅತ್ಯಧಿಕ ವೈಯಕ್ತಿಕ ಗಳಿಕೆಯಾಗಿತ್ತು. ಎಂ.ಎಸ್. ಧೋನಿ (ಅಜೇಯ 183), ಕೊಹ್ಲಿ (183) ಉಳಿದಿಬ್ಬರು ಸಾಧಕರು.
ಫಕಾರ್ ಜಮಾನ್ ಸಾಹಸದ ಹೊರತಾಗಿಯೂ ಪಾಕಿಸ್ಥಾನ ಈ ಪಂದ್ಯದಲ್ಲಿ ಸೋಲನುಭವಿಸಿತು. ಹೀಗಾಗಿ ಅವರು ಪರಾಜಿತ ತಂಡದ ಪರ ಎರಡನೇ ಅತ್ಯಧಿಕ ರನ್ ಹೊಡೆದವರ ಯಾದಿಯಲ್ಲಿ ಕಾಣಿಸಿಕೊಂಡರು. ಬಾಂಗ್ಲಾದೇಶ ವಿರುದ್ಧ ಜಿಂಬಾಬ್ವೆಯ ಚಾರ್ಲ್ಸ್ ಕೊವೆಂಟ್ರಿ 194 ರನ್ ಬಾರಿಸಿದ್ದು ದಾಖಲೆ.
ದ. ಆಫ್ರಿಕಾದಲ್ಲಿ ಅತ್ಯಧಿಕ ಗಳಿಕೆ
ಫಕಾರ್ ಜಮಾನ್ ಅವರ 193 ರನ್ ಸಾಧನೆ ದಕ್ಷಿಣ ಆಫ್ರಿಕಾ ನೆಲದಲ್ಲಿ ದಾಖಲಾದ ಕ್ರಿಕೆಟಿಗನೊಬ್ಬನ ಅತ್ಯಧಿಕ ವೈಯಕ್ತಿಕ ಗಳಿಕೆಯಾಗಿದೆ. 2017ರಲ್ಲಿ ಲಂಕಾ ವಿರುದ್ಧ 185 ರನ್ ಬಾರಿಸಿದ ಫಾ ಡು ಪ್ಲೆಸಿಸ್ ದಾಖಲೆ ಪತನಗೊಂಡಿತು.
ಇದನ್ನೂ ಓದಿ :ರಮೇಶ್ ಜಾರಕಿಹೊಳಿಗೆ ಕೋವಿಡ್ ಬಂದಿರುವುದು ಅನುಮಾನ: ವಕೀಲ ಜಗದೀಶ್
ಡಿ ಕಾಕ್ ವರ್ತನೆಗೆ ಟೀಕೆ
ಈ ಪಂದ್ಯದ ವೇಳೆ ಫಕಾರ್ ಜಮಾನ್ ರನೌಟ್ ಆದ ರೀತಿ ವಿವಾದಕ್ಕೆ ಕಾರಣವಾಗಿದೆ. ದ.ಆಫ್ರಿಕಾ ಕೀಪರ್ ಕ್ವಿಂಟನ್ ಡಿ ಕಾಕ್ ಉದ್ದೇಶಪೂರ್ವಕವಾಗಿ ಜಮಾನ್ ಗಮನವನ್ನು ವಿಚಲಿತಗೊಳಿಸಿ ರನೌಟ್ ಆಗಲು ಕಾರಣರಾದರು ಎನ್ನುವುದು ಆರೋಪ.
ಅಂತಿಮ ಓವರ್ನ ಮೊದಲ ಎಸೆತವನ್ನು ಫಕಾರ್ ಲಾಂಗ್ಆಫ್ಗೆ ಬಡಿದಟ್ಟಿ ಎರಡನೇ ರನ್ ಪೂರೈಸಲು ಓಡಿದರು. ಈ ವೇಳೆ ಡಿ ಕಾಕ್, ಚೆಂಡನ್ನು ಇನ್ನೊಂದು ತುದಿಯತ್ತ ಎಸೆಯಲಾಗುತ್ತಿದೆ ಎಂದು ಪದೇ ಪದೇ ಹೇಳುತ್ತ ಜಮಾನ್ ಅವರನ್ನು ವಿಚಲಿತಗೊಳಿಸಿದರು. ಇದರಿಂದ ಹಿಂದೆ ತಿರುಗಿ ನೋಡಿದ ಜಮಾನ್ ಓಟವನ್ನು ನಿಧಾನಗೊಳಿಸಿದರು. ಮಾರ್ಕ್ರಮ್ ಎಸೆದ ಚೆಂಡು ನೇರವಾಗಿ ವಿಕೆಟ್ಗೆ ಅಪ್ಪಳಿಸಿತು. ಜಮಾನ್ ರನೌಟಾದರು!
45.1.1ರ ನಿಯಮದನ್ವಯ ಯಾವುದೇ ಕ್ಷೇತ್ರರಕ್ಷಕ, ಬ್ಯಾಟ್ಸ್ಮನ್ ಗಮನವನ್ನು ಉದ್ದೇಶಪೂರ್ವಕವಾಗಿ ಸೆಳೆದರೆ, ಅಡ್ಡಿ ಮಾಡಿದರೆ ಅದನ್ನು ತಪ್ಪೆಂದು ಪರಿಗಣಿಸಲಾಗುತ್ತದೆ. ಆಗ ಬ್ಯಾಟ್ಸ್ಮನ್ ನಾಟೌಟ್ ಆಗುತ್ತಾನೆ, ಹಾಗೆಯೇ ತಂಡಕ್ಕೆ 5 ರನ್ಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil