ಉಡುಪಿ ಜಿಲ್ಲೆಗೆ 5 ಲಕ್ಷ ಡೋಸ್ನಷ್ಟು ಲಸಿಕೆ ಆವಶ್ಯಕತೆ
Team Udayavani, May 8, 2021, 8:54 PM IST
ಉಡುಪಿ : ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 1,94,788 ಮಂದಿ ಮೊದಲ ಬಾರಿಗೆ ಹಾಗೂ 56,836 ಮಂದಿ ಎರಡನೇ ಬಾರಿಗೆ ಲಸಿಕೆ ಹಾಕಿಸಿಕೊಂಡಿದ್ದಾರೆ. ಅವಧಿ ಆದ 40 ಸಾವಿರ ಮಂದಿ ಹಾಗೂ ಅವಧಿ ಮೀರಿದ 10 ಸಾವಿರ ಮಂದಿ ಇನ್ನಷ್ಟೇ ಲಸಿಕೆ ಪಡೆದುಕೊಳ್ಳಬೇಕಿದೆ. ಈ ಪೈಕಿ 18,500 ಮಂದಿ ಕೋವ್ಯಾಕ್ಸಿನ್ ಹಾಗೂ 21,500 ಮಂದಿ ಕೋವಿಶೀಲ್ಡ್ ಪಡೆಯಲು ಬಾಕಿ ಉಳಿದಿದ್ದಾರೆ.
ಜಿಲ್ಲೆಗೆ 18 ವರ್ಷದ ಮೇಲ್ಪಟ್ಟವರನ್ನು ಸೇರಿಸಿದರೆ 4ರಿಂದ 5 ಲಕ್ಷ ಡೋಸ್ ಲಸಿಕೆ ಬೇಕಾಗುತ್ತದೆ. ಪ್ರಸ್ತುತ ಇರುವ 45 ವರ್ಷ ಮೇಲ್ಪಟ್ಟ ಸುಮಾರು 1.5 ಲಕ್ಷ ಮಂದಿ ಮೊದಲ ಡೋಸ್ ಪಡೆಯಲು ಬಾಕಿ ಉಳಿದಿದ್ದಾರೆ.
1 ಆಯಿಲ್ನಲ್ಲಿ 10 ಡೋಸ್ ಲಸಿಕೆ ಇರಲಿದ್ದು, ಜನ ಪೂರ್ಣ ಪ್ರಮಾಣದಲ್ಲಿ ಆಗಮಿಸದಿದ್ದರೆ ಲಸಿಕೆ ವ್ಯರ್ಥವಾಗುವ ಸಾಧ್ಯತೆಗಳೂ ಇವೆ.
ಇದನ್ನೂ ಓದಿ :ಅಫ್ಘಾನಿಸ್ತಾನ : ಶಾಲೆ ಬಳಿ ಬಾಂಬ್ ಸ್ಫೋಟ : 25 ಜನರ ದುರ್ಮರಣ
ಸದ್ಯಕ್ಕೆ ಲಸಿಕೆ ಇಲ್ಲ
ಜಿಲ್ಲೆಯಲ್ಲಿ 500ರಿಂದ 2000 ಡೋಸ್ಗಳಷ್ಟು ಲಸಿಕೆ ಬರುತ್ತಿದ್ದು, ಇದನ್ನು ಆದ್ಯತೆಯ ಮೇರೆಗೆ ಬಾಕಿ ಉಳಿದವರಿಗೆ ನೀಡಲಾಗುತ್ತದೆ. ಜಿಲ್ಲೆಯ 73 ಕೇಂದ್ರಗಳಲ್ಲಿ ಲಸಿಕೆ ನೀಡುವ ವ್ಯವಸ್ಥೆ ಇದ್ದರೂ ಸದ್ಯಕ್ಕೆ ಲಸಿಕೆ ಎಲ್ಲಿಯೂ ಲಭ್ಯವಿಲ್ಲ ಎನ್ನುತ್ತಾರೆ ವೈದ್ಯಾಧಿಕಾರಿಗಳು.
ಪ್ರಥಮ ಡೋಸ್ ಸದ್ಯಕ್ಕೆ ಬೇಡ
ವಿನಾ ಕಾರಣ ಲಸಿಕಾ ಕೇಂದ್ರಕ್ಕೆ ಆಗಮಿಸಿ ಲಸಿಕೆ ಪಡೆದುಕೊಳ್ಳುವ ಅವಶ್ಯಕತೆ ಇಲ್ಲ. ಲಸಿಕೆಯ ಅಭಾವ ಇರುವ ಕಾರಣ ಎರಡನೇ ಬಾರಿಗೆ ಹಾಕಲು ಬಾಕಿಯಿರುವವರಿಗೆ ಮಾತ್ರ ಈಗ ನೀಡಲಾಗುತ್ತದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಎರಡನೆಯ ಡೋಸ್ ತೆಗೆದುಕೊಳ್ಳುವವರಿಗೆ ಬರುತ್ತಿರುವ ವ್ಯಾಕ್ಸಿನ್ ಕೊಡಲಾಗುತ್ತಿದೆ. ವ್ಯಾಕ್ಸಿನ್ ಪೂರೈಕೆಯಾಗುತ್ತಿದ್ದಂತೆ ಮಾಧ್ಯಮದಲ್ಲಿ ಪ್ರಕಟಿಸಿ ವಿತರಿಸಲಿದ್ದೇವೆ. ಆಗ ಸಾರ್ವಜನಿಕರು ಬಂದು ಸ್ವೀಕರಿಸಬೇಕು. ಈಗ ಪೂರೈಕೆ ಇಲ್ಲದ ಕಾರಣ ಲಸಿಕೆ ಕೇಂದ್ರಕ್ಕೆ ಅನಗತ್ಯವಾಗಿ ಬಂದು ಸರತಿ ಸಾಲಿನಲ್ಲಿ ನಿಲ್ಲುವುದು ಬೇಡ. ಸರಕಾರ ಪತ್ರಕರ್ತರನ್ನು ಮುಂಚೂಣಿ ಕಾರ್ಯಕರ್ತರೆಂದು ಘೋಷಿಸಿದೆ. ಆದರೆ ಸರಕಾರದ ಆದೇಶ ಬಂದಿಲ್ಲ. ಬಂದ ಬಳಿಕ ಪತ್ರಕರ್ತರಿಗೂ ಆದ್ಯತೆಯಲ್ಲಿ ವ್ಯಾಕ್ಸಿನ್ ನೀಡುತ್ತೇವೆ.
– ಜಿ.ಜಗದೀಶ್, ಜಿಲ್ಲಾಧಿಕಾರಿಗಳು, ಉಡುಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
Udupi; ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ತಯಾರಿ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ