ರಾಜ್ಯದಲ್ಲಿ 679ಮಂದಿಗೆ ಸೋಂಕು ದೃಢ: 21ಸಾವು
Team Udayavani, Feb 21, 2022, 9:45 PM IST
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ತೀವ್ರ ಇಳಿಮುಖಗೊಂಡಿದ್ದು, ಸೋಮವಾರ ಪರೀಕ್ಷೆಗೆ ಒಳಪಡಿಸಲಾದ 52,505 ಮಂದಿಯಲ್ಲಿ 679ಮಂದಿಯಲ್ಲಿ ಸೋಂಕು ದೃಢವಾಗಿದೆ.
ರಾಜ್ಯದಲ್ಲಿ 2021ರ ಡಿ.30ರಂದು 707 ಮಂದಿ ಸೋಂಕಿಗೆ ತುತ್ತಾಗಿದ್ದು, ಅನಂತರ ಹಂತ ಹಂತವಾಗಿ ಸೋಂಕಿತ ಸಂಖ್ಯೆ ಏರಿಕೆಯಾಗಿ ದಿನವೊಂದಕ್ಕೆ ಸೋಂಕಿತರ ಸಂಖ್ಯೆ 70,000 ಸಮೀಪ ತಲುಪಿತ್ತು. ಇದೀಗ ಸುಮಾರು 52ದಿನಗಳ ಬಳಿಕ ಕೋವಿಡ್ ಸೋಂಕು ಕನಿಷ್ಠ ಸಂಖ್ಯೆ ತಲುಪಿದೆ. 1,932ಮಂದಿ ಆಸ್ಪತ್ರೆ ಹಾಗೂ ಮನೆಯಿಂದ ಚಿಕಿತ್ಸೆ ಪಡೆದು ಗುಣಮುಖ ಹೊಂದಿದ್ದಾರೆ. ಆ ಮೂಲಕ ಪಾಸಿಟಿವಿಟಿ ಸಂಖ್ಯೆ ಶೇ.1.29ಗೆ ಹಾಗೂ ಸಕ್ರಿಯ ಪ್ರಕರಣ 11,360ಕ್ಕೆ ಇಳಿಕೆಯಾಗಿದೆ.
ಬೆಂಗಳೂರು ನಗರ 346, ಶಿವಮೊಗ್ಗ 34,ಬಳ್ಳಾರಿ 31, ಕೊಡಗು 28, ಮೈಸೂರು 26, ಹಾಸನ 21, ಉಡುಪಿ 21, ತುಮಕೂರು 20, ಚಿತ್ರದುರ್ಗ 16, ದಕ್ಷಿಣ ಕನ್ನಡ 15, ರಾಮನಗರ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ 12, ಕಲಬುರಗಿ ಹಾಗೂ ಬೆಳಗಾವಿ 11, ಚಾಮರಾಜನಗರ 9, ಚಿಕ್ಕಮಗಳೂರು 8, ದಾವಣಗೆರೆ, ಧಾರವಾಡ ಹಾಗೂ ಮಂಡ್ಯ ಜಿಲ್ಲೆಯಲ್ಲಿ ತಲಾ 7,ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯಲ್ಲಿ ತಲಾ 6, ಬಾಗಲಕೋಟೆ 5, ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ತಲಾ 4, ಬೀದರ್ ಹಾಗೂ ವಿಜಯಪುರ 3, ಗದಗ ಹಾಗೂ ಕೋಲಾರ ತಲಾ 2, ಹಾವೇರಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ತಲಾ ಒಬ್ಬರಲ್ಲಿ ಸೋಂಕು ದೃಢಗೊಂಡಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ 21 ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ. ಬೆಂಗಳೂರು ನಗರ 8,ಬಳ್ಳಾರಿ 4, ದ.ಕ. ಹಾಗೂ ಧಾರವಾಡ 2, ವಿಜಯಪುರ, ಶಿವಮೊಗ್ಗ, ಕೊಡಗು, ಕಲಬುರಗಿ ಹಾಗೂ ಹಾವೇರಿ ಜಿಲ್ಲೆಯಲ್ಲಿ ತಲಾ ಒಂದು ಮರಣ ಪ್ರಕರಣ ದಾಖಲಾಗಿದೆ. ಮರಣ ಪ್ರಮಾಣ ಶೇ.3.9ರಷ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ