ಕೇವಲ 30 ನಿಮಿಷಗಳ ಅಂತರದಲ್ಲಿ ಎರಡು ಡೋಸ್ ಲಸಿಕೆ ಪಡೆದ ಕೇರಳದ 84 ವರ್ಷದ ವೃದ್ದೆ
Team Udayavani, Sep 18, 2021, 5:00 PM IST
ತಿರುವನಂತಪುರಂ : ಮೊದಲ ಡೋಸ್ ಕೋವಿಡ್ ಲಸಿಕೆ ಪಡೆಯಲು ಹೋದ 84 ವರ್ಷದ ವೃದ್ಧೆಗೆ ಕೇವಲ 30 ನಿಮಿಷಗಳ ಅಂತರದಲ್ಲಿ ಎರಡು ಡೋಸ್ ಲಸಿಕೆ ನೀಡಿದ ಘಟನೆಯೊಂದು ಕೇರಳದಲ್ಲಿ ನಡೆದಿದೆ.
ಈ ಘಟನೆ ನಡೆದಿರುವುದು ಕೇರಳದ ಎರ್ನಾಕುಲಂ ಜಿಲ್ಲೆಯ ಅಲುವಾದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ.
ಘಟನೆಯ ವಿವರ :
ಎರ್ನಾಕುಲಂ ಜಿಲ್ಲೆಯ ತಂದಮ್ಮ ಪಪ್ಪು ಎಂಬ 84 ವರ್ಷದ ವೃದ್ದೆ ಕೋವಿಡ್ ಮೊದಲ ಲಸಿಕೆ ಪಡೆಯಲೆಂದು ತನ್ನ ಮಗನೊಂದಿಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದಿದ್ದಾರೆ, ಈ ವೇಳೆ ಲಸಿಕಾ ಕೇಂದ್ರದಲ್ಲಿ ಲಸಿಕೆ ಕೊಡುವ ಮೊದಲು ನಡೆಯುವ ಎಲ್ಲ ಪ್ರಕ್ರೀಯೆಗಳನ್ನು ನಡೆಸಿ ಲಸಿಕೆ ಪಡೆಯಲು ಕೊಠಡಿಗೆ ಕಳುಹಿಸಿದ್ದಾರೆ. ಅಲ್ಲಿರುವ ಸಿಬ್ಬಂದಿಗಳು ವೃದ್ಧೆಗೆ ಲಸಿಕೆ ನೀಡಿ 30 ನಿಮಿಷಗಳ ಕಾಲ ವಿಶ್ರಾಂತಿ ಕೊಠಡಿಯಲ್ಲಿ ತಂಗಲು ಹೇಳಿದ್ದಾರೆ ಅವರ ಹೇಳಿಕೆಯಂತೆ ವೃದ್ದೆ ವಿಶ್ರಾಂತಿ ಕೊಠಡಿಯಲ್ಲಿ 30 ನಿಮಿಷ ಇದ್ದು ಬಳಿಕ ಮಗನನೊಂದಿಗೆ ಮನೆಗೆ ತೆರಳುತ್ತಿದ್ದ ವೇಳೆ ವೃದ್ದೆ ಲಸಿಕೆ ಪಡೆದ ಕೊಠಡಿಯ ಬಳಿ ಪಾದರಕ್ಷೆಯನ್ನು ಬಿಟ್ಟು ಬಂದಿರುವುದು ಗಮನಕ್ಕೆ ಬಂದಿದೆ. ಈ ವೇಳೆ ವೃದ್ದೆ ಮಗನಲ್ಲಿ ನಾನು ಪಾದರಕ್ಷೆ ಬಿಟ್ಟು ಬಂದಿದ್ದೇನೆ ಹೋಗಿ ತರುತ್ತೇನೆಂದು ಲಸಿಕಾ ಕೊಠಡಿಯ ಬಳಿ ಬಂದ ವೃದ್ದೆ ಪಾದರಕ್ಷೆ ಹಾಕುತ್ತಿದ್ದ ವೇಳೆ ಕೊಠಡಿಯ ಒಳಗಿದ್ದ ಅರೋಗ್ಯ ಸಿಬ್ಬಂದಿ ವೃದ್ದೆ ಲಸಿಕೆ ಪಡೆಯಲು ಬಂದಿದ್ದಾರೆ ಎಂದುಕೊಂಡು ಪಾದರಕ್ಷೆ ಬಿಟ್ಟು ಒಳಗೆ ಬನ್ನಿ ಎಂದು ಕರೆದಿದ್ದಾರೆ.
ಇದನ್ನೂ ಓದಿ :ಚುನಾವಣೆಗೂ ಮುನ್ನವೇ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಕ್ಯಾಪ್ಟನ್ ಅಮರಿಂದರ್ ರಾಜೀನಾಮೆ
ಅರೋಗ್ಯ ಸಿಬ್ಬಂದಿ ಕರೆದರೆಂದು ಕೊಠಡಿಯ ಒಳಗೆ ಹೋದ ವೃದ್ಧೆಯನ್ನು ಸಿಬ್ಬಂದಿಗಳು ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಏನೋ ಹೇಳಲು ಕರೆದಿದ್ದಾರೆ ಎಂದು ಕುರ್ಚಿಯಲ್ಲಿ ಕುಳಿತ ವೃದ್ಧೆಗೆ ಇನ್ನೋರ್ವ ಅರೋಗ್ಯ ಸಿಬ್ಬಂದಿ ಬಂದು ಲಸಿಕೆ ನೀಡಿದ್ದಾರೆ, ಅಷ್ಟೋತ್ತಿಗೆ ವೃದ್ದೆ ನಾನೂ ಈಗಾಗಲೇ ಲಸಿಕೆ ಪಡೆದಾಗಿದೆ ಎಂದು ಸಿಬ್ಬಂದಿಗೆ ತಿಳಿಸಿದ್ದಾರೆ. ವಿಚಾರ ಗೊತ್ತಾದ ಬಳಿಕ ಅರೋಗ್ಯ ಸಿಬ್ಬಂದಿಗಳು ವೃದ್ಧೆಯನ್ನು ಒಂದು ಗಂಟೆಗಳ ಕಾಲ ತಪಾಸಣೆ ನಡೆಸಿ ಯಾವುದೇ ತೊಂದರೆ ಇಲ್ಲ ಎಂದು ಗೊತ್ತಾದ ಬಳಿಕ ಮನೆಗೆ ಕಳುಹಿಸಿದ್ದಾರೆ.
ಅಚಾತುರ್ಯದಿಂದ ಆದ ಘಟನೆಯಿಂದ ಭೀತಿಗೊಂಡ ಅರೋಗ್ಯ ಸಿಬ್ಬಂದಿಗಳು ಪ್ರತಿ ಗಂಟೆಗೊಮ್ಮೆ ವೃದ್ಧೆಯ ಅರೋಗ್ಯ ವಿಚಾರಿಸಿಕೊಳ್ಳುತ್ತಿದ್ದಾರೆ, ಅದೃಷ್ಟವಶಾತ್ ವೃದ್ದೆಯ ಆರೋಗ್ಯ ಉತ್ತಮವಾಗಿದ್ದು ನಾನು ಆರೋಗ್ಯವಾಗಿ ಇದ್ದೇನೆ ತಂದಮ್ಮ ಪಪ್ಪು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ