ಆಂಧ್ರಪ್ರದೇಶ: ಸ್ಯಾನಿಟೈಸರ್ ಜತೆ ನೀರು ಬೆರೆಸಿ ಕುಡಿದು ಹತ್ತು ಮಂದಿ ಸಾವು!
ಸ್ಯಾನಿಟೈಸರ್ ನಲ್ಲಿ ಬೇರೆ ಯಾವುದಾದರು ವಿಷ ಪದಾರ್ಥ ಸೇರಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ
Team Udayavani, Jul 31, 2020, 3:18 PM IST
ಅಮರಾವತಿ(ಹೈದರಾಬಾದ್): ಸ್ಯಾನಿಟೈಸರ್ ಅನ್ನು ನೀರಿನ ಜತೆ ಬೆರೆಸಿ ಕುಡಿದ ಪರಿಣಾಮ ಹತ್ತು ಮಂದಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಶನಿವಾರ(ಜುಲೈ31-2020) ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಸ್ಯಾನಿಟೈಸರ್ ಅನ್ನು ಇವರು ನೀರು ಮತ್ತು ಸಾಫ್ಟ್ ಡ್ರಿಂಕ್ಸ್ ಜತೆ ಬೆರೆಸಿ ಕುಡಿಯುತ್ತಿದ್ದರು ಎಂದು ಪ್ರಕಾಶಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಕೌಶಲ್ ತಿಳಿಸಿದ್ದಾರೆ.
ಸ್ಯಾನಿಟೈಸರ್ ನಲ್ಲಿ ಬೇರೆ ಯಾವುದಾದರು ವಿಷ ಪದಾರ್ಥ ಸೇರಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ, ಕುಟುಂಬದ ಸದಸ್ಯರು ಹೇಳುವ ಪ್ರಕಾರ, ಕಳೆದ ಹತ್ತು ದಿನಗಳಿಂದ ಅವರೆಲ್ಲಾ ಸ್ಯಾನಿಟೈಸರ್ ಕುಡಿಯುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಪ್ರಕಾಶಂ ಜಿಲ್ಲೆಯ ಕುರಿಚೇಡು ಪ್ರದೇಶದಲ್ಲಿ ಕೋವಿಡ್ 19 ಸೋಂಕು ಹೆಚ್ಚಳವಾಗಿದ್ದರಿಂದ ಇಲ್ಲಿನ ಅಂಗಡಿ, ಮುಂಗಟ್ಟು, ಮದ್ಯದಂಗಡಿಗಳು ಕಳೆದ ಕೆಲವು ದಿನಗಳಿಂದ ಬಂದ್ ಆಗಿದ್ದವು. ಸ್ಯಾನಿಟೈಸರ್ ನಲ್ಲಿ ಅಲ್ಕೋಹಾಲ್ ಕಂಟೆಂಟ್ ಇರುತ್ತದೆ ಎಂಬ ಕಾರಣದಿಂದ ಅದಕ್ಕೆ ನೀರು ಬೆರೆಸಿ ಕುಡಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ