8 ರಾಜ್ಯಗಳಲ್ಲಿ ಶೇ.90 ಕೋವಿಡ್-19 ಪ್ರಕರಣ
ಹೆಚ್ಚು ಸಾವು ಸಂಭವಿಸಿದ ಜಿಲ್ಲೆ : ಬೆಂ.ನಗರ, ಬೀದರ್ಗೆ ಸ್ಥಾನ
Team Udayavani, Jul 9, 2020, 6:30 AM IST
ಹೊಸದಿಲ್ಲಿ: ದೇಶದ ಒಟ್ಟಾರೆ ಸೋಂಕುಪೀಡಿತರ ಪೈಕಿ ಶೇ.90ರಷ್ಟು ಪ್ರಕರಣಗಳು ಕರ್ನಾಟಕ ಸಹಿತ ಎಂಟು ರಾಜ್ಯಗಳಿಗೆ ಸೀಮಿತವಾಗಿವೆ ಎಂದು ಕೋವಿಡ್ ಸೋಂಕಿಗೆ ಸಂಬಂಧಿಸಿ ರಚಿಸಲಾದ ಸಚಿವರ ಸಮಿತಿ ಮಾಹಿತಿ ನೀಡಿದೆ.
ಸಾವಿನ ಲೆಕ್ಕಾಚಾರದಲ್ಲಿ ಶೇ. 80 ಪ್ರಕರಣಗಳು ದೇಶದ 32 ಜಿಲ್ಲೆಗಳಲ್ಲಿ ಕಂಡುಬಂದಿದ್ದು ,ಇದರಲ್ಲಿ ಬೆಂಗಳೂರು ನಗರ, ಬೀದರ್ ಜಿಲ್ಲೆಗಳು ಸೇರಿವೆ ಎಂದು ಈ ಸಮಿತಿ ಹೇಳಿದೆ. ಜತೆಗೆ ದೇಶದಲ್ಲಿ ಕೋವಿಡ್ ಸಾಮುದಾಯಿಕವಾಗಿ ಇನ್ನೂ ವ್ಯಾಪಿಸಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಸಚಿವ ಹರ್ಷವರ್ಧನ್ ನೇತೃತ್ವದಲ್ಲಿ ಗುರುವಾರ ನಡೆದ ಸಚಿವರ ಸಮಿತಿ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ. ಮಹಾರಾಷ್ಟ್ರ, ತಮಿಳುನಾಡು, ದಿಲ್ಲಿ, ಕರ್ನಾಟಕ, ತೆಲಂಗಾಣ ಸಹಿತ ಒಟ್ಟು 8 ರಾಜ್ಯಗಳಲ್ಲಿ ಶೇ.90ರಷ್ಟು ಸೋಂಕುಪೀಡಿತರಿದ್ದು, ಶೇ.80ರಷ್ಟು ಸಕ್ರಿಯ ಪ್ರಕರಣಗಳು 49 ಜಿಲ್ಲೆಗಳಿಗೆ ಸೀಮಿತವಾಗಿವೆ. ಇದೇ ರೀತಿ ಈವರೆಗೆ ಮೃತ ಪಟ್ಟವರ ಪೈಕಿ ಶೇ.86ರಷ್ಟು ಮಂದಿ ಮಹಾರಾಷ್ಟ್ರ, ದಿಲ್ಲಿ, ಗುಜರಾತ್, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪ. ಬಂಗಾಲಗಳಿಗೆ ಸೇರಿದವರು. ಶೇ.80ರಷ್ಟು ಮೃತರು ಈ ರಾಜ್ಯಗಳ 32 ಜಿಲ್ಲೆಗಳಿಗೆ ಸೇರಿ ದವರು. ಕರ್ನಾಟಕದಲ್ಲಿ ಬೆಂಗಳೂರು ನಗರ ಮತ್ತು ಬೀದರ್ ಈ 32 ಜಿಲ್ಲೆಗಳ ಯಾದಿಯಲ್ಲಿ ಸೇರಿವೆ ಎಂದು ಸಮಿತಿ ತಿಳಿಸಿದೆ.
ಸೋಂಕಿನ ವ್ಯಾಪಿಸುವಿಕೆಗೆ ಕಡಿವಾಣ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕೈಗೊಂಡಿರುವ ಕ್ರಮಗಳ ಕುರಿತಾಗಿ ಸಭೆಯಲ್ಲಿ ವಿವರಣೆ ನೀಡಲಾಗಿದೆ.
ಮತ್ತೊಂದು ಗರಿಷ್ಠ ದಾಖಲೆ
ಕೋವಿಡ್ ವಿಚಾರದಲ್ಲಿ ದೇಶವು ಮತ್ತೊಂದು ದೈನಂದಿನ ಗರಿಷ್ಠ ದಾಖಲೆ ಕಂಡಿದ್ದು, ಒಂದೇ ದಿನ 24,879 ಮಂದಿಗೆ ಸೋಂಕು ದೃಢಪಟ್ಟಿದೆ. ಬುಧವಾರ ಬೆಳಗ್ಗೆ 8ರಿಂದ ಗುರುವಾರ ಬೆಳಗ್ಗೆ 8ರ ವರೆಗಿನ ಅವಧಿಯಲ್ಲಿ ಇಷ್ಟು ಮಂದಿಗೆ ಸೋಂಕು ತಗಲಿದ್ದು, 487 ಮಂದಿ ಸಾವಿಗೀಡಾಗಿದ್ದಾರೆ. ಗುಣಮುಖ ಪ್ರಮಾಣ ಶೇ.62.08ಕ್ಕೆ ಏರಿದ್ದು, ಈವರೆಗೆ 4.67 ಲಕ್ಷಕ್ಕೂ ಹೆಚ್ಚು ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. 24 ತಾಸುಗಳಲ್ಲಿ ಮೃತಪಟ್ಟ ಈ 487 ಮಂದಿಯ ಪೈಕಿ 198 ಮಂದಿ ಮಹಾರಾಷ್ಟ್ರ, 64 ಮಂದಿ ತಮಿಳುನಾಡು ಮತ್ತು 54 ಮಂದಿ ಕರ್ನಾಟಕಕ್ಕೆ ಸೇರಿದವರು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಚೇತರಿಕೆ ಮಟ್ಟ ಶೇ.62ಕ್ಕೆ
ಕೋವಿಡ್ ಏರುತ್ತಿರುವ ನಡುವೆ ದೇಶದಲ್ಲಿ ಶೇ. 62.09 ಮಂದಿ ಚೇತರಿಸಿ ಕೊಂಡಿದ್ದಾರೆ ಎಂದು ಕೇಂದ್ರ ಸರಕಾರ ಮಾಹಿತಿ ನೀಡಿದೆ. ದೇಶ ದಲ್ಲಿ 7.72 ಲಕ್ಷ ಪ್ರಕರಣಗಳು ದಾಖಲಾಗಿದ್ದರೆ ಇದ ರಲ್ಲಿ 4.78 ಲಕ್ಷ ಮಂದಿ ಗುಣ ಹೊಂದಿದ್ದಾರೆ. 2.72 ಲಕ್ಷ ಮಂದಿ ಚಿಕಿತ್ಸೆ ಪಡೆಯುತ್ತಿ ದ್ದಾರೆ. 21 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ದಲ್ಲಿ ಚೇತರಿಕೆಯೇ ಹೆಚ್ಚಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ