ಮಕ್ಕಳನ್ನು ಬಾವಿಗೆ ನೂಕಿ ಹತ್ಯೆಗೈದ ಹೆತ್ತ ತಾಯಿ
Team Udayavani, Jan 21, 2022, 1:00 PM IST
ಅಫಜಲಪುರ: ಒಂದೂವರೆ ವರ್ಷ ಹಾಗೂ ಎರಡು ವರ್ಷ ಮೂರು ತಿಂಗಳ ಮಕ್ಕಳನ್ನು ತಾಯಿಯೇ ಬಾವಿಗೆ ತಳ್ಳಿ ನಂತರ ಶವಗಳನ್ನು ಹೂತು ಹಾಕಿದ ಘಟನೆ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ನಡೆದಿದೆ.
ಭಾಗಮ್ಮ ಭೂತಾಳಿ ಮಕ್ಕಳನ್ನು ಕೊಲೆ ಮಾಡಿದ ಆರೋಪಿತಳು. ಈ ಸಂಬಂಧ ಈಕೆ ಪತಿ ಭೂತಾಳಿ ದೇವಲಗಾಣಗಾಪುರದಲ್ಲಿ ದೂರು ದಾಖಲಿಸಿದ್ದಾರೆ.
ಕಳೆದ ನಾಲ್ಕು ವರ್ಷದ ಹಿಂದೆ ಭಾಗಮ್ಮನ ಜತೆ ಮದುವೆಯಾಗಿತ್ತು. ಹೊಟ್ಟೆಪಾಡಿಗಾಗಿ ಹುಟ್ಟೂರು ಕೆಕ್ಕರಸಾವಳಗಿ ಬಿಟ್ಟು ಬೆಂಗಳೂರಿಗೆ ಹೋಗಿ ಎರಡು ತಿಂಗಳ ಹಿಂದಷ್ಟೆ ಮರಳಿ ಪತ್ನಿ ತವರೂರಾದ ದೇಸಾಯಿ ಕಲ್ಲೂರಿನಲ್ಲಿ ವಾಸವಾಗಿದ್ದೆವು. ಮನೆಯಲ್ಲಿ ಮೇಲಿಂದ ಮೇಲೆ ಸಣ್ಣಪುಟ್ಟ ಜಗಳ ಆಗುತ್ತಿತ್ತು. ಕಳೆದ ಜ. 19ರಂದು ಬೆಳಗ್ಗೆ ಹೊಲಕ್ಕೆ ಕೂಲಿ ಕೆಲಸಕ್ಕೆ ಹೋಗಿ ಮಧ್ಯಾಹ್ನ ಮನೆಗೆ ಬಂದಾಗ ಮಕ್ಕಳು ಇರಲಿಲ್ಲ.
ಗಾಬರಿಯಾಗಿ ಎಲ್ಲೆಡೆ ವಿಚಾರಿಸಿದಾಗ ಗ್ರಾಮದ ಬಾವಿಯ ಬಳಿಯಲ್ಲಿ ಎರಡು ಮಕ್ಕಳನ್ನು ಮಹಿಳೆಯೊಬ್ಬಳು ತಳ್ಳಿ ತಾನೂ ಬಿದ್ದಿದ್ದಾಳೆ ಎಂದು ಎಂದು ತಿಳಿಯಿತು. ಓಡಿ ಹೋಗಿ ನೋಡಿದಾಗ ಮಕ್ಕಳನ್ನು ಬಾವಿಗೆ ತಳ್ಳಿ ತನ್ನ ಪತ್ನಿ ದಡದಲ್ಲಿ ನಿಂತಿದ್ದಳು. ನಾನು ಮೂರ್ಛೆಹೋದೆ. ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ನನ್ನ ಪತ್ನಿ ಮಕ್ಕಳನ್ನು ಹೂತು ಹಾಕಿದ್ದಳು. ಇದಕ್ಕೆ ಸಹಕಾರ ನೀಡಿದವರ ವಿರುದ್ಧವೂ ಕಠಿಣ ಶಿಕ್ಷೆ ನೀಡಬೇಕು ಎಂದು ದೂರಿನಲ್ಲಿ ದಾಖಲಿಸಿದ್ದೇನೆ ಎಂದು ಪತಿ ಭೂತಾಳಿ ತಿಳಿಸಿದ್ದಾನೆ.
ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ಐ ರಾಜಶೇಖರ ರಾಠೊಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
MUST WATCH
ಹೊಸ ಸೇರ್ಪಡೆ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ